ಪೆಟ್ರೋಲ್ ಅಳತೆಯಲ್ಲಿ ಮೋಸ
ಪೆಟ್ರೋಲ್ ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪÜದ ಹಿಂದೂಸ್ಥಾನ್ ಪೆಟ್ರೋಲಿಯಂಗೆ ಸೇರಿದ ಅಡಾಕ್ ಬಂಕ್ನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಬಂದ್ ಮಾಡಿಸಿದರು.
Vijaya Karnataka 10 Aug 2018, 5:00 am
ಚಿಕ್ಕಮಗಳೂರು : ಪೆಟ್ರೋಲ್ ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪÜದ ಹಿಂದೂಸ್ಥಾನ್ ಪೆಟ್ರೋಲಿಯಂಗೆ ಸೇರಿದ ಅಡಾಕ್ ಬಂಕ್ನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಬಂದ್ ಮಾಡಿಸಿದರು.
ಈ ಹಿಂದೆ ಉಷಾ ಸರ್ವಿಸ್ ಸ್ಟೇಷನ್ ಹೆಸರಿನಲ್ಲಿ ನಡೆಯುತ್ತಿದ್ದ ಈ ಬಂಕ್ನ್ನು ನ್ಯಾಯಾಲಯದಲ್ಲಿದ್ದ ವಿವಾದ ಬಗೆಹರಿದ ನಂತರ ಶಾಹಿದ್ ಅಲಿ ಎಂಬುವವರು ವಹಿಸಿಕೊಂಡಿದ್ದು, ಅವರ ಸಂಬಂಧಿ ಮುಸಾಫಿರ್ ಎಂಬುವವರು ನಡೆಸುತ್ತಿದ್ದರು.ಗುರುವಾರ ಬೆಳಗ್ಗೆ ನಗರದ ರಾಮನಹಳ್ಳಿ ನಿವಾಸಿ ಶಿವರಾಜ್ ಎಂಬುವವರು ಬಂಕ್ನಲ್ಲಿ ತಮ್ಮ ಬೈಕ್ಗೆ 100 ರೂ.ನ ಪೆಟ್ರೋಲ್ ಹಾಕಿಸಿದ್ದರು. ಈ ವೇಳೆ ಅಳತೆಯಲ್ಲಿ ಮೋಸ ಆಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೆಲಸಗಾರನನ್ನು ಪ್ರಶ್ನಿಸಿದ್ದರು. ಪರಸ್ಪರ ಮಾತಿನ ಚಕಮಕಿ ನಡೆದು ಕೊನೆಗೆ ಸ್ಥಳದಲ್ಲೇ ಬೈಕ್ನಲ್ಲಿದ್ದ ಪೆಟ್ರೋಲ್ ಎಲ್ಲವನ್ನು ಬಾಟಲಿಯೊಂದರಲ್ಲಿ ಸಂಗ್ರಹಿಸಿದಾಗ ಅದರಲ್ಲಿ ಕೇವಲ 30 ರೂ. ನಷ್ಟು ಮಾತ್ರ ಪೆಟ್ರೋಲ್ ಇರುವುದು ಕಂಡುಬಂತು.ಕೂಡಲೇ ಅಲ್ಲಿದ್ದ ಇತರೆ ಗ್ರಾಹಕರು ಬಂಕ್ ಮ್ಯಾನೇಜರ್ ಮತ್ತು ಕೆಲಸಗಾರರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದರು. ಈ ಪೈಕಿ ಬಹುತೇಕ ಜನರು ನಮಗೂ ಈ ಹಿಂದೆ ಮೋಸ ಆಗಿದೆ ಎಂದು ಆರೋಪಿಸಿದ್ದಲ್ಲದೆ ಬಂಕ್ನ್ನು ಬಂದ್ ಮಾಡಬೇಕು. ಕಳೆದ ಹಲವು ದಿನದಿಂದ ಗ್ರಾಹಕರಿಗೆ ಲಕ್ಷಾಂತರ ರೂ. ಮೋಸವಾಗಿದೆ. ಬಂಕ್ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದರು.
ಆ ಸಂದರ್ಭಅಲ್ಲಿನ ಸಿಬ್ಬಂದಿಗಳೆಲ್ಲರೂ ನಾಪತ್ತೆಯಾಗಿದ್ದರು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಡಬೇಕಾಯಿತು. ಮಾಲೀಕರನ್ನು ಸ್ಥಳಕ್ಕೆ ಕರೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಬಂಕ್ನ ಮ್ಯಾನೇಜರ್ನನ್ನು ತರಾಟೆಗೆ ತೆಗೆದುಕೊಂಡ ಗ್ರಾಹಕರು ಈಗಲೇ ಪೆಟ್ರೋಲ್ ಪಂಪ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ 80 ರೂ.ನಷ್ಟು ಪೆಟ್ರೋಲ್ ಬಂದ ನಂತರ ಬರೇ ಮೀಟರ್ ಮಾತ್ರ ಓಡುತ್ತಿತ್ತು. ಇದರಿಂದ ಇನ್ನಷ್ಟು ರೊಚ್ಚಿಗೆದ್ದ ಸಾರ್ವಜನಿಕರು ಬಂಕ್ ಮಾಲೀಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆಟೋ ಚಾಲಕರು ಸೇರಿದಂತೆ ದ್ವಿಚಕ್ರ, ನಾಲ್ಕು ಚಕ್ರವಾಹನ ಚಾಲಕರು ಜಮಾಯಿಸಿ ದಿನವೊಂದಕ್ಕೆ ಬಂಕ್ನಲ್ಲಿ ಒಂದು ಲಕ್ಷ ರೂ.ವರೆಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪರಮೇಶ್ವರಪ್ಪ ಮಾತನಾಡಿ, ಬಂಕ್ನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತದೆ. ಹಿಂದುಸ್ಥಾನ್ ಪೆಟ್ರೊಲಿಯಂ ಕಂಪನಿಯ ನೋಡಲ್ ಅಧಿಕಾರಿಗಳು ಹಾಗೂ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲಿಸಲಾಗುವುದು. ಅಳತೆಯಲ್ಲಿ ಮೋಸ ಆಗುತ್ತಿರುವುದು ಸಾಬೀತಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಗುಂಪು ಚದುರಿಸಲು ಪೊಲೀಸರು ಒಮ್ಮೆ ಲಘುವಾಗಿ ಲಾಟಿಯನ್ನೂ ಬೀಸಬೇಕಾಯಿತು. ಅಂತಿಮವಾಗಿ ಬಂಕ್ನ್ನು ತಾತ್ಕಾಲಿಕ ಬಂದ್ ಮಾಡಿಸುವುದಾಗಿ ಅಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ಜನರು ಚದುರಿದರು. ಗ್ರಾಹಕ ಶಿವರಾಜ್ ತಮಗಾದ ಮೋಸದ ಬಗ್ಗೆ ನಗರಠಾಣೆಗೆ ದೂರು ಸಲ್ಲಿಸಿದರು.
ಈ ಹಿಂದೆ ಉಷಾ ಸರ್ವಿಸ್ ಸ್ಟೇಷನ್ ಹೆಸರಿನಲ್ಲಿ ನಡೆಯುತ್ತಿದ್ದ ಈ ಬಂಕ್ನ್ನು ನ್ಯಾಯಾಲಯದಲ್ಲಿದ್ದ ವಿವಾದ ಬಗೆಹರಿದ ನಂತರ ಶಾಹಿದ್ ಅಲಿ ಎಂಬುವವರು ವಹಿಸಿಕೊಂಡಿದ್ದು, ಅವರ ಸಂಬಂಧಿ ಮುಸಾಫಿರ್ ಎಂಬುವವರು ನಡೆಸುತ್ತಿದ್ದರು.ಗುರುವಾರ ಬೆಳಗ್ಗೆ ನಗರದ ರಾಮನಹಳ್ಳಿ ನಿವಾಸಿ ಶಿವರಾಜ್ ಎಂಬುವವರು ಬಂಕ್ನಲ್ಲಿ ತಮ್ಮ ಬೈಕ್ಗೆ 100 ರೂ.ನ ಪೆಟ್ರೋಲ್ ಹಾಕಿಸಿದ್ದರು. ಈ ವೇಳೆ ಅಳತೆಯಲ್ಲಿ ಮೋಸ ಆಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೆಲಸಗಾರನನ್ನು ಪ್ರಶ್ನಿಸಿದ್ದರು. ಪರಸ್ಪರ ಮಾತಿನ ಚಕಮಕಿ ನಡೆದು ಕೊನೆಗೆ ಸ್ಥಳದಲ್ಲೇ ಬೈಕ್ನಲ್ಲಿದ್ದ ಪೆಟ್ರೋಲ್ ಎಲ್ಲವನ್ನು ಬಾಟಲಿಯೊಂದರಲ್ಲಿ ಸಂಗ್ರಹಿಸಿದಾಗ ಅದರಲ್ಲಿ ಕೇವಲ 30 ರೂ. ನಷ್ಟು ಮಾತ್ರ ಪೆಟ್ರೋಲ್ ಇರುವುದು ಕಂಡುಬಂತು.ಕೂಡಲೇ ಅಲ್ಲಿದ್ದ ಇತರೆ ಗ್ರಾಹಕರು ಬಂಕ್ ಮ್ಯಾನೇಜರ್ ಮತ್ತು ಕೆಲಸಗಾರರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದರು. ಈ ಪೈಕಿ ಬಹುತೇಕ ಜನರು ನಮಗೂ ಈ ಹಿಂದೆ ಮೋಸ ಆಗಿದೆ ಎಂದು ಆರೋಪಿಸಿದ್ದಲ್ಲದೆ ಬಂಕ್ನ್ನು ಬಂದ್ ಮಾಡಬೇಕು. ಕಳೆದ ಹಲವು ದಿನದಿಂದ ಗ್ರಾಹಕರಿಗೆ ಲಕ್ಷಾಂತರ ರೂ. ಮೋಸವಾಗಿದೆ. ಬಂಕ್ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದರು.
ಆ ಸಂದರ್ಭಅಲ್ಲಿನ ಸಿಬ್ಬಂದಿಗಳೆಲ್ಲರೂ ನಾಪತ್ತೆಯಾಗಿದ್ದರು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಡಬೇಕಾಯಿತು. ಮಾಲೀಕರನ್ನು ಸ್ಥಳಕ್ಕೆ ಕರೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಬಂಕ್ನ ಮ್ಯಾನೇಜರ್ನನ್ನು ತರಾಟೆಗೆ ತೆಗೆದುಕೊಂಡ ಗ್ರಾಹಕರು ಈಗಲೇ ಪೆಟ್ರೋಲ್ ಪಂಪ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ 80 ರೂ.ನಷ್ಟು ಪೆಟ್ರೋಲ್ ಬಂದ ನಂತರ ಬರೇ ಮೀಟರ್ ಮಾತ್ರ ಓಡುತ್ತಿತ್ತು. ಇದರಿಂದ ಇನ್ನಷ್ಟು ರೊಚ್ಚಿಗೆದ್ದ ಸಾರ್ವಜನಿಕರು ಬಂಕ್ ಮಾಲೀಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆಟೋ ಚಾಲಕರು ಸೇರಿದಂತೆ ದ್ವಿಚಕ್ರ, ನಾಲ್ಕು ಚಕ್ರವಾಹನ ಚಾಲಕರು ಜಮಾಯಿಸಿ ದಿನವೊಂದಕ್ಕೆ ಬಂಕ್ನಲ್ಲಿ ಒಂದು ಲಕ್ಷ ರೂ.ವರೆಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪರಮೇಶ್ವರಪ್ಪ ಮಾತನಾಡಿ, ಬಂಕ್ನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತದೆ. ಹಿಂದುಸ್ಥಾನ್ ಪೆಟ್ರೊಲಿಯಂ ಕಂಪನಿಯ ನೋಡಲ್ ಅಧಿಕಾರಿಗಳು ಹಾಗೂ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲಿಸಲಾಗುವುದು. ಅಳತೆಯಲ್ಲಿ ಮೋಸ ಆಗುತ್ತಿರುವುದು ಸಾಬೀತಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಗುಂಪು ಚದುರಿಸಲು ಪೊಲೀಸರು ಒಮ್ಮೆ ಲಘುವಾಗಿ ಲಾಟಿಯನ್ನೂ ಬೀಸಬೇಕಾಯಿತು. ಅಂತಿಮವಾಗಿ ಬಂಕ್ನ್ನು ತಾತ್ಕಾಲಿಕ ಬಂದ್ ಮಾಡಿಸುವುದಾಗಿ ಅಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ಜನರು ಚದುರಿದರು. ಗ್ರಾಹಕ ಶಿವರಾಜ್ ತಮಗಾದ ಮೋಸದ ಬಗ್ಗೆ ನಗರಠಾಣೆಗೆ ದೂರು ಸಲ್ಲಿಸಿದರು.