ಆ್ಯಪ್ನಗರ

ಅಡಕೆ ಗೋದಾಮು ನಿರ್ಮಾಣ ಶೀಘ್ರ

ಅಡಕೆ ಧಾರಣೆ ಕುಸಿಯಲು ಕಾರಣವಾಗಿರುವ ವಿದೇಶದ ಕಳಪೆ ದರ್ಜೆಯ ಅಡಕೆ ಆಮದನ್ನು ಸರಕಾರ ತಡೆ ಹಿಡಿದಿದ್ದರೂ,ಒಂದಷ್ಟು ಅಡಕೆ ಇನ್ನೂ ಬರುತ್ತಿದೆ. ರೈತರು ಅಡಕೆ ಧಾರಣೆ ಸ್ಥಿರತೆ ಕಾಪಾಡಿಕೊಳ್ಳಲು ಸಹಕಾರ ಸಂಸ್ಥೆಯ ಮೂಲಕವೇ ಅಡಕೆ ಮಾರಾಟ ಮಾಡಬೇಕು ಎಂದು ಮಾಮ್ಕೋಸ್‌ ಉಪಾಧ್ಯಕ್ಷ ಯಡಗೆರೆ ಸುಬ್ರಮಣ್ಯ ಹೇಳಿದರು.

Vijaya Karnataka 23 Aug 2019, 5:00 am
ಶೃಂಗೇರಿ: ಅಡಕೆ ಧಾರಣೆ ಕುಸಿಯಲು ಕಾರಣವಾಗಿರುವ ವಿದೇಶದ ಕಳಪೆ ದರ್ಜೆಯ ಅಡಕೆ ಆಮದನ್ನು ಸರಕಾರ ತಡೆ ಹಿಡಿದಿದ್ದರೂ,ಒಂದಷ್ಟು ಅಡಕೆ ಇನ್ನೂ ಬರುತ್ತಿದೆ. ರೈತರು ಅಡಕೆ ಧಾರಣೆ ಸ್ಥಿರತೆ ಕಾಪಾಡಿಕೊಳ್ಳಲು ಸಹಕಾರ ಸಂಸ್ಥೆಯ ಮೂಲಕವೇ ಅಡಕೆ ಮಾರಾಟ ಮಾಡಬೇಕು ಎಂದು ಮಾಮ್ಕೋಸ್‌ ಉಪಾಧ್ಯಕ್ಷ ಯಡಗೆರೆ ಸುಬ್ರಮಣ್ಯ ಹೇಳಿದರು.
Vijaya Karnataka Web CKM-22SRI1


ಪಟ್ಟಣದ ಜಿಎಸ್‌ಬಿ ಸಭಾಂಗಣದಲ್ಲಿಗುರುವಾರ ಏರ್ಪಡಿಸಿದ್ದ ಷೇರುದಾರರ ಸಮಾಲೋಚನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನಲ್ಲಿ2017 ಷೇರುದಾರರಿದ್ದರೂ,ವಾರ್ಷಿಕ ಮಹಾಸಭೆಗೆ ಹಾಜರಾಗುತ್ತಿರುವ ಷೇರುದಾರರ ಸಂಖ್ಯೆ ಕಡಿಮೆ ಇದೆ. ಇಲ್ಲಿನ ಶಾಖೆಯ ಅಡಕೆ ದಾಸ್ತಾನು ಮಾಡಲು ಗೋದಾಮಿನ ಅಗತ್ಯತೆ ಇದ್ದು, ಇದಕ್ಕಾಗಿ ಅಗತ್ಯ ಪೂರ್ವ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಹಲವಾರು ಶಾಖೆಯಲ್ಲಿಹೊಸ ಗೋದಾಮು ಕಟ್ಟಡ ನಿರ್ಮಿಸಿ,ಉದ್ಘಾಟನೆ ಮಾಡಲಾಗಿದೆ. ಸಂಸ್ಥೆಯು ಈ ವರ್ಷ 3.6 ಕೋಟಿಗೂ ಅಧಿಕ ಲಾಭ ಗಳಿಸಿದ್ದು, ವಾರ್ಷಿಕ ಮಹಾಸಭೆಯು ಸೆ.20 ರಂದು ಶಿವಮೊಗ್ಗದಲ್ಲಿನಡೆಯಲಿದೆ ಎಂದರು.

ಷೇರುದಾರರ ಪರವಾಗಿ ಮಾತನಾಡಿದ ರೈತರು, ಈ ವರ್ಷ ಸಂಸ್ಥೆಯ ಡೈರಿ ನೀಡುವಲ್ಲಿಆಡಳಿತ ಮಂಡಳಿ ವಿಫಲವಾಗಿದ್ದು, ಇಂತಹ ತಪ್ಪು ಮರುಕಳಿಸಬಾರದು. ಅಡಕೆ ಕೊಳೆ ರೋಗಕ್ಕೆ ಡ್ರೋಣ್‌ನಂತಹ ಆಧುನಿಕ ಪದ್ಧತಿ ಮೂಲಕ ಔಷಧಿಧ ಸಿಂಪಡಣೆ ಕಾಲ ಬಂದಿದ್ದರೂ, ಸಂಸ್ಥೆ ಇನ್ನೂ ಗಟಾರ್‌ ಸ್ಪ್ರೇಯರ್‌ಗೆ ಮಾತ್ರ ಸಹಾಯಧನ ನೀಡುತ್ತಿದೆ. ಕನಿಷ್ಠ ಪವರ್‌ ಸ್ಪ್ರೇಯರ್‌ಗೆ ಸಹಾಯಧನ ನೀಡುವ ವ್ಯವಸ್ಥೆ ಮಾಡಬೇಕು. ಶೃಂಗೇರಿ ಶಾಖೆಯಲ್ಲಿಅಡಕೆ ಧಾರಣೆ ಕುಸಿಯದಂತೆ ಬೇರೆಡೆಯಿಂದಲೂ ಅಡಕೆ ಖರೀದಿಸುವರು ಇಲ್ಲಿನ ಶಾಖೆಗೆ ಬರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಷೇರುದಾರರಾದ ಎ.ಎನ್‌.ರಮೇಶ್‌,ಮಾವಿನಕಾಡು ಬಾಲಕೃಷ್ಣ,ಅಣ್ಣಯ್ಯಗೌಡ,ಮಾಧುರಾವ್‌,ಮಲ್ಲಪ್ಪಹೆಗ್ಡೆ,ಭಾಸ್ಕರ್‌ ಮತ್ತಿತರರು ಮಾತನಾಡಿದರು.

ಸಂಸ್ಥೆ ನಿರ್ದೇಶಕರಾದ ಅಂಬ್ಲೂರು ಸುರೇಶ್ಚಂದ್ರ, ಸುಂಕುರ್ಡಿ ನಾಗೇಶರಾವ್‌, ಹುಲ್ಕುಳಿ ಮಹೇಶ್‌,ಬಡಿಯಣ್ಣ, ನರೇಂದ್ರ,ದೇವಾನಂದ್‌,ಮಾರ್ತಾಂಡ,ವೆಂಕಪ್ಪಗೌಡ,ವಿರೂಪಾಕ್ಷಪ್ಪ, ಸ್ಥಳೀಯ ಸಂಸ್ಥೆ ವ್ಯವಸ್ಥಾಪಕಿ ನಾಗವೇಣಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ