ಆ್ಯಪ್ನಗರ

ಜ್ಯೂಸ್‌ ಎಂದುಕೊಂಡು ಕಳೆನಾಶಕ ಕುಡಿದ ಮಗು ಸಾವು

ಮನೆಯಲ್ಲಿ ಇಟ್ಟಿದ್ದ ಕಳೆನಾಶಕವನ್ನು ಜ್ಯೂಸ್‌ ಎಂದು ಭಾವಿಸಿದ್ದ ಮಗು ಅಕ್ಟೋಬರ್‌ 24ರಂದು ಸೇವಿಸಿತ್ತು. ಅಸ್ವಸ್ಥಗೊಂಡ ಮಗುನನ್ನು ಕೂಡಲೇ ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ಕರೆದ್ಯೊಯ್ದು, ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿತ್ತು.

Vijaya Karnataka 12 Nov 2019, 8:09 pm
ಕೊಟ್ಟಿಗೆಹಾರ (ಚಿಕ್ಕಮಗಳೂರು): ಜ್ಯೂಸ್‌ ಎಂದು ತಿಳಿದು ಕಳೆನಾಶಕ ಕುಡಿದ ಮಗುವೊಂದು ಮೃತಪಟ್ಟ ಮನಕಲಕುವ ಘಟನೆ ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುರ್ಗದಹಳ್ಳಿಯ ಹಲಸಿನಬೀಳು ಎಂಬಲ್ಲಿ ನಡೆದಿದೆ.
Vijaya Karnataka Web Baby Death


ದುರ್ಗದಹಳ್ಳಿಯ ಪೂಜಿತಾ, ಪ್ರವೀಣ್‌ ದಂಪತಿಯ ಪುತ್ರ ಅಗಸ್ತ್ಯ(3) ಮೃತಪಟ್ಟ ಮಗು. ಮನೆಯಲ್ಲಿಇಟ್ಟಿದ್ದ ಕಳೆನಾಶಕವನ್ನು ಜ್ಯೂಸ್‌ ಎಂದು ಭಾವಿಸಿದ್ದ ಮಗು ಅಕ್ಟೋಬರ್‌ 24ರಂದು ಸೇವಿಸಿತ್ತು. ಅಸ್ವಸ್ಥಗೊಂಡ ಮಗುನನ್ನು ಕೂಡಲೇ ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ಕರೆದ್ಯೊಯ್ದು, ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿತ್ತು.

18 ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಗಸ್ತ್ಯ ಚಿಕಿತ್ಸೆ ಪಲಿಸದೇ ಸೋಮವಾರ ರಾತ್ರಿ ಮೃತಪಟ್ಟಿದ್ದಾನೆ. ಏಕೈಕ ಪುತ್ರನನ್ನು ಕಳೆದುಕೊಂಡ ಪೂಜಿತಾ, ಪ್ರವೀಣ್‌ ದಂಪತಿ ಮತ್ತು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತ್ತಿತ್ತು. ದುರ್ಗದಹಳ್ಳಿಯಲ್ಲಿ ಮಂಗಳವಾರ ಬೆಳಗ್ಗೆ ಅಂತ್ಯಕ್ರಿಯೆ ನಡೆಸಲಾಯಿತು. ಬಾಳೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ