ಆ್ಯಪ್ನಗರ

ಎಲ್ಲಕಲೆಗೂ ಶಾಸ್ತ್ರೀಯತೆ ತಳಹದಿ : ಜ್ಯೋತಿ

ಯಾವುದೇ ಕಲೆಗೆ ಶಾಸ್ತ್ರೀಯತೆಯ ತಳಹದಿ ಬಹಳ ಮುಖ್ಯ ಎಂದು ನೂಪುರ ಅಕಾಡೆಮಿ ಆಫ್‌ ಪರ್‌ಫಾರ್ಮಿಂಗ್‌ ಆರ್ಟ್ಸ್ನ ಸಂಸ್ಥಾಪಕಿ, ನೃತ್ಯ ಕಲಾವಿದೆ ಜ್ಯೋತಿ ಹೇಳಿದರು.

Vijaya Karnataka 19 Sep 2019, 6:50 pm
ಚಿಕ್ಕಮಗಳೂರು: ಯಾವುದೇ ಕಲೆಗೆ ಶಾಸ್ತ್ರೀಯತೆಯ ತಳಹದಿ ಬಹಳ ಮುಖ್ಯ ಎಂದು ನೂಪುರ ಅಕಾಡೆಮಿ ಆಫ್‌ ಪರ್‌ಫಾರ್ಮಿಂಗ್‌ ಆರ್ಟ್ಸ್ನ ಸಂಸ್ಥಾಪಕಿ, ನೃತ್ಯ ಕಲಾವಿದೆ ಜ್ಯೋತಿ ಹೇಳಿದರು.
Vijaya Karnataka Web classics is the foundation of everything
ಎಲ್ಲಕಲೆಗೂ ಶಾಸ್ತ್ರೀಯತೆ ತಳಹದಿ : ಜ್ಯೋತಿ


ನಗರದ ಯುರೇಕಾ ಅಕಾಡೆಮಿ ಸಭಾಂಗಣದಲ್ಲಿಇತ್ತೀಚೆಗೆ ನಡೆದ ಪೂರ್ವಿ ಗಾನಯಾನ-58 ರಲ್ಲಿಪದ್ಮಶ್ರೀ ಹೇಮಮಾಲಿನಿ ಗೀತೆಗಳ 'ಡ್ರೀಮ್‌ಗಲ್‌ರ್‍' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೆ ಕಲೆ ಆಧುನಿಕತೆಗೆ ಹೊರಳಿದರೂ ಕಲಾವಿದರು ಶಾಸ್ತ್ರೀಯತೆಗೆ ಒತ್ತು ನೀಡಿದರೆ ಮಾತ್ರ ಬಹುಕಾಲ ನಿಲ್ಲಬಲ್ಲರು. ಸಂಗೀತ, ನೃತ್ಯ, ರಂಗಕಲೆ, ನಟನೆ ಎಲ್ಲವನ್ನೂ ಭಾರತೀಯರು ಶಾಸ್ತ್ರೀಯವಾಗಿ ಕಲಿಯುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿವಿಶಿಷ್ಟವಾಗಿ ಗುರುತಿಸಲಾಗುತ್ತದೆ ಎಂದು ಹೇಳಿದರು.

ಉಪನ್ಯಾಸಕಿ ನಾಗಶ್ರೀ ಮಾತನಾಡಿ, ಸಂಗೀತ ಮತ್ತು ಸಾಹಿತ್ಯ ಬದುಕಿನ ಊರುಗೋಲು. ಸಂಗೀತ ಸಿದ್ಧಿಸಬೇಕಾದರೆ ಸತತ ಸಾಧನೆ, ತಪಸ್ಸು ಮುಖ್ಯ ಎಂದರು.

ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತೆ ಕೆ.ಎಚ್‌.ಗೀತಾ ಮಾತನಾಡಿ, ಸಾಹಿತ್ಯ ಮತ್ತು ಕಲೆ ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ ಎಂದು ಹೇಳಿದರು. ಇದೇ ಸಂದರ್ಭ ಅವರನ್ನು ಸನ್ಮಾನಿಸಲಾಯಿತು. ಯುರೇಕಾ ಅಕಾಡೆಮಿ ಪ್ರಾಂಶುಪಾಲ ದೀಪಕ್‌ ದೊಡ್ಡಯ್ಯ ಅಧ್ಯಕ್ಷತೆ ವಹಿಸಿದ್ದರು. ಪೂರ್ವಿ ಸುಗಮ ಸಂಗೀತ ಅಕಾಡೆಮಿ ಮುಖ್ಯಸ್ಥ ಎಂ.ಎಸ್‌.ಸುಧೀರ್‌ ಸ್ವಾಗತಿಸಿ, ರಾಯ್‌ನಾಯ್‌್ಕ ವಂದಿಸಿದರು. ಪೂರ್ವಿ ತಂಡದ ಗಾಯಕರಾದ ಎಂ.ಎಸ್‌.ಸುಧೀರ್‌, ರಾಯ್‌ ನಾಯ್‌್ಕ, ವೆಂಕಟೇಶ್‌, ಮೋಹನ್‌, ರೂಪಾ ಅಶ್ವಿನ್‌, ರುಕ್ಸಾನಾ ಕಾಚೂರ್‌, ಅನುಷಾ, ಪಂಚಮಿ, ಲೋಲಾಕ್ಷಿ, ಸಾಗ್ನಿಕ, ಚೈತನ್ಯ ಅವರುಗಳು ಜನಪ್ರಿಯ ತಾರೆ ಹೇಮಮಾಲಿನಿ ನಟಿಸಿರುವ ಚಿತ್ರಗಳಿಂದ ಆಯ್ದ ಗೀತೆಗಳನ್ನು ಹಾಡಿ ಎಲ್ಲರ ಮನ ಗೆಲ್ಲುವಲ್ಲಿಯಶಸ್ವಿಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ