ಆ್ಯಪ್ನಗರ

ಭ್ರಷ್ಟಾಚಾರ ಮುಕ್ತ ಆಡಳಿತ: ಶಾಸಕ ಅಭಿಮತ

ಪುರಸಭೆ ಚುನಾವಣೆಗೆ ಅಭಿವೃದ್ಧಿಯೇ ನಮ್ಮ ಗುರಿ, ಸಹಕಾರವೇ ನಮ್ಮ ಶಕ್ತಿಯಾಗಿದೆ. ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ಬಿಜೆಪಿಗೆ ಬೆಂಬಲಿಸಿ ಎಂದು ಶಾಸಕ ಬೆಳ್ಳಿಪ್ರಕಾಶ್‌ ತಿಳಿಸಿದರು.

Vijaya Karnataka 28 May 2019, 5:00 am
ಕಡೂರು: ಪುರಸಭೆ ಚುನಾವಣೆಗೆ ಅಭಿವೃದ್ಧಿಯೇ ನಮ್ಮ ಗುರಿ, ಸಹಕಾರವೇ ನಮ್ಮ ಶಕ್ತಿಯಾಗಿದೆ. ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ಬಿಜೆಪಿಗೆ ಬೆಂಬಲಿಸಿ ಎಂದು ಶಾಸಕ ಬೆಳ್ಳಿಪ್ರಕಾಶ್‌ ತಿಳಿಸಿದರು.
Vijaya Karnataka Web SMG-2705-2-15-27KDR2


ಪಟ್ಟಣದ ವಾರ್ಡ್‌ ನಂ.3ರಲ್ಲಿನ ಬಿಜೆಪಿ ಅಭ್ಯರ್ಥಿ ಕೆ.ಪಿ. ರಾಘವೇಂದ್ರ ಅವರ ಪರವಾಗಿ ಸೋಮವಾರ ಮನೆಮನೆಗೆ ಮತಯಾಚಿಸಿ ಅವರು ಮಾತನಾಡಿದರು.

ಪುರಸಭೆ ಚುನಾವಣೆಗೆ ಬಿಜೆಪಿ ನಗರ ಘಟಕವು 6 ಅಂಶಗಳ ಕಾರ್ಯಕ್ರಮದ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಅವುಗಳಲ್ಲಿ ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ, ಕುಡಿಯುವ ನೀರು, ರಸ್ತೆ, ಒಳಚರಂಡಿ, ಬೀದಿದೀಪ, ಸ್ವಚ್ಛತೆಗೆ ಆದ್ಯತೆ, ಪಟ್ಟಣ ನಿವಾಸಿಗಳ ಪುರಸಭಾ ಕೆಲಸಕಾರ್ಯಗಳಿಗೆ ತ್ವರಿತಕ್ರಮ, ವಸತಿಹೀನ ಬಡಕುಟುಂಬಗಳ ವಸತಿಗೆ ವಿಶೇಷ ಆದ್ಯತೆ, ಬಡವರ ಅಲ್ಪಸಂಖ್ಯಾತರ ಆಸ್ತಿಗಳ ರಕ್ಷ ಣೆ, ಹಸಿರು ನಗರದ ಉದ್ದೇಶಗಳಿರುವ ಅಂಶಗಳ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಮತಯಾಚಿಸಲಿದ್ದೇವೆ ಎಂದರು.

3ನೇ ವಾರ್ಡ್‌ನ ಬಿಜೆಪಿ ಪಕ್ಷ ದ ಅಭ್ಯರ್ಥಿ ಉತ್ತಮ ವ್ಯಕ್ತಿತ್ವ ಉಳ್ಳವರಾಗಿದ್ದು, ಉತ್ಸಾಹಿ ಯುವಕರಾಗಿದ್ದಾರೆ. ವಾರ್ಡ್‌ನ ಸಮಸ್ಯೆಗಳನ್ನು ಬಲ್ಲವರಾಗಿದ್ದಾರೆ. ಇಂತಹವರನ್ನು ಗೆಲ್ಲಿಸುವುದರಿಂದ ತಮ್ಮ ವಾರ್ಡ್‌ನ ಸಮಸ್ಯೆಗಳನ್ನು ಬೇಗ ಪರಿಹರಿಸಿಕೊಳ್ಳಲು ಸಾಧ್ಯ ಎಂದು ಮತದಾರರಿಗೆ ಮನದಟ್ಟು ಮಾಡಿಕೊಟ್ಟರು.

ಕೇಂದ್ರದಲ್ಲಿ ಬಿಜೆಪಿ ಸರಕಾರ ಮತ್ತೊಮ್ಮೆ ಗೆಲ್ಲುವುದರ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದು ಇದು ಸಹ ನಮಗೆ ವರದಾನವಾಗಲಿದೆ ಎಂದರು.

ಈ ಸಂದರ್ಭ ಅರೇಕಲ್‌ ಆರ್‌.ಪ್ರಕಾಶ್‌, ಜಿ.ಪಂ. ಸದಸ್ಯ ಕೆ.ಆರ್‌.ಮಹೇಶ್‌ಒಡೆಯರ್‌, ದೇವೇಂದ್ರ, ಕಲ್ಲತ್ತಿ ಖಾನವಳಿ ಶಿವಣ್ಣ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ