ಆ್ಯಪ್ನಗರ

ನಟ ಸುದೀಪ್‌ ಮ್ಯಾನೇಜರ್‌ ವಿರುದ್ಧ ದೂರು

ವಾರಸ್ದಾರ ಧಾರಾವಾಹಿ ಚಿತ್ರೀಕರಣಕ್ಕೆ ಪಡೆದುಕೊಂಡಿದ್ದ ಮನೆಯ ಬಾಡಿಗೆ ಹಣ ಪಾವತಿಗೆ ಸಂಬಂಧಿಸಿದಂತೆ ದಾಖಲಿಸಿರುವ ದೂರು ವಾಪಸ್‌ ಪಡೆಯುವಂತೆ ಬೆದರಿಕೆ ಹಾಕಿರುವ ಬಗ್ಗೆ ನಟ ಸುದೀಪ್‌ ಅವರ ವ್ಯವಸ್ಥಾಪಕ ನವೀನ್‌ ವಿರುದ್ಧ ಮಲ್ಲಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.

Vijaya Karnataka 18 Jan 2019, 5:00 am
ಚಿಕ್ಕಮಗಳೂರು: ವಾರಸ್ದಾರ ಧಾರಾವಾಹಿ ಚಿತ್ರೀಕರಣಕ್ಕೆ ಪಡೆದುಕೊಂಡಿದ್ದ ಮನೆಯ ಬಾಡಿಗೆ ಹಣ ಪಾವತಿಗೆ ಸಂಬಂಧಿಸಿದಂತೆ ದಾಖಲಿಸಿರುವ ದೂರು ವಾಪಸ್‌ ಪಡೆಯುವಂತೆ ಬೆದರಿಕೆ ಹಾಕಿರುವ ಬಗ್ಗೆ ನಟ ಸುದೀಪ್‌ ಅವರ ವ್ಯವಸ್ಥಾಪಕ ನವೀನ್‌ ವಿರುದ್ಧ ಮಲ್ಲಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.
Vijaya Karnataka Web complaint against actor sudeep manager
ನಟ ಸುದೀಪ್‌ ಮ್ಯಾನೇಜರ್‌ ವಿರುದ್ಧ ದೂರು


ಕಿಚ್ಚ ಸುದೀಪ್‌ ಅವರ ಮ್ಯಾನೇಜರ್‌ ಎಂದು ಹೇಳಿಕೊಂಡು ಕರೆ ಮಾಡಿದ್ದ ನವೀನ್‌ ಎಂಬ ವ್ಯಕ್ತಿ ತಮಗೆ ಧಮ್ಕಿ ಹಾಕಿದ್ದಾರೆ ಎಂದು ಮನೆ ಮಾಲೀಕ ದೀಪಕ್‌ ಮಯೂರ್‌ ಪಟೇಲ್‌ ದೂರು ದಾಖಲಿಸಿದ್ದು, ಮಲ್ಲಂದೂರು ಠಾಣೆ ಪೊಲೀಸರು ನವೀನ್‌ನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.

ತಾಲೂಕಿನ ಬೈಗೂರಿನಲ್ಲಿರುವ ದೀಪಕ್‌ ಮಯೂರ್‌ ಪಟೇಲ್‌ ಅವರ ಮನೆಯನ್ನು ವಾರಸ್ದಾರ ಧಾರಾವಾಹಿ ಚಿತ್ರೀಕರಣಕ್ಕೆ ಪಡೆದುಕೊಳ್ಳಲಾಗಿತ್ತು. ಮನೆ ಬಾಡಿಗೆಯನ್ನೂ ಕೊಡದೆ, ಕಾಫಿ ತೋಟವನ್ನೂ ನಾಶ ಮಾಡಿದ್ದಾರೆ ಎಂದು ಆರೋಪಿಸಿ ಸುದೀಪ್‌ ವಿರುದ್ಧ ದೀಪಕ್‌ ದೂರು ದಾಖಲಿಸಿದ್ದರು.

ಈ ದೂರನ್ನು ವಾಪಸ್‌ ಪಡೆಯುವಂತೆ ಕಿಚ್ಚ ಸುದೀಪ್‌ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷರೂ ಆಗಿರುವ ನವೀನ್‌, ದೀಪಕ್‌ಗೆ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. 2018 ಡಿಸೆಂಬರ್‌ 1ರಂದು ಕರೆ ಮಾಡಿದ್ದ ನವೀನ್‌ ಬೆಂಗಳೂರಿಗೆ ಬಂದು ನಮ್ಮಲ್ಲಿ ಮಾತನಾಡಿ ಕೇಸು ಹಿಂಪಡೆಯಬೇಕು. ಇಲ್ಲವಾದಲ್ಲಿ ನಿನ್ನನ್ನು ನಮ್ಮ ಕಡೆಯವರಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

ಮತ್ತೊಬ್ಬ ವ್ಯಕ್ತಿ ಕೂಡ ತಾನು ಹೈಕೋರ್ಟ್‌ ವಕೀಲ ಎಂದು ಹೇಳಿಕೊಂಡು, ನ್ಯಾಯಾಲಯದಲ್ಲಿ ನಾನು ಪ್ರಕರಣ ಸರಿ ಮಾಡಿಸಿ 48 ದಿನದಲ್ಲಿ ನಿನಗೆ ಒಂದು ಕೋಟಿ ರೂಪಾಯಿ ಕೊಡಿಸುತ್ತೇನೆ. ಅದರಲ್ಲಿ ನನಗೆ ಶೇ.10 ಕಮಿಷನ್‌ ಕೊಡು. ನಿನ್ನಲ್ಲಿರುವ ದಾಖಲೆ, ಸುದೀಪ್‌ ಕೊಟ್ಟಿರುವ ಬ್ಯಾಂಕ್‌ ಖಾತೆಗಳ ವಿವರ, ಚೆಕ್‌ಗಳನ್ನು ತೆಗೆದುಕೊಂಡು ಬಾ ಎಂದು ಕರೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ