ಆ್ಯಪ್ನಗರ

ಸಿದ್ದರಾಮಯ್ಯ ಅವರದ್ದು ಜಿನ್ನಾ ವಾದ, ಗಾಂಧಿ ವಾದ ಅಗಲ್ಲ: ಸಿಟಿ ರವಿ

ಅಪ್ಪಟ ರಾಷ್ಟ್ರಭಕ್ತನಿಗೆ ಆರ್.ಎಸ್.ಎಸ್.ಮೂಲ ಗೊತ್ತಾಗೋದು. ಜಾತಿವಾದಿ, ವೋಟ್ ಬ್ಯಾಂಕ್ ರಾಜಕಾರಣ ಮಾಡೋರಿಗೆ ಆರ್ ಎಸ್ ಎಸ್ ಮೂಲ ಗೊತ್ತಾಗಲ್ಲ. ಅವರಿಗೆ ದಿನಾ ಕನಸು ಬೀಳುತ್ತೆ. ರಾತ್ರಿ ಬಿದ್ದ ಕನಸನ್ನ ಬೆಳಗ್ಗೆ ಬಂದು ಹೇಳ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

Vijaya Karnataka Web 18 Jan 2021, 12:44 pm
ಚಿಕ್ಕಮಗಳೂರು: ಸಿದ್ದರಾಮಯ್ಯನವರದ್ದು ಜಿನ್ನಾ ವಾದ ಆಗುತ್ತೆ, ಗಾಂಧಿ ವಾದ ಆಗಲ್ಲ. ಒಮ್ಮೆ ನಾನೂ ಹಿಂದೂ ಅಂತಾರೆ ಆಮೇಲೆ ನನಗೂ ಹಿಂದೂಗೂ ಸಂಬಂಧವಿಲ್ಲ ಅಂತಾರೆ. ಒಮ್ಮೊಮ್ಮೆ ನಂದು ಗಾಂಧಿ ಹಿಂದುತ್ವ ಅಂತಾರೆ. ಗಾಂಧಿ ದನದ ಮಾಂಸ ತಿನ್ನಿ ಅಂತ ಹೇಳಿದ್ರಾ. ಗಾಂಧಿ ಗೋ ಹತ್ಯೆ ನಿಷೇಧ ಬಯಸಿದವರು. ಗೋ ಮಾಂಸ ತಿನ್ನುತೇನೆ ಅನ್ನೋರಿಗೆ ಗಾಂಧಿ ಹಿಂದುತ್ವ ಹೇಗಾಗುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.
Vijaya Karnataka Web ಸಿಟಿ ರವಿ
ಸಿಟಿ ರವಿ


ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಸಿಟಿ ರವಿ ಮಾತನಾಡಿದರು.

ಸಿದ್ದರಾಮಯ್ಯ ಯಾವಾಗ ಆರ್.ಎಸ್.ಎಸ್.ಗೆ ಬಂದ್ರು ಗೊತ್ತಿಲ್ಲ. ಆರ್.ಎಸ್.ಎಸ್. ಮೂಲ ತಿಳಿಯಬೇಕಂದ್ರೆ ಇಲ್ಲಿಗೆ ಬರಬೇಕು, ಮೊದಲು ಆರ್.ಎಸ್.ಎಸ್.ಗೆ ಬರಲಿ ಆಮೇಲೆ ಮೂಲ ತಿಳಿಯಲಿ. ಕೆಲ ವೇಳೆ ಅವರಿಗೆ ಅವರ ಮೂಲದ ಬಗ್ಗೆ ಡೌಟ್ ಬರುತ್ತೆ. ಸಿದ್ದರಾಮಯ್ಯಗೆ ಬಹಳ ಸಲ ತಮ್ಮ ಮೂಲದ್ದೇ ಸಂಶಯ ಕಾಡ್ತಿರುತ್ತೆ ಎಂದು ಛೇಡಿಸಿದರು.

ಅಪ್ಪಟ ರಾಷ್ಟ್ರಭಕ್ತನಿಗೆ ಆರ್.ಎಸ್.ಎಸ್.ಮೂಲ ಗೊತ್ತಾಗೋದು. ಜಾತಿವಾದಿ, ವೋಟ್ ಬ್ಯಾಂಕ್ ರಾಜಕಾರಣ ಮಾಡೋರಿಗೆ ಆರ್ ಎಸ್ ಎಸ್ ಮೂಲ ಗೊತ್ತಾಗಲ್ಲ. ಅವರಿಗೆ ದಿನಾ ಕನಸು ಬೀಳುತ್ತೆ. ರಾತ್ರಿ ಬಿದ್ದ ಕನಸನ್ನ ಬೆಳಗ್ಗೆ ಬಂದು ಹೇಳ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಗುಡುಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ