ಆ್ಯಪ್ನಗರ

ಅಭಿವೃದ್ಧಿ ಕೆಲಸಗಳಿಗೆ ಸಹಕಾರ ಅಗತ್ಯ

ನಗರದ ಅಭಿವೃದ್ಧಿ ಕೆಲಸಗಳಿಗೆ ಯಾವುದೆ ರಾಜಕೀಯ ಮಾಡದೆ ಸಹಕರಿಸಿದಾಗ ವಾರ್ಡ್‌ ಮತ್ತು ಬಡಾವಣೆಗಳು ಅಭಿವೃದ್ಧಿಯಾಗುತ್ತವೆ ಎಂದು ನಗರಸಭೆ ಸದಸ್ಯೆ ಶಿಲ್ಪಾ ರಾಜಶೇಖರ್‌ ಹೇಳಿದರು.

Vijaya Karnataka 15 Feb 2019, 5:00 am
ಚಿಕ್ಕಮಗಳೂರು: ನಗರದ ಅಭಿವೃದ್ಧಿ ಕೆಲಸಗಳಿಗೆ ಯಾವುದೆ ರಾಜಕೀಯ ಮಾಡದೆ ಸಹಕರಿಸಿದಾಗ ವಾರ್ಡ್‌ ಮತ್ತು ಬಡಾವಣೆಗಳು ಅಭಿವೃದ್ಧಿಯಾಗುತ್ತವೆ ಎಂದು ನಗರಸಭೆ ಸದಸ್ಯೆ ಶಿಲ್ಪಾ ರಾಜಶೇಖರ್‌ ಹೇಳಿದರು.
Vijaya Karnataka Web CKM-14RUDRAP5


ಇಂದಿರಾಗಾಂಧಿ ಬಡಾವಣೆಯಲ್ಲಿ ನಗರಸಭೆಯ ಎಸ್‌ಎಫ್‌ಸಿ, ನಗರೋತ್ಥಾನ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿ ಮಾತನಾಡಿದರು. ಅನೇಕ ವರ್ಷದಿಂದ ಇಂದಿರಾಗಾಂಧಿ ಬಡಾವಣೆಯಲ್ಲಿ ರಸ್ತೆ ಇಲ್ಲದೆ ಈ ಭಾಗದ ಜನರು ಕೆಸರು, ಧೂಳಿನಲ್ಲಿಯೆ ಓಡಾಡುತ್ತಿದ್ದರು. ಶಾಸಕರು ಈ ಭಾಗದಲ್ಲಿ ಜನ ಸಂಪರ್ಕ ಸಭೆ ನೆಡೆಸಿ ಸಮಸ್ಯೆ ಅರಿತು ಸೂಚನೆ ನೀಡಿದ್ದರು. ಈ ಭಾಗದ ಮತ್ತಷ್ಟು ಸಮಸ್ಯೆಗಳನ್ನು ಅರಿತು ಹಂತಹಂತವಾಗಿ ಪರಿಹರಿಸಲಾಗುವುದು. ಬಡಾವಣೆಯ ಎಲ್ಲ ರಸ್ತೆಗಳನ್ನು ಕಾಂಕ್ರಿಟೀಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಗರಸಭೆ ಸದಸ್ಯರಾದ ಟಿ.ರಾಜಶೇಖರ್‌, ಸುರೇಖಾ ಸಂಪತ್‌ರಾಜ್‌, ನಗರಸಭೆ ಎಇಇ ಲೋಕೇಶ್‌, ಬಡಾವಣೆಯ ಶಬ್ಬೀರ್‌, ರಂಗ, ಸಂಪತ್‌ರಾಜ್‌, ಜಯಂತಿ, ಕಾಕ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ