ಆ್ಯಪ್ನಗರ

ಆರ್ಥಿಕ ಚೈತನ್ಯ ಮೂಡಿಸಿದ ಪಕ್ಷ ಕಾಂಗ್ರೆಸ್‌

ದೇಶದ ಪ್ರತಿಯೊಬ್ಬ ಭಾರತೀಯನಿಗೂ ಆರ್ಥಿಕವಾಗಿ,ಶೈಕ್ಷ ಣಿಕವಾಗಿ ಚೈತನ್ಯ ಮೂಡಿಸಿದ ಪಕ್ಷ ಎಂದರೆ ಕಾಂಗ್ರೆಸ್‌ ಎಂದು ಅಖಿಲಭಾರತ ಮೀನುಗಾರರ ರಾಷ್ಟ್ರೀಯ ಕಾರ್ಯದರ್ಶಿ ಸಭಾಪತಿ ಹೇಳಿದರು.

Vijaya Karnataka 27 Feb 2019, 5:00 am
ಕಳಸ: ದೇಶದ ಪ್ರತಿಯೊಬ್ಬ ಭಾರತೀಯನಿಗೂ ಆರ್ಥಿಕವಾಗಿ,ಶೈಕ್ಷ ಣಿಕವಾಗಿ ಚೈತನ್ಯ ಮೂಡಿಸಿದ ಪಕ್ಷ ಎಂದರೆ ಕಾಂಗ್ರೆಸ್‌ ಎಂದು ಅಖಿಲಭಾರತ ಮೀನುಗಾರರ ರಾಷ್ಟ್ರೀಯ ಕಾರ್ಯದರ್ಶಿ ಸಭಾಪತಿ ಹೇಳಿದರು.
Vijaya Karnataka Web CKM-26kls1


ಪಟ್ಟಣದ ರೋಟರಿ ಭವನದಲ್ಲಿ ಮಂಗಳವಾರ ನಡೆದ ಕಳಸ ಬ್ಲಾಕ್‌ ಕಾಂಗ್ರೇಸ್‌ ಸಮಿತಿಯಿಂದ ಬೂತ್‌ ಅಧ್ಯಕ್ಷ ರು ಮತ್ತು ಬೂತ್‌ ಏಜೆಂಟರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಖಂಡ ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ ಭಾರತ. ಈ ದೇಶವನ್ನು ಆರ್ಥಿಕವಾಗಿ ಹಾಗೂ ಇನ್ನಿತರೆ ಎಲ್ಲ ರೀತಿಯಲ್ಲೂ ಭಾರತವನ್ನು ಜಗತ್ತು ನೋಡುವಂತೆ ಇತಿಹಾಸ ನಿರ್ಮಿಸಿದ ಕೀರ್ತಿ ಅದು ಕಾಂಗ್ರೆಸ್‌ ಪಕ್ಷ ಕ್ಕೆ ಸಲ್ಲುತ್ತದೆ .ರಾಜದನ ರದ್ಧತಿ,ಭೂ ಸುಧಾರಣೆ,ಶೈಕ್ಷ ಣಿಕ ಕ್ರಾಂತಿ,ಮಹಿಳೆಯರಿಗೆ ಆರ್ಥಿಕ ಚೈತನ್ಯ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಿದಂತ ಕೀರ್ತಿ ಅದು ಕಾಂಗ್ರೆಸ್‌ ಸರಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.

ಎಐಸಿಸಿ ಸದಸ್ಯ ಅಮೃತ್‌ ಶೆಣೈ ಮಾತನಾಡಿ, ಅಭಿವೃದ್ಧಿಯ ಮಂತ್ರವನ್ನು ಜಪಿಸುತ್ತ ಸರಕಾರದ ಚುಕ್ಕಾಣಿ ಹಿಡಿದ ಮೋದಿ ಸರಕಾರ 20 ರಿಂದ 30 ಸಾವಿರ ಸಾಲ ಮಾಡಿದ ರೈತರನ್ನು ಆತ್ಮ ಹತ್ಯೆ ಮಾಡುವಂತೆ ಮಾಡಿದರು.ಸಾವಿರಾರು ಕೋಟಿ ಸಾಲ ಮಾಡಿ ಬ್ಯಾಂಕಿಗೆ ಮೋಸ ಮಾಡಿದವರನ್ನು ದೇಶ ಬಿಟ್ಟು ಹೋಗಿ ಸುಖವಾಗಿ ಇರುವಂತೆ ಮಾಡಿದರು.ಕೇವಲ ದಲಿತರ ಕಾಲು ತೊಳೆದರೆ ಸಾಕಾಗುವುದಿಲ್ಲ ಅವರ ಮೇಲೆ ಆಗುವಂತ ದೌರ್ಜನ್ಯಗಳನ್ನು ತಡೆಯಿರಿ,ಅವರಿಗೆ ಸೌಲಭ್ಯಗಳನ್ನು ಕೊಡಿ,ಸಾಮಾಜಿಕವಾಗಿ ಅಭಿವೃದ್ಧಿ ಆಗುವಂತೆ ಮಾಡಿ. ಚುನಾವಣೆಯ ಸಂದರ್ಭದಲ್ಲಿ ಜನರನ್ನು ಮರಳು ಮಾಡಿ ನೀಡಿದ ಭರವಸೆಗಳನ್ನು ಈಡೇರಿಸದೆ ಐದು ವರ್ಷಗಳನ್ನು ಪೂರೈಸಿದ್ದಾರೆ.ಈ ಬಾರಿ ನಿಮ್ಮ ಯಾವ ಭಾಷಣ,ಮಂತ್ರಗಳು ನಡೆಯೋದಿಲ್ಲ.ಆದ್ದರಿಂದ ಕಾಂಗ್ರೆಸ್‌ ಸರಕಾರ ಮಾಡಿದ ಸಾಧನೆ ಹಾಗೂ ಬಿಜೆಪಿಯ ವೈಫಲ್ಯಗಳ ಬಗ್ಗೆ ಮಾಹಿತಿಯನ್ನು ಪ್ರತಿಯೊಂದು ಮನೆಗೂ ತಿಳಿಸುವಂತೆ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿಜಯ ಕುಮಾರ್‌ ಉದ್ಘಾಟಿಸಿದರು. ಮಾಜಿ ಸಚಿವೆ ಮೋಟಮ್ಮ,ಕೆಪಿಸಿಸಿ ಕಾರ್ಯದರ್ಶಿ ಸವಿತಾರಮೇಶ್‌,ಕಳಸ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಶ್ರೀನಿವಾಸ್‌ ಹೆಬ್ಬಾರ್‌,ಜಿ.ಪಂ ಸದಸ್ಯ ಪ್ರಭಾಕರ್‌ ಗೌಡ,ತರಭೇತುದಾರರಾಗಿ ಶಂಭು ಶೆಟ್ಟಿ,ಖಾಲಿದ್‌ ಮಂಗಳೂರು,ಮೂಡಿಗೆರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುರೇಂದ್ರ,ಆಲ್ದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದಾಫೀರ್‌,ಕಳಸ ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ವೀರೇಂದ್ರ,ಮುಖಂಡರಾದ ರಾಮದಾಸ್‌ ಗೌಡ,ಕೆ.ಆರ್‌.ದೇವದಾಸ್‌ ಗೌಡ,ವಿಶ್ವನಾಥ್‌,ಶ್ರೇಣಿಕ್‌,ಎನ್‌.ಎಂ.ಹರ್ಷ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ