ಆ್ಯಪ್ನಗರ

ಕುಕ್ಕರ್‌ ಸಿಡಿದು ಅಂಗನವಾಡಿ ಮಗುವಿಗೆ ಗಾಯ

ನಗರದ ರಾಮನಹಳ್ಳಿ ಅಂಗನವಾಡಿಯಲ್ಲಿ ಅಡುಗೆ ತಯಾರಿಸುವಾಗ ಕುಕ್ಕರ್‌ ಸಿಡಿದು ಬಾಲಕನೊಬ್ಬ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

Vijaya Karnataka 10 Nov 2018, 5:00 am
ಚಿಕ್ಕಮಗಳೂರು : ನಗರದ ರಾಮನಹಳ್ಳಿ ಅಂಗನವಾಡಿಯಲ್ಲಿ ಅಡುಗೆ ತಯಾರಿಸುವಾಗ ಕುಕ್ಕರ್‌ ಸಿಡಿದು ಬಾಲಕನೊಬ್ಬ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
Vijaya Karnataka Web SMG-0911-2-15-9rudrap6


ಗಾಯಗೊಂಡ ಮಗುವನ್ನು ರಾಮನಹಳ್ಳಿಯ ಮಹಮದ್‌(5)ಎಂದು ಗುರುತಿಸಲಾಗಿದ್ದು, ತಲೆ ಮತ್ತು ಕೆನ್ನೆಗೆ ಸುಟ್ಟಗಾಯವಾಗಿದ್ದು, ಮಗುವನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಅಡುಗೆ ಸಿಬ್ಬಂದಿ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ತಯಾರಿಸಲು ಮುಂದಾದಾಗ ತಾಂತ್ರಿಕ ಸಮಸ್ಯೆಯಿಂದ ಕುಕ್ಕರ್‌ ಏಕಾಏಕಿ ಮುಚ್ಚಳ ಸಿಡಿದಿದೆ. ಸಿಡಿದ ರಭಸಕ್ಕೆ ಮಗುವಿನ ಮುಖಕ್ಕೆ ಬಿಸಿ ಅಹಾರ ಪದಾರ್ಥ ಸಿಡಿದಿದ್ದು, ಮುಚ್ಚಳ ತಲೆಗೆ ತಾಗಿದೆ.

ಪೋಷಕರ ಆಕ್ರೋಶ

ಘಟನೆ ನಡೆದ ಕೂಡಲೇ ಸ್ಥಳಕ್ಕಾಗಮಿಸಿದ ಪೋಷಕರು ಮತ್ತು ಸ್ಥಳೀಯರು ಅಂಗನವಾಡಿ ಕಾರ್ಯಕರ್ತೆ ಮತ್ತು ಆಯಾ ಅವರ ನಿರ್ಲಕ್ಷ್ಯತನದಿಂದಾಗಿ ಅವಘಡವಾಗಿದೆ ಎಂದು ಆರೋಪಿಸಿ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ