ಆ್ಯಪ್ನಗರ

ಕಾಂಗ್ರೆಸ್ ಮುಸಲ್ಮಾನರ ಪರವಾಗಿದ್ದಕ್ಕೆ ದೇಶ ವಿಭಜನೆಯಾಗಿದ್ದು: ಸಿಟಿ ರವಿ

ಮತೀಯವಾದದ ಓಲೈಕೆ ಅಲ್ಲದೇ ಮತ್ತೇನು ಅಲ್ಲ. ಮೈಕ್ ಸೌಂಡು ಎಷ್ಟಿರಬೇಕು ಎನ್ನುವುದನ್ನು ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ನಾವು ಮುಸ್ಲಿಮರ ಪರವಾಗಿ ಇದ್ದೇವೆ, ಹಿಂದುಗಳ ಪರ ಅಲ್ಲ ಎಂಬ ನಿಲುವು ಕಾಂಗ್ರೆಸನದ್ದು.

Vijaya Karnataka Web 13 May 2022, 11:04 am
ಚಿಕ್ಕಮಗಳೂರು: ಆಜಾನ್ ಪರ ಕಾಂಗ್ರೆಸ್ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ಹೇಗಿದೆ ಎಂದರೆ ದೇಶದ ನ್ಯಾಯಾಲಯದ ತೀರ್ಪಿಗಿಂತ ನಮ್ಮದು ಮತಬ್ಯಾಂಕ್ ರಾಜಕಾರಣ ಎನ್ನುವಂತಿದೆ ಎಂದು ಬಿಜೆಪಿ ನಾಯಕ ಸಿಟಿ ರವಿ ತಿಳಿಸಿದ್ದಾರೆ.
Vijaya Karnataka Web ಸಿಟಿ ರವಿ
ಸಿಟಿ ರವಿ


ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮತೀಯವಾದದ ಓಲೈಕೆ ಅಲ್ಲದೇ ಮತ್ತೇನು ಅಲ್ಲ. ಮೈಕ್ ಸೌಂಡು ಎಷ್ಟಿರಬೇಕು ಎನ್ನುವುದನ್ನು ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ನಾವು ಮುಸ್ಲಿಮರ ಪರವಾಗಿ ಇದ್ದೇವೆ, ಹಿಂದುಗಳ ಪರ ಅಲ್ಲ ಎಂಬ ನಿಲುವು ಕಾಂಗ್ರೆಸನದ್ದು. ಕಾಂಗ್ರೆಸ್ ಯಾವತ್ತು ಹಿಂದುಗಳ ಪರವಾಗಿಲ್ಲ ಎಂದು ಸಿಟಿ ರವಿ ತಿಳಿಸಿದರು.

ಎಂಟು ತಿಂಗಳಲ್ಲಿ ಸೀಟು ಬಿಸಿ ಮಾಡಬಹುದಷ್ಟೇ: ಸಂಪುಟ ಪುನಾರಚನೆ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ

ಕಾಂಗ್ರೆಸ್ ಮುಸಲ್ಮಾನರ ಪರವಾಗಿದ್ದಕ್ಕೆ ದೇಶ ವಿಭಜನೆಯಾಗಿದ್ದು. ಕಾಂಗ್ರೆಸ್‌ ದೇಶದ ಪರವಾಗಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ ಎಂದು ತಿಳಿಸಿದರು.


ಅಂಬೇಡ್ಕರ್ ಅವರ ಹೆಸರೇಳುವ ನೈತಿಕತೆಯು ಕೂಡ ಕಾಂಗ್ರೆಸ್ಸಿಗಿಲ್ಲ. ಅಂಬೇಡ್ಕರ್ ಸಂವಿಧಾನ ಮತೀಯವಾದದ ತಾರತಮ್ಯ ಮಾಡುವುದನ್ನು ಸಮರ್ಥಿಸಿಲ್ಲ ವಿರೋಧಿಸಿದೆ. ಅಂಬೇಡ್ಕರ್ ಹೆಸರಿನಲ್ಲಿ ರಾಜಕಾರಣ ಮಾಡುವ ಮಹಾನುಭಾವರು. ನ್ಯಾಯಾಲಯ ಸಂವಿಧಾನದ ವಿರುದ್ಧವಾಗಿ ಇವರು ನಡೆದುಕೊಳ್ಳುತ್ತಿದ್ದಾರೆ. ದೇಶದ ಜನರು ಈಗಾಗಲೇ ಉತ್ತರ ಕೊಟ್ಟಿದ್ದಾರೆ ಮುಂದೆಯೂ ಕೂಡ ಉತ್ತರ ಕೊಡುತ್ತಾರೆ ಎಂದು ಸಿಟಿ ರವಿ ತಿಳಿಸಿದರು.

ಜಾತೀಯತೆ ಹಿಂದೂ ಸಮಾಜದ ದೊಡ್ಡ ದೌರ್ಬಲ್ಯ

ಚಿಕ್ಕಮಗಳೂರು:
ಹಿಂದೂ ಸಮಾಜದಲ್ಲಿಜಾತೀಯತೆ ಹಾಗೂ ಅಸ್ಪೃಶ್ಯತೆ ಎಂಬುದು ದೊಡ್ಡ ದೌರ್ಬಲ್ಯ.ಇದನ್ನು ಹೋಗಲಾಡಿಸುವ ಪರಿಹಾರ ನಮ್ಮಲ್ಲಿಯೇ ಇದೆ. ಮನೆ ಹಾಗೂ ಮನಗಳಲ್ಲಿ ಜಾತೀಯತೆ, ಅಸ್ಪೃಶ್ಯತೆ ಗೆ ಜಾಗವಿಲ್ಲದಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿಟಿ ರವಿ ಅಭಿಪ್ರಾಯಿಸಿದರು.

ನಗರದ ರಾಮ ಮಂದಿರದಲ್ಲಿಗುರುವಾರ ಕುರುಹಿನಶೆಟ್ಟಿ ಸಮಾಜ ಹಾಗೂ ಯಾದವರ ಸಮುದಾಯದ ಪ್ರಮುಖರ ಸಭೆ ನಡೆಸಿ ಅವರು ಮಾತನಾಡಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಯಾದವ ಸಮುದಾಯಕ್ಕೆ ಕೃಷ್ಣಕುಟೀರದ ಯೋಜನೆ ಜಾರಿಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜು ನಿರ್ಮಾಣ, ಹೆದ್ದಾರಿ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ. ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಮಂಜೂರಾತಿ ಸಿಕ್ಕಿದೆ. ಚಿಕ್ಕಮಗಳೂರು- ಬೇಲೂರು- ಹಾಸನ ರೈಲ್ವೆ ಸಂಪರ್ಕ ಕೆಲಸಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

‘ನಾನು ಕಾಂಗ್ರೆಸ್‌ ಪಾರ್ಟಿ ಸೇರುತ್ತಿದ್ದೇನೆ..’ : ವೈಎಸ್‌ವಿ ದತ್ತಾ ಅವರದ್ದೆನ್ನಲಾದ ಆಡಿಯೋ ವೈರಲ್‌

ನಗರ ಬಿಜೆಪಿ ಅಧ್ಯಕ್ಷ ಮಧುಕುಮಾರ್‌ ರಾಜ್‌ ಅರಸ್‌, ಗ್ರಾಪಂ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್‌, ಓಬಿಸಿ ನಗರಾಧ್ಯಕ್ಷ ಮಂಜುನಾಥ್‌, ಗ್ರಾಮಾಂತರ ಅಧ್ಯಕ್ಷ ಚಂದ್ರಶೇಖರ್‌, ಜಿಲ್ಲಾ ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಇಂದುಕುಮಾರ್‌ ಸೇರಿದಂತೆ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ