ಆ್ಯಪ್ನಗರ

ಗ್ರಾಮೀಣ ಕ್ರೀಡೆ ಉಳಿಸಲು ಸಹಕಾರ ಅಗತ್ಯ

ಕ್ರಿಕೆಟ್‌ನಂತಹ ಕ್ರೀಡೆ ಗ್ರಾಮೀಣ ಭಾಗಗಳಿಗೂ ಹರಡಿದ್ದು ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ, ಉದ್ಯೋಗಗಳಿಸಲು ಕ್ರಿಕೆಟ್‌ ಉತ್ತಮ ಅವಕಾಶವಾಗಿದೆ ಎಂದು ಜೆಡಿಎಸ್‌ ತಾಲೂಕು ಉಪಾಧ್ಯಕ್ಷ ಹಾಗೂ ಕಡೂರಹಳ್ಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎಚ್‌.ನೀಲಕಂಠಪ್ಪ ಅಭಿಪ್ರಾಯಪಟ್ಟರು.

Vijaya Karnataka 21 May 2019, 5:00 am
ಕಡೂರು: ಕ್ರಿಕೆಟ್‌ನಂತಹ ಕ್ರೀಡೆ ಗ್ರಾಮೀಣ ಭಾಗಗಳಿಗೂ ಹರಡಿದ್ದು ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ, ಉದ್ಯೋಗಗಳಿಸಲು ಕ್ರಿಕೆಟ್‌ ಉತ್ತಮ ಅವಕಾಶವಾಗಿದೆ ಎಂದು ಜೆಡಿಎಸ್‌ ತಾಲೂಕು ಉಪಾಧ್ಯಕ್ಷ ಹಾಗೂ ಕಡೂರಹಳ್ಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎಚ್‌.ನೀಲಕಂಠಪ್ಪ ಅಭಿಪ್ರಾಯಪಟ್ಟರು.
Vijaya Karnataka Web cooperation is essential to save rural sports
ಗ್ರಾಮೀಣ ಕ್ರೀಡೆ ಉಳಿಸಲು ಸಹಕಾರ ಅಗತ್ಯ


ತಾಲೂಕಿನ ಅಲಘಟ್ಟ ಪಂಚೆಹೊಸಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಭಾನುವಾರ ಗ್ರಾಮದ ಯುವಕರು ಹಾಗೂ ಪ್ರೆಂಡ್ಸ್‌ ಕ್ರಿಕೇಟರ್ಸ್‌ ಆಯೋಜಿಸಿದ್ದ ಟೆನಿಸ್‌ ಬಾಲ್‌ ಟೂರ್ನಿಮೆಂಟ್‌ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಇಂದು ಕ್ರಿಕೆಟ್‌ ಅಂತಾರಾಷ್ಟ್ರೀಯ ಕ್ರೀಡೆಯಾಗಿದ್ದು, ಭಾರತ ದೇಶ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿರುವುದಲ್ಲದೆ ಅನೇಕರನ್ನು ಅಂತಾರಾಷ್ಟ್ರಿಯ ಮಟ್ಟದಲ್ಲಿ ಬೆಳೆಸಿದೆ. ಭಾರತದ ಮಹಿಳಾ ಕ್ರಿಕೆಟಿನ ತಾರೆ ಕಡೂರಿನ ವೇದಾಕೃಷ್ಣಮೂರ್ತಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಪ್ರತಿನಿಧಿಸಿರುವುದು ಕನ್ನಡಿಗರು ಮತ್ತು ಕಡೂರಿನ ಹೆಮ್ಮೆಯ ವಿಷಯವಾಗಿದೆ ಎಂದರು.

ಗ್ರಾಮೀಣ ಭಾಗಗಳಲ್ಲಿ ಯುವಕರು ನಡೆಸುವ ಯಾವುದೇ ಕ್ರೀಡೆಗಳನ್ನು ಪ್ರೋತ್ಸಾಹಿಸಿದರೆ ನಮ್ಮಲ್ಲಿರುವ ಉತ್ತಮ ಕ್ರೀಡಾಪಟುವನ್ನು ರಾಜ್ಯ, ರಾಷ್ಟ್ರಮಟ್ಟಕ್ಕೆ ಕಳುಹಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡೆಗಳನ್ನು ಬೆಳೆಸುವ ಗ್ರಾಮಸ್ಥರ ಸಹಕಾರ ಪ್ರಮುಖವಾಗಿರುತ್ತದೆ ಎಂದರು.

ಅಲಘಟ್ಟ ಪಂಚೆಹೊಸಹಳ್ಳಿಯ ಯುವಕರು ಆಯೋಜಿಸಿರುವ ಕ್ರಿಕೆಟ್‌ ಪಂದ್ಯಾವಳಿಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.

ಕ್ರೀಡಾಕೂಟದ ವ್ಯವಸ್ಥೆಯನ್ನು ಯಶೋಧ ಆನಂದ್‌ ಮತ್ತು ಮಧು, ಗೌಡ್ನರ ಆನಂದ್‌, ಭಾರತೀಯ ಸೇನೆಯ ದೇವು ಗೋಪಿ, ಅಲಘಟ್ಟದ ಧರಣಿ, ಹರೀಶ್‌ ವ್ಯವಸ್ಥೆ ಮಾಡಿದ್ದರು.

ಗ್ರಾಮೀಣ ತಂಡಗಳು ಭಾಗವಹಿಸಿದ್ದು 2 ದಿನಗಳ ಕಾಲ ಪಂದ್ಯಗಳು ನಡೆಯಲಿವೆ. ಪ್ರಥಮ 8 ಸಾವಿರ ರೂ., ದಾನಿ ನೀಲಕಂಠಪ್ಪ, ದ್ವಿತೀಯ 5ಸಾವಿರ ರೂ. ದಾನಿ ಪೂಜಾರಿ ರಾಜು, ತೃತೀಯ ಬಹುಮಾನ 3 ಸಾವಿರ ರೂ. ದಾನಿ ಕವಿತಾ ಪರಮೇಶ್‌ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ