ಆ್ಯಪ್ನಗರ

ಪೋಷಕರ ಬೆದರಿಕೆಗೆ ರಕ್ಷಣೆ ಕೋರಿದ ದಂಪತಿ

ಪರಸ್ಪರ ಪ್ರೀತಿಸಿ ವಿವಾಹವಾದ ಬಳಿಕ ಬೆದರಿಕೆ ಹಿನ್ನೆಲೆಯಲ್ಲಿ ಊರು ತೊರೆದು ಬಂದಿರುವ ನವದಂಪತಿ, ತಮಗೆ ರಕ್ಷ ಣೆ ನೀಡುವಂತೆ ಇಲ್ಲಿನ ಪೊಲೀಸ್‌ ಠಾಣೆ ಮೆಟ್ಟಿಲು ಏರಿದ್ದಾರೆ.

Vijaya Karnataka 5 Mar 2019, 5:00 am
ಶೃಂಗೇರಿ : ಪರಸ್ಪರ ಪ್ರೀತಿಸಿ ವಿವಾಹವಾದ ಬಳಿಕ ಬೆದರಿಕೆ ಹಿನ್ನೆಲೆಯಲ್ಲಿ ಊರು ತೊರೆದು ಬಂದಿರುವ ನವದಂಪತಿ, ತಮಗೆ ರಕ್ಷ ಣೆ ನೀಡುವಂತೆ ಇಲ್ಲಿನ ಪೊಲೀಸ್‌ ಠಾಣೆ ಮೆಟ್ಟಿಲು ಏರಿದ್ದಾರೆ.
Vijaya Karnataka Web couple seeking protection for parental change
ಪೋಷಕರ ಬೆದರಿಕೆಗೆ ರಕ್ಷಣೆ ಕೋರಿದ ದಂಪತಿ


ಠಾಣೆಗೆ ಭಾನುವಾರ ದೂರು ಸಲ್ಲಿಸಿರುವ ದಂಪತಿ, ಸೂಕ್ತ ರಕ್ಷ ಣೆ ಕೋರಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ನೇಕಾರ ಬೀದಿಯ ರುಬಿಯಾ ಹಾಗೂ ಅದೇ ಊರಿನ ರಾಜು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. 2018ರಲ್ಲಿ ಶೃಂಗೇರಿ ತಾಲೂಕಿನ ಬೆಳಂದೂರು ಗ್ರಾಮದ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ರುಬಿಯಾ ಮಗುವಿಗೆ ಜನ್ಮ ನೀಡಿದ್ದಾರೆ.

ವಿವಾಹಕ್ಕೆ ಎರಡೂ ಕಡೆ ಪೋಷಕರ ವಿರೋಧವಿದ್ದ ಕಾರಣ ಊರನ್ನೇ ತೊರೆದು ಇಲ್ಲಿಗೆ ಬಂದು, ವಿವಾಹವಾಗಿ ಜೀವನ ನಡೆಸುತ್ತಿದ್ದಾರೆ. ಇದೀಗ ಚಡಚಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪೋಷಕರು ದೂರು ನೀಡಿದ್ದಾರೆ. ಯುವತಿಯನ್ನು ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ರುಬಿಯಾ ಪೋಷಕರು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ರುಬಿಯಾ ತನ್ನ ಹೆಸರನ್ನು ಪ್ರೀತಿ ಎಂದು ಬದಲಾಯಿಸಿಕೊಂಡಿದ್ದಾರೆ. ತಾವು ಸ್ವ ಇಚ್ಛೆಯಿಂದ ವಿವಾಹವಾಗಿದ್ದು, ಇಬ್ಬರೂ ವಯಸ್ಕರಾಗಿದ್ದೇವೆ. ಬೇರೆ ಬೇರೆ ಧರ್ಮಕ್ಕೆ ಸೇರಿರುವುದರಿಂದ ಜೀವ ಬೆದರಿಕೆ ಇದೆ. ನಮಗೆ ರಕ್ಷ ಣೆ ನೀಡಬೇಕು ಎಂದು ಪೊಲೀಸರಲ್ಲಿ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ