ಆ್ಯಪ್ನಗರ

ಎಷ್ಟು ಇಂಚಿನ ಎದೆ ಇದೆ ಅನ್ನೋದು ಮುಖ್ಯವಲ್ಲ, ಮಾತೃ ಹೃದಯ ಇರಲಿ!: ಸಿದ್ದು ಟಾಂಗ್

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಿಧಾನಮಂಡಲ ಅಧಿವೇಶನದಲ್ಲೂ ಕಿಡಿಕಾರಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಇದೀಗ ಚಿಕ್ಕಮಗಳೂರಿನಲ್ಲೂ ಆಕ್ರೋಶವ್ಯಕ್ತಪಡಿಸಿದ್ದಾರೆ.

Vijaya Karnataka Web 13 Oct 2019, 11:04 am
ಚಿಕ್ಕಮಗಳೂರು: ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ 60 ದಿನಗಳಾದ ಮೇಲೆ ಕೇಂದ್ರದಿಂದ 1200 ಕೋಟಿ ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಧೂಪ ಹಾಕುವ ರೀತಿ 1200 ಕೋಟಿ ರೂ ಕೊಟ್ಟಿದ್ದಾರೆ ಎಂದ ಸಿದ್ದು, ಮೋದಿ ಕರ್ನಾಟಕಕ್ಕೆ ಬಂದೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಮಾರು 2 ಕೋಟಿ ಜನ ಕರ್ನಾಟಕದಲ್ಲಿ ನಲುಕಿದ್ದಾರೆ. ಮೋದಿಯವರಿಗೆ ಮಾತೃ ಹೃದಯ ಇರಬೇಕು. ಎದೆ ಎಷ್ಟು ಇಂಚು ಇದ್ರೆ ಏನು, ನೂರು ಇಂಚು ಎದೆ ಇಟ್ಟುಕೊಳ್ಳಿ. ಆದರೆ, ಜನರಿಗೆ ಸ್ಪಂದಿಸುವ ಮಾತೃ ಹೃದಯ ಇರಬೇಕು ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.
Vijaya Karnataka Web siddaramaiyah


ಈ ವರ್ಷ ಪ್ರವಾಹ ಹಾಗೂ ಬರ ಎರಡು ಇದೆ ಎಂದು ಸಚಿವ ಆರ್ ಅಶೋಕ್ ಅವರೇ ಒಪ್ಪಿಕೊಂಡಿದ್ದಾರೆ ಎಂದ ಸಿದ್ದರಾಮಯ್ಯ, ಈ ಸರ್ಕಾರ ಸತ್ತು ಹೋಗಿದೆ, 7 ಸಾವಿರ ವಿದ್ಯಾರ್ಥಿಗಳ ಪಠ್ಯ ಪುಸ್ತಕ ನಾಶವಾಗಿವೆ. ಈವರೆಗೂ ಪಠ್ಯ ಪುಸ್ತಕ ಕೊಡುವ ಕೆಲಸ ಆಗಿಲ್ಲ. ಜನರ ಕಷ್ಟ ಯಾರಿಗೆ ಹೇಳೋದು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಈ ಸರ್ಕಾರಕ್ಕೆ ಕಣ್ಣು ಕಾಣಿಸುತ್ತಿಲ್ಲ, ಕಿವಿ ಕೇಳಿಸುತ್ತಿಲ್ಲ, ಸರ್ಕಾರ ಬದುಕಿಲ್ಲ, ಸತ್ಯ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ 25 ಜನ ಎಂಪಿಗಳಿದ್ದಾರೆ, ಆದ್ರೆ ಆ ಶೋಭಾ ಕರಂದ್ಲಾಜೆ ಎಲ್ಲಿ ಇದ್ದಾರೋ ಗೊತ್ತಿಲ್ಲ ಎಂದು ಕಿಡಿಕಾರಿದ ಮಾಜಿ ಸಿಎಂ ಸಿದ್ದು, ಚುನಾವಣೆ ಮುನ್ನ ಗೋ ಬ್ಯಾಕ್ ಶೋಭಾ ಅಂತಿದ್ರು. ಈಗ ಅಂತಹವರನ್ನು 3 ಲಕ್ಷ ಅಂತರದಿಂದ ಗೆಲ್ಲಿಸಿದ್ದಾರೆ ಎಂದು ಅಚ್ಚರಿವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಮಾಧ್ಯಮ ನಿಷೇಧ ಸರಿಯಲ್ಲ!

ವಿಧಾನ ಮಂಡಲದಲ್ಲಿ ಮಾಧ್ಯಮ ನಿಷೇಧ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರನ್ನು ದೂರ ಇಟ್ಟು ಏನು ಮಾಡೋಕೆ ಆಗಲ್ಲ. ವಿಧಾನಸಭೆಯಲ್ಲಿ ನಡೆಯುವ ಕಲಾಪ ಎಲ್ಲರಿಗೂ ಗೊತ್ತಾಗಬೇಕು ಎಂದು ಅಭಿಪ್ರಾಯಪಟ್ಟ ಸಿದ್ದು, ಕಲಾಪ ಗೌಪ್ಯವಾಗಿ ನಡೆಯೋದಿಲ್ಲ, ಎಲ್ಲರಿಗೂ ಗೊತ್ತಾಗಲಿ ಅಂತನೇ ನಾವು ಚರ್ಚೆ ಮಾಡೋದು. ಆದ್ರೆ, ಬಿಜೆಪಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ ಎಂದು ಸಿದ್ದು ಕಿಡಿಕಾರಿದರು.

ಶಿರಾಡಿ ಸಂಚಾರ ತಂತಿ ಮೇಲಿನ ನಡಿಗೆ: ಎಲ್ಲೆಲ್ಲೂ ಗುಂಡಿಗಳು, ಕೆಸರು ಹೊಂಡಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ