ಆ್ಯಪ್ನಗರ

ಕೆರೆ ಒತ್ತುವರಿ ತೆರವು ಗಂಭೀರ ಪರಿಗಣಿಸಿ

ದೌರ್ಜನ್ಯ ಸಮಿತಿ ಸಭೆಯಲ್ಲಿಪದೇ ಪದೇ ಪ್ರಸ್ತಾಪವಾಗುವ ಕೆರೆ ಒತ್ತುವರಿ ತೆರವು ವಿಚಾರವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಸೆಪ್ಟೆಂಬರ್‌ 15 ರೊಳಗೆ ಆ ಬಗ್ಗೆ ಸೂಕ್ತ ವರದಿ ನೀಡಬೇಕು ಎಂದು ತಹಶೀಲ್ದಾರ್‌ ಎನ್‌.ಟಿ.ಧರ್ಮೋಜಿರಾವ್‌ ಅಧಿಕಾರಿಗಳಿಗೆ ಸೂಚಿಸಿದರು.

Vijaya Karnataka 30 Aug 2019, 5:00 am
ತರೀಕೆರೆ : ದೌರ್ಜನ್ಯ ಸಮಿತಿ ಸಭೆಯಲ್ಲಿಪದೇ ಪದೇ ಪ್ರಸ್ತಾಪವಾಗುವ ಕೆರೆ ಒತ್ತುವರಿ ತೆರವು ವಿಚಾರವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಸೆಪ್ಟೆಂಬರ್‌ 15 ರೊಳಗೆ ಆ ಬಗ್ಗೆ ಸೂಕ್ತ ವರದಿ ನೀಡಬೇಕು ಎಂದು ತಹಶೀಲ್ದಾರ್‌ ಎನ್‌.ಟಿ.ಧರ್ಮೋಜಿರಾವ್‌ ಅಧಿಕಾರಿಗಳಿಗೆ ಸೂಚಿಸಿದರು.
Vijaya Karnataka Web CKM-29TKR1


ಪಟ್ಟಣದ ತಾಲೂಕು ಕಚೇರಿಯಲ್ಲಿಗುರುವಾರ ನಡೆದ ಪ.ಜಾತಿ ಮತ್ತು ಪ.ವರ್ಗಗಳ ತಾಲ್ಲೂಕು ಮಟ್ಟದ ದೌರ್ಜನ್ಯ ನಿಯಂತ್ರಣ ಮೇಲುಸ್ತವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಭೆಗೆ ಕಡ್ಡಾಯವಾಗಿ ಇಲಾಖೆಯ ಅಧಿಕಾರಿಗಳು ಭಾಗವಹಿಸಬೇಕು. ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ನೊಟೀಸ್‌ ನೀಡಿ, ಕ್ರಮ ಕೈಗೊಳ್ಳಲು ಶಿಫಾರಸು ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಸೂಚಿಸಿದರು. ಪಟ್ಟಣದಲ್ಲಿಡಾ.ಬಿ.ಆರ್‌.ಅಂಬೇಡ್ಕರ್‌ ಪುತ್ಥಳಿ ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ದಸಂಸ ಜಿಲ್ಲಾಸಂಚಾಲಕ ಕೆ.ನಾಗರಾಜ್‌ ಮಾತನಾಡಿ, ಹೆಬ್ಬೂರು ಗ್ರಾಮದ ದಲಿತ ಕಾಲೋನಿಯಲ್ಲಿಸುಮಾರು 50 ಕುಟುಂಬಗಳು ವಾಸ ಮಾಡುತ್ತಿವೆ.ಇರುವ ಮನೆಯಲ್ಲಿಯೇ ಎರಡು ಮೂರು ಕುಟುಂಬಗಳು ವಾಸಿಸುವ ಅನಿವಾರ್ಯತೆ ಇದ್ದು, ವಾಸ ಮಾಡಲು ತೊಂದರೆಯಾಗುತ್ತಿದೆ. ಗ್ರಾಮದಲ್ಲಿರುವ ಗ್ರಾಮಠಾಣಾ ಜಾಗದಲ್ಲಿನಿವೇಶನ ನೀಡಲು ಕ್ರಮಕೈಗೊಂಡು ಹೆಚ್ಚುವರಿ ಕುಟುಂಬಗಳಿಗೆ ವಾಸ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸ್ಮಶಾನ ಜಾಗ ಗುರುತಿಸಿ, ಅಭಿವೃದ್ದಿಪಡಿಸುವ ಕೆಲಸ ಆಗುತ್ತಿಲ್ಲ. ತಾಲೂಕಿನಾದ್ಯಂತ ಇರುವ ನಿವೇಶನ ರಹಿತ ಅರ್ಹ ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ತುರ್ತಾಗಿ ನಿವೇಶನ ಒದಗಿಸಲು ತಾಲೂಕು ಆಡಳಿತ ಮುಂದಾಗಬೇಕು ಎಂದು ದಸಂಸ ಮುಖಂಡರಾದ ಹೆಚ್‌.ವಿ.ಬಾಲರಾಜ್‌ ಮತ್ತು ಎನ್‌.ವೆಂಕಟೇಶ್‌ ಒತ್ತಾಯಿಸಿದರು.

ತಾ.ಪಂ.ಸದಸ್ಯ ಕರಿಯಪ್ಪ, ದಲಿತ ಮುಖಂಡರಾದ ನಂದಿ ಶೇಖರಪ್ಪ, ಟಿ.ಎಸ್‌.ಬಸವರಾಜ್‌, ಬಿ.ಇ.ನಾಗರಾಜ್‌, ಓಂಕಾರಪ್ಪ, ಹೆಬ್ಬೂರು ಶಿವಣ್ಣ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ನರೇಂದ್ರ ಚರ್ಚೆಯಲ್ಲಿಭಾಗವಹಿಸಿದ್ದರು.ಸಹಾಯಕ ಕೃಷಿ ನಿರ್ದೇಶಕ ಟಿ.ಎನ್‌.ಚಿತ್ರಸೇನ, ಮುಖ್ಯಾಧಿಕಾರಿ ಟಿ.ಎಸ್‌.ಗಿರೀಶ್‌, ದೌರ್ಜನ್ಯ ನಿಯಂತ್ರಣ ಮೇಲುಸ್ತುವಾರಿ ಸಮಿತಿಯ ಸದಸ್ಯ ಎಸ್‌.ಎನ್‌.ಸಿದ್ರಾಮಪ್ಪ, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಬೈರಪ್ಪ, ತಾ.ಪಂ.ಅಧಿಕಾರಿ ಜಯರಾಂ ಇನ್ನಿತರರು ಹಾಜರಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ