ಆ್ಯಪ್ನಗರ

ಜುಲೈ ಅಂತ್ಯದ ವರೆಗೂ ಸಾಲ ಮನ್ನಾ ಸೌಲಭ್ಯ ವಿಸ್ತರಣೆ

ಸಾಲ ಮನ್ನಾ ಯೋಜನೆಯಲ್ಲಿ 2018 ಜು. 10ಕ್ಕೆ ಸುಸ್ತಿ ಹಾಗೂ ಚಾಲ್ತಿಯಿರುವ, ಗಡುವು ಮುಗಿದ ಸಾಲಗಳಿಗೆ ಒಂದು ಲಕ್ಷ ಕ್ಕಿಂತ ಹೆಚ್ಚಿನ ಅಸಲು ಮತ್ತು ಮರು ಪಾವತಿ ದಿನಾಂಕದ ವರೆಗಿನ ಪೂರ್ಣ ಬಡ್ಡಿಯನ್ನು ರೈತರು ಪಾವತಿಸಿ ಲಕ್ಷ ರೂ. ವರೆಗಿನ ಸಾಲ ಮನ್ನಾ ಸೌಲಭ್ಯ ಪಡೆಯಲು ಜುಲೈ ಅಂತ್ಯದ ವರೆಗೂ ಕಾಲವಕಾಶ ವಿಸ್ತರಿಸಲಾಗಿದೆ ಎಂದು ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಬಿ.ರಾಜೇಂದ್ರ ತಿಳಿಸಿದ್ದಾರೆ.

Vijaya Karnataka 24 Jul 2019, 5:00 am
ಜಯಪುರ : ಸಾಲ ಮನ್ನಾ ಯೋಜನೆಯಲ್ಲಿ 2018 ಜು. 10ಕ್ಕೆ ಸುಸ್ತಿ ಹಾಗೂ ಚಾಲ್ತಿಯಿರುವ, ಗಡುವು ಮುಗಿದ ಸಾಲಗಳಿಗೆ ಒಂದು ಲಕ್ಷ ಕ್ಕಿಂತ ಹೆಚ್ಚಿನ ಅಸಲು ಮತ್ತು ಮರು ಪಾವತಿ ದಿನಾಂಕದ ವರೆಗಿನ ಪೂರ್ಣ ಬಡ್ಡಿಯನ್ನು ರೈತರು ಪಾವತಿಸಿ ಲಕ್ಷ ರೂ. ವರೆಗಿನ ಸಾಲ ಮನ್ನಾ ಸೌಲಭ್ಯ ಪಡೆಯಲು ಜುಲೈ ಅಂತ್ಯದ ವರೆಗೂ ಕಾಲವಕಾಶ ವಿಸ್ತರಿಸಲಾಗಿದೆ ಎಂದು ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಬಿ.ರಾಜೇಂದ್ರ ತಿಳಿಸಿದ್ದಾರೆ.
Vijaya Karnataka Web CKM-21JPR1


ಪ್ರಕಟಣೆ ನೀಡಿರುವ ಅವರು, 2018 ಜು. 10ಕ್ಕೆ ಸಾಲವು ಚಾಲ್ತಿಯಲ್ಲಿದ್ದು, ಒಂದು ಲಕ್ಷ ಕ್ಕಿಂತ ಹೆಚ್ಚಿನ ಅಸಲನ್ನು ಗಡುವು ದಿನಾಂಕದೊಳಗೆ ರೈತರು ಪಾವತಿಸದಿದ್ದಲ್ಲಿ ಪ್ರಸಕ್ತ ಮಾಸಾಂತ್ಯದೊಳಗೆ ಬಡ್ಡಿ ಸಹಿತ ಸಂದಾಯ ಮಾಡಿದ ಕೂಡಲೇ ಈ ಮಾಹಿತಿಯನ್ನು ಸಹಕಾರ ಸಂಘಗಳು ತಮ್ಮ ತತ್ರಾಂಶದಲ್ಲಿ ಅಳವಡಿಸಿ ಅವಶ್ಯಕ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳ ನಿರ್ದೇಶನದಂತೆ ಸೂಚಿಸಲಾಗಿದೆ.

2018 ಜು. 10ಕ್ಕೆ ಸಾಲವು ಸುಸ್ತಿಯಿದ್ದಲ್ಲಿ ರೈತರು ಒಂದು ಲಕ್ಷ ಕ್ಕಿಂತ ಹೆಚ್ಚಿನ ಅಸಲು ತತ್ರಾಂಶದ ಕಲಂ 52ರ ನಮೂನೆಯಲ್ಲಿ ಗಡುವು ದಿನಾಂಕದ ವರೆಗಿನ ಸಂಘಗಳು ದಾಖಲಿಸಿರುವ ಬಡ್ಡಿ ಮತ್ತು ಮರು ಪಾವತಿ ದಿನಾಂಕದ ವರೆಗೆ ಶೇ 10ಕ್ಕಿಂತ ಕಡಿಮೆಯಿಲ್ಲದ ಬಡ್ಡಿಯನ್ನು ಸಂಘಗಳಿಗೆ ಸಂದಾಯ ಮಾಡಿದ ಬಳಿಕ ತತ್ರಾಂಶದಲ್ಲಿ ಅಳವಡಿಸಲು ಆದೇಶಿಸಲಾಗಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ