ಆ್ಯಪ್ನಗರ

ಸಹಕಾರಿ ಸಂಘಗಳು ರೈತ ಸಂಜೀವಿನಿ

ಸಹಕಾರ ಕ್ಷೇತ್ರ ಮಾತ್ರ ರೈತಾಪಿ, ಕೃಷಿಕರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಸಹಕಾರಿ ಸಂಘಗಳು ರೈತರ ಸಂಜೀವಿನಿಯಂತೆ ಎಂದು ವಿಧಾನಪರಿಷತ್‌ ಸದಸ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ಎಸ್‌. ಎಲ್‌. ಧರ್ಮೆಗೌಡ ಹೇಳಿದರು.

Vijaya Karnataka 17 Nov 2018, 5:00 am
ಕಡೂರು : ಸಹಕಾರ ಕ್ಷೇತ್ರ ಮಾತ್ರ ರೈತಾಪಿ, ಕೃಷಿಕರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಸಹಕಾರಿ ಸಂಘಗಳು ರೈತರ ಸಂಜೀವಿನಿಯಂತೆ ಎಂದು ವಿಧಾನಪರಿಷತ್‌ ಸದಸ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ಎಸ್‌. ಎಲ್‌. ಧರ್ಮೆಗೌಡ ಹೇಳಿದರು.
Vijaya Karnataka Web CKM-16KDR1


ಅವರು ಶುಕ್ರವಾರ ಪಟ್ಟಣದ ಪಿರ್ಕಾರ್ಡ್‌ ಬ್ಯಾಂಕ್‌ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್‌, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಸಹಕಾರ ಇಲಾಖೆ ಹಾಗೂ ತಾಲೂಕಿನ ಎಲ್ಲ ಸಹಕಾರ ಸಂಘ ಮತ್ತು ಬ್ಯಾಂಕ್‌ ಸಹಯೋಗದಲ್ಲಿ ನಡೆದ 65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಪ್ತಾಹ ಎಂದರೆ ಸಹಕಾರ ಸಂಘಗಳ ಪ್ರಗತಿ, ಅಭಿವೃದ್ಧಿ, ಲಾಭ ನಷ್ಟಗಳ ಕುರಿತು ಆತ್ಮಾವಲೋಕನ ಮಾಡುವ ಸಭೆಯಾಗಿದೆ. ಯಾವುದೇ ವ್ಯಕ್ತಿ ಸಹಕಾರ ಸಂಘಗಳ ಬಗ್ಗೆ ನಂಬಿಕೆ, ವಿಶ್ವವಾಸ ಇಟ್ಟುಕೊಂಡು ವ್ಯವಹರಿಸಿದರೆ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಲಿದೆ. ಸಹಕಾರ ರಂಗದಲ್ಲಿ ರಾಜಕೀಯ ಬೆರೆಸಬಾರದು. ಜನರ ಪರಿವರ್ತನೆ ಸಹಕಾರ ಬ್ಯಾಂಕುಗಳಿಂದ ಮಾತ್ರ ಸಾಧ್ಯ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಧ್ಯವಿಲ್ಲ, ಸಹಕಾರ ಸಂಘ ಜನರ ಅವಿಭಾಜ್ಯ ಅಂಗ ಎಂದರು.

ಡಿಸಿಸಿಬ್ಯಾಂಕ್‌ ನಿರ್ದೇಶಕ ಟಿ.ಡಿ. ಸತ್ಯನ್‌ ಮಾತನಾಡಿ, ರಾಜ್ಯದಲ್ಲಿಯೇ ಚಿಕ್ಕಮಗಳೂರು ಜಿಲ್ಲಾ ಸಹಕಾರ ಬ್ಯಾಂಕ್‌ ದ್ವಿತೀಯ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿಗಳಿಸಿದೆ ಇದಕ್ಕೆ ಎಲ್ಲರ ಸಹಕಾರ ಎಂದರು. ನಿರ್ದೇಶಕ ಎಸ್‌.ಜಿ.ರಾಮಪ್ಪ ಮಾತನಾಡಿದರು. ಸಹಕಾರ ಸಪ್ತಾಹದ ಅಧ್ಯಕ್ಷ ತೆಯನ್ನು ಸಹಕಾರ ಯೂನಿಯನ್‌ ಅಧ್ಯಕ್ಷ ಕೆ.ಎ.ವಿವೇಕ್‌ ವಹಿಸಿದ್ದರು. ಉಪಾಧ್ಯಕ್ಷ ಪಿ. ರವಿ, ನಾಗೇಶ್‌ ಎಸ್‌. ಡೋಂಗೆರೆ, ಟಿ.ಎಚ್‌. ರಾಮಾಂಜನೇಯ, ಕೆ. ಗೋಪಾಲಗೌಡ, ಮೋಹನ್‌ ಕುಮಾರ್‌, ಪರಮೇಶ್ವರಪ್ಪ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ