ಆ್ಯಪ್ನಗರ

ಕಾಂಗ್ರೆಸ್‌ ಅಶಿಸ್ತು ಸಹಿಸೆನು

ಟಿಕೆಟ್‌ ಸಿಕ್ಕಲಿಲ್ಲ ಎಂಬ ಕಾರಣಕ್ಕೆ ಕೆಲವು ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ನಡೆಸುತ್ತಿರುವ ಅಶಿಸ್ತಿನ ಚಟುವಟಿಕೆಗಳನ್ನು ಕಾಂಗ್ರೆಸ್‌ ಪಕ್ಷ ಸಹಿಸುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಕೆ.ಮಂಜುನಾಥ ಭಂಡಾರಿ ಎಚ್ಚರಿಸಿದ್ದಾರೆ.

Vijaya Karnataka 18 Apr 2018, 5:00 am
ಚಿಕ್ಕಮಗಳೂರು : ಟಿಕೆಟ್‌ ಸಿಕ್ಕಲಿಲ್ಲ ಎಂಬ ಕಾರಣಕ್ಕೆ ಕೆಲವು ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ನಡೆಸುತ್ತಿರುವ ಅಶಿಸ್ತಿನ ಚಟುವಟಿಕೆಗಳನ್ನು ಕಾಂಗ್ರೆಸ್‌ ಪಕ್ಷ ಸಹಿಸುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಕೆ.ಮಂಜುನಾಥ ಭಂಡಾರಿ ಎಚ್ಚರಿಸಿದ್ದಾರೆ.
Vijaya Karnataka Web congress will tolerate the discipline
ಕಾಂಗ್ರೆಸ್‌ ಅಶಿಸ್ತು ಸಹಿಸೆನು


ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಕೆಲವರು ನಡೆಸುತ್ತಿರುವ ಅಶಿಸ್ತಿನ ಚಟುವಟಿಕೆ, ಘೋಷಿತ ಅಭ್ಯರ್ಥಿಗಳ ಮೂಲಕ ಮಾಧ್ಯಮಗಳ ಮೂಲಕ ಅವಹೇಳನಕಾರಿ ಹೇಳಿಕೆ ಕೊಡುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿರುವುದನ್ನು ಕೆಪಿಸಿಸಿ ಗಂಭೀರವಾಗಿ ಗಮನಿಸುತ್ತಿದೆ. ಎಐಸಿಸಿ ಕೂಡ ಇಂತಹ ಚಟುವಟಿಕೆಗಳ ವರದಿ ತರಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಚಟುವಟಿಕೆ ಮುಂದುವರಿಸಿದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷದ ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಕೇಳುವ ಅವಕಾಶವಿದೆ. ಇಂತಹ ಅವಕಾಶಗಳನ್ನು ಬಹುತೇಕರು ಉಪಯೋಗಿಸಿಕೊಂಡು ಅಭ್ಯರ್ಥಿಗಳಾಗಲು ಅರ್ಜಿ ಸಲ್ಲಿಸಿರುತ್ತಾರೆ. ಪಕ್ಷ ಅವರಲ್ಲಿ ಗೆಲ್ಲುವ ಶಕ್ತಿ ಹೆಚ್ಚಿರುವವರಿಗೆ ಟಿಕೆಟ್‌ ನೀಡುತ್ತದೆ. ಪಕ್ಷ ಟಿಕೆಟ್‌ ನೀಡಿದ ಅಭ್ಯರ್ಥಿಯನ್ನು ಉಳಿದವರು ಗೆಲ್ಲಿಸಲು ಪ್ರಯತ್ನಿಸಬೇಕು. ಇದು ಪಕ್ಷದ ಪ್ರಾಮಾಣಿಕ ಸದಸ್ಯರು ಮಾಡುವ ಕೆಲಸ ಎಂದಿದ್ದಾರೆ.

ಆದರೆ, ಕೆಲವರು ಟಿಕೆಟ್‌ ನೀಡಿಲ್ಲ ಎಂಬ ಕಾರಣಕ್ಕೆ ಮೆರವಣಿಗೆ ನಡೆಸುವುದು, ಪಕ್ಷದ ನಾಯಕರನ್ನು ಬಹಿರಂಗವಾಗಿ ಟೀಕಿಸುವುದು, ಕಚೇರಿಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ್ದು, ಇದು ಕಾಂಗ್ರೆಸ್‌ ಸಂಸ್ಕೃತಿ ಅಲ್ಲ. ಪ್ರತಿಯೊಬ್ಬರೂ ಶಾಂತ ರೀತಿಯಿಂದ ಇದ್ದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ