ಆ್ಯಪ್ನಗರ

ಭಯ ಹುಟ್ಟಿಸುತ್ತೆ ಮೂಡಿಗೆರೆ ಸರಕಾರಿ ವೈದ್ಯನ ಟ್ರಾವೆಲ್ ಹಿಸ್ಟರಿ!

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದ ಕೋವಿಡ್ 19 ಮೊದಲ ಪ್ರಕರಣದ ವೈದ್ಯನ ಟ್ರಾವೆಲ್ ಹಿಸ್ಟರಿ ನೋಡಿದ್ರೆ ಭಯ ಹುಟ್ಟಿಸುವ ಮಟ್ಟಿಗೆ ತಲುಪಿದೆ. ಕಳೆದ 20 ದಿನದಲ್ಲಿ ಹಲವು ರೋಗಿಗಳಿಗೆ ಚಿಕಿತ್ಸೆ ಜೊತೆ ಟ್ರಾವೆಲ್ ಕೂಡ ಮಾಡಿ ಬಂದಿದ್ದಾರೆ.

Vijaya Karnataka Web 19 May 2020, 2:52 pm
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ನಂದೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಕೊರೊನಾ ಪಾಸಿಟಿವ್ ವರದಿ ಬಂದ ಬಳಿಕ ಗ್ರೀನ್‌ ಝೋನ್‌ ಆಗಿದ್ದ ಚಿಕ್ಕಮಗಳೂರು ಕೂಡ ವೈರಸ್ ಇರುವ ಜಿಲ್ಲೆಯಾಗಿ ಮಾರ್ಪಟ್ಟಿತು.
Vijaya Karnataka Web Virus


ಈಗ ಮೂಡಿಗೆರೆ ಸರಕಾರಿ ವೈದ್ಯನ ಟ್ರಾವೆಲ್ ಹಿಸ್ಟರಿ ಭಯ ಹುಟ್ಟಿಸುತ್ತಿದೆ. ಕಳೆದ 20 ದಿನದಲ್ಲಿ ಸೋಂಕಿತ ವೈದ್ಯ ಬೆಂಗಳೂರು, ಕೊಡಗಿಗೆ ಹೋಗಿ ಬಂದಿದ್ದಾರೆ. ಇಷ್ಟು ಮಾತ್ರವಲ್ಲ ಕಳೆದ 15 ದಿನದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರಿಗೆ ಈ ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಅಲ್ಲದೇ ಮೂಡಿಗೆರೆ ಪಟ್ಟಣದ ಹಲವರೊಂದಿಗೆ ಈ ವೈದ್ಯರು ನೇರ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ವೈದ್ಯನ ಜೊತೆ ಕೆಲಸ ನಿರ್ವಹಿಸುತ್ತಿದ್ದ ನರ್ಸ್, ಆಶಾ ಕಾರ್ಯಕರ್ತೆಯರಿಗೂ ಈಗ ಕೊರೊನಾ ವೈರಸ್ ನಡುಕ ಶುರುವಾಗಿದೆ. ಇದರ ಜೊತೆಗೆ ವೈದ್ಯನ ಅಕ್ಕಪಕ್ಕದ ಮನೆಯವರು, ಆಪ್ತವಲಯದಲ್ಲಿ ಭೀತಿ ಹೆಚ್ಚಿದೆ. ಹೀಗಾಗಿ ಆರೋಗ್ಯ ಇಲಾಖೆ ಈಗಾಗಲೇ ಅನೇಕರನ್ನು ಪರೀಕ್ಷೆಗೆ ಒಳಪಡಿಸಿದೆ.

ಕರ್ನಾಟಕಕ್ಕೆ ಕೊರೊನಾ ಬೆಂಕಿ ಬಿದ್ದಿದೆ, ಈಗೇನು ಮಾಡುವಿರಿ ಮುಖ್ಯಮಂತ್ರಿಗಳೆ?


ಸದ್ಯ ಜಿಲ್ಲೆಯಲ್ಲಿ 2 ಕೊರೊನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದಿವೆ. 43 ವರ್ಷದ ವೈದ್ಯ ಸೇರಿದಂತೆ 27 ವರ್ಷದ ಗರ್ಭಿಣಿಯಲ್ಲಿ ಕೋವಿಡ್‌ 19 ಸೋಂಕು ಕಾಣಿಸಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ