ಆ್ಯಪ್ನಗರ

ನಿರಂತರ ವಿದ್ಯುತ್‌ ಕಡಿತ: ಗ್ಯಾಸ್‌ಲೈಟ್‌ ಬಳಕೆ

ಕಳೆದ ಮೂರ್ನಾಲ್ಕು ದಿನದಿಂದ ಮೂಡಿಗೆರೆ ತಾಲೂಕಿನಲ್ಲಿ ಸುರಿಯುತ್ತಿರು ಮಳೆ ಗಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮೂಲೆಗೆ ಬಿಸಾಡಿದ್ದ ಗ್ಯಾಸ್‌ಲೈಟ್‌ಗಳನ್ನು ಇದೀಗ ಪುನಾ ರಿಪೇರಿ ಮಾಡಿಸಿಕೊಂಡು ಮರು ಬಳಕೆ ಮಾಡಲು ಪ್ರಾರಂಭಿಸಿದ್ದಾರೆ.

Vijaya Karnataka 15 Jun 2019, 5:00 am
ಮೂಡಿಗೆರೆ : ಕಳೆದ ಮೂರ್ನಾಲ್ಕು ದಿನದಿಂದ ಮೂಡಿಗೆರೆ ತಾಲೂಕಿನಲ್ಲಿ ಸುರಿಯುತ್ತಿರು ಮಳೆ ಗಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮೂಲೆಗೆ ಬಿಸಾಡಿದ್ದ ಗ್ಯಾಸ್‌ಲೈಟ್‌ಗಳನ್ನು ಇದೀಗ ಪುನಾ ರಿಪೇರಿ ಮಾಡಿಸಿಕೊಂಡು ಮರು ಬಳಕೆ ಮಾಡಲು ಪ್ರಾರಂಭಿಸಿದ್ದಾರೆ.
Vijaya Karnataka Web CKM-14MDG-P6


ವಿದ್ಯುತ್‌ ಸಮಸ್ಯೆಯಿಂದ ಜನ ನಿತ್ಯ ತತ್ತರಿಸುವಂತಾಗಿದೆ.ತಾಲೂಕಿನಲ್ಲಿ ಮಳೆಗಾಲ ಪ್ರಾರಂಭವಾದಂತೆ ಬಹುತೇಕ ಕಡೆಗಳಲ್ಲಿ ಮರಬಿದ್ದು, ಟ್ರಾನ್ಸ್‌ಫಾರ್ಮರ್‌ ಹಾಳಾಗಿ ವಿದ್ಯುತ್‌ ಸಮಸ್ಯೆ ಎದುರಾಗುತ್ತಿರುತ್ತದೆ. ಕಳೆದ 2 ದಿನದ ಹಿಂದೆ ಹೆಸಗಲ್‌ ಗ್ರಾ.ಪಂ. ವ್ಯಾಪ್ತಿಯ ಸರಕಾರಿ ಶಾಲೆ ಹತ್ತಿರವಿರುವ ಟ್ರಾನ್ಸ್‌ಫಾರ್ಮರ್‌ ಸುಟ್ಟು ಹೋಗಿದೆ. ಹಾಗಾಗಿ ಕಳೆದ ಎರಡು ದಿನದಿಂದ ಹೆಸಗಲ್‌ ಮತ್ತು ಶಕ್ತಿನಗರದಲ್ಲಿ ವಿದ್ಯುತ್‌ ಕಡಿತಗೊಂಡು ಜನರು ಕತ್ತಲೆಯಲ್ಲಿ ಕಳೆಯುವಂತಾಗಿದೆ.ಊರುಬಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೊಸಕೆರೆ, ಸತ್ತಿಗನಹಳ್ಳಿ, ಬೈರಾಪುರ ಗ್ರಾಮದಲ್ಲಿ ಕಳೆದ 5 ದಿನದಿಂದ ವಿದ್ಯುತ್‌ ಕಡಿತಗೊಂಡಿದ್ದು, ಇದೂವರೆಗೂ ಸರಿಪಡಿಸಿಲ್ಲ. ತಾಲೂಕಿನಲ್ಲಿ ಬಹುತೇಕ ಕಡೆಗಳಲ್ಲಿ ವಿದ್ಯುತ್‌ ಕಂಬಗಳು ತೋಟದೊಳಗೆ ಹಾದು ಹೋಗಿದ್ದರಿಂದ ಮಳೆಗಾಲದಲ್ಲಿ ಮರಗಳು ವಿದ್ಯುತ್‌ ಕಂಬಗಳ ಮೇಲೆ ಬೀಳುವುದರಿಂದ ವಿದ್ಯುತ್‌ ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ಹಾಗಾಗಿ ತೋಟದೊಳಗೆ ಹಾದು ಹೋಗಿರುವ ವಿದ್ಯುತ್‌ ಕಂಬಗಳನ್ನು ರಸ್ತೆ ಮಾರ್ಗದಲ್ಲಿ ಹಾದು ಹೋಗುವಂತೆ ಮಾಡಬೇಕೆಂದು ಜನರ ಆಗ್ರಹವಾಗಿದೆ. ಹಿಂದೆ ಮನೆಗಳಲ್ಲಿ,ಕಾರ್ಯಕ್ರಮಗಳಲ್ಲಿ ಗ್ಯಾಸ್‌ಲೈಟ್‌ ಬಳಸುತ್ತಿದ್ದರು. ತಂತ್ರಜ್ಞಾನ ಮುಂದುವರೆದಂತೆ ಚಾರ್ಜರ್‌ ಬ್ಯಾಟರಿಗಳು, ಯುಪಿಎಸ್‌ಗಳು ಬಂದ ಬಳಿಕ ಗ್ಯಾಸ್‌ಲೈಟ್‌ಗಳೆಲ್ಲಾ ಮೋಲೆಗೆ ಸೇರಿದ್ದವು. ಇದೀಗ ನಿರಂತರ ವಿದ್ಯುತ್‌ ಸಮಸ್ಯೆಯಿಂದ ಚಾರ್ಜರ್‌ ಲೈಟ್‌ ಹಾಗೂ ಯುಪಿಎಸ್‌ಗಳು ಚಾರ್ಜ್‌ ಮಾಡಲು ಸಾಧ್ಯವಾಗದೇ ಹಿಂದೆ ಉಪಯೋಗಿಸಿ ಮೂಲೆಯಲ್ಲಿಟ್ಟ ಗ್ಯಾಸ್‌ಲೈಟ್‌ಗಳನ್ನು ಪಟ್ಟಣದ ಗ್ಯಾಸ್‌ ಅಂಗಡಿಗೆ ಜನರು ಆಗಮಿಸಿ, ರಿಪೇರಿ ಮಾಡಿಸಿಕೊಂಡು ಬಳಸುವ ಪರಿಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ