ಆ್ಯಪ್ನಗರ

ಅಪಘಾತ ನಿಯಂತ್ರಣಕ್ಕೆ ಸಹಕಾರ ಅಗತ್ಯ

ಅಪಘಾತ ನಿಯಂತ್ರಣಕ್ಕೆ ಸ್ಥಳೀಯ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಪಿಎಸ್‌ಐ ರಫೀಕ್‌ ಹೇಳಿದರು.

Vijaya Karnataka 18 Aug 2019, 5:00 am
ಅಜ್ಜಂಪುರ : ಅಪಘಾತ ನಿಯಂತ್ರಣಕ್ಕೆ ಸ್ಥಳೀಯ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಪಿಎಸ್‌ಐ ರಫೀಕ್‌ ಹೇಳಿದರು.
Vijaya Karnataka Web cooperation is essential for accident control
ಅಪಘಾತ ನಿಯಂತ್ರಣಕ್ಕೆ ಸಹಕಾರ ಅಗತ್ಯ


ಸಮೀಪ ಚನ್ನಾಪುರ ಗ್ರಾಮದಲ್ಲಿ ಭಾನುವಾರ ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ನೀಡಿರುವ ಅಪಘಾತ ನಿಯಂತ್ರಿಸುವ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಮಾತನಾಡಿದರು.

ರಸ್ತೆ ಚನ್ನಾಗಿರುವುದರಿಂದ ಈ ಭಾಗದಲ್ಲಿ ಪ್ರತಿದಿನ ಅಪಘಾತ ಸಂಭವಿಸುತ್ತಿವೆ. ಇದಕ್ಕೆಲ್ಲಾ ಅತಿ ವೇಗವೇ ಕಾರಣ. ಅಜ್ಜಂಪುರ ಠಾಣೆ ವ್ಯಾಪ್ತಿಯ 12 ಗ್ರಾಮ ಪಂಚಾಯಿತಿಯಲ್ಲಿ ಅತಿ ವೇಗ ಮತ್ತು ಅಪಘಾತ ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಇಡಲಾಗಿದೆ. ಬುಕ್ಕಾಂಬುಧಿ, ಶಿವನಿ, ಸೊಲ್ಲಾಪುರ, ಹಿರೇಕಾನವಂಗಲ ಗ್ರಾಮಗಳಲ್ಲಿ ಬ್ಯಾರಿಕೇಡ್‌ ಇಟ್ಟಿರುವುದರಿಂದ ಸ್ವಲ್ಪ ಮಟ್ಟಿಗೆ ಅಪಘಾತ ನಿಯಂತ್ರಣ ತಹಬಂದಿಗೆ ಬಂದಿದೆ. ಬುಕ್ಕಾಂಬುಧಿ ಮತ್ತು ಅಜ್ಜಂಪುರದಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ ಎಂದರು.ಬಗ್ಗವಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷ ಸಿ.ಎಸ್‌. ಸಿದ್ದೇಗೌಡ, ಜಿ. ರವಿಕುಮಾರ್‌, ನಾಗಭೂಷಣ್‌, ಸಿ.ಬಿ. ಚಂದ್ರಪ್ಪ, ರವಿ, ಸ್ಥಳೀಯ ಮುಖಂಡರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ