ಆ್ಯಪ್ನಗರ

ಕಂಪ್ಲಿ ಗಣೇಶ್‌ ಪ್ರಕರಣ ಪ್ರತಿಕ್ರಿಯೆಗೆ ನಕಾರ

ಶಾಸಕರಾದ ಆನಂದ್‌ಸಿಂಗ್‌ ಮತ್ತು ಕಂಪ್ಲಿ ಗಣೇಶ್‌ ಜಗಳ ಪ್ರಕರಣದ ಬಗ್ಗೆ ಮಾತನಾಡಲು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ತನಿಖಾ ಸಮಿತಿ ಸದಸ್ಯ ಕೆ.ಜೆ.ಜಾರ್ಜ್‌ ನಿರಾಕರಿಸಿದರು.

Vijaya Karnataka 26 Jan 2019, 5:00 am
ಚಿಕ್ಕಮಗಳೂರು: ಶಾಸಕರಾದ ಆನಂದ್‌ಸಿಂಗ್‌ ಮತ್ತು ಕಂಪ್ಲಿ ಗಣೇಶ್‌ ಜಗಳ ಪ್ರಕರಣದ ಬಗ್ಗೆ ಮಾತನಾಡಲು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ತನಿಖಾ ಸಮಿತಿ ಸದಸ್ಯ ಕೆ.ಜೆ.ಜಾರ್ಜ್‌ ನಿರಾಕರಿಸಿದರು.
Vijaya Karnataka Web complaint against kamlesh ganesh case
ಕಂಪ್ಲಿ ಗಣೇಶ್‌ ಪ್ರಕರಣ ಪ್ರತಿಕ್ರಿಯೆಗೆ ನಕಾರ


ಕಂಪ್ಲಿ ಗಣೇಶ್‌ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲು ಬರುವುದಿಲ್ಲ. ನಾನು ಕೈಗಾರಿಕಾ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ. ಆ ಪ್ರಕರಣ ನನ್ನ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಗೃಹ ಸಚಿವರು, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯೇ ಉತ್ತರ ಕೊಡಬೇಕು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಪ್ರಕರಣದ ತನಿಖೆ ನಡೆಸಿ ವರದಿ ಕೊಡಲು ಸಮಿತಿ ರಚಿಸಲಾಗಿದೆ. ಆ ಸಮಿತಿಯಲ್ಲಿ ನಾನೂ ಇದ್ದೇನೆ. ಸಮಿತಿಯಲ್ಲಿರುವ ನಾನು ಆ ಬಗ್ಗೆ ಪ್ರತಿಕ್ರಿಯೆ ಕೊಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ