ಆ್ಯಪ್ನಗರ

ನೆರೆ ಹಾನಿ ಕಂಡು ಕಣ್ಣೀರಿಟ್ಟ ಸಿ.ಟಿ.ರವಿ

ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ ನೆರೆ ಹಾನಿ, ಸಂತ್ರಸ್ತರ ಗೋಳು ಕಂಡು ಸಚಿವ ಸಿ.ಟಿ.ರವಿ ಕಣ್ಣೀರು ಹಾಕಿದರು.

Vijaya Karnataka 22 Aug 2019, 5:00 am
ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ ನೆರೆ ಹಾನಿ, ಸಂತ್ರಸ್ತರ ಗೋಳು ಕಂಡು ಸಚಿವ ಸಿ.ಟಿ.ರವಿ ಕಣ್ಣೀರು ಹಾಕಿದರು.
Vijaya Karnataka Web ct ravi weeping over floods damage
ನೆರೆ ಹಾನಿ ಕಂಡು ಕಣ್ಣೀರಿಟ್ಟ ಸಿ.ಟಿ.ರವಿ


ತೀವ್ರ ಹಾನಿಗೊಂಡ ಪ್ರದೇಶದಲ್ಲಿ ಬುಧವಾರ ನಿರಾಶ್ರಿತರ ನೋವು ಆಲಿಸುತ್ತಿದ್ದಾಗ ಈ ಘಟನೆ ನಡೆಯಿತು. ಮನೆ, ತೋಟ ಕಳೆದುಕೊಂಡವರು ಸಚಿವರ ಮುಂದೆ ತಮ್ಮ ಗೋಳು ತೊಡಿಕೊಂಡು, ಮಳೆ ನೆರೆಯಲ್ಲಿ ಎಲ್ಲವನ್ನೂ ಕಳೆದುಕೊಂಡು ಬರಿಗೈಯಾಗಿದ್ದೇವೆ ಎಂದು ದುಃಖ ವ್ಯಕ್ತಪಡಿಸಿದರು. ಈ ವೇಳೆ ಭಾವುಕರಾದ ಸಿ.ಟಿ.ರವಿ, ತಾವೂ ಕಣ್ಣೀರಾಗುವ ಮೂಲಕ ಸಾಂತ್ವನ ಹೇಳಿದರು. ನೆರೆ ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವುದಾಗಿ ಭರವಸೆ ನೀಡಿ, ಧೈರ್ಯ ಹೇಳಿದರು.

ಎಚ್‌ಡಿಕೆಗೆ ಟಾಂಗ್‌ : ನೆರೆ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸಚಿವ ಸಿ.ಟಿ ರವಿ ಟಾಂಗ್‌ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಲೇಟ್‌ ಮಾಡ್ತಿಲ್ಲ, ನಮ್ಮ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ನಮ್ಮ ಸರಕಾರ ಕೂಡ ಕೆಲಸ ಮಾಡ್ತಿದ್ದೆ. ಮೊದಲು ಇಲ್ಲಿಗೆ ಬರಲು ರಸ್ತೆ ಸಂಪರ್ಕ ಇರಲಿಲ್ಲ. ಬೇಕಿದ್ರೆ ಕುಮಾರಸ್ವಾಮಿ ಅವರು ತಮ್ಮ ಅನುಭವ, ಸಲಹೆಯನ್ನ ಧಾರೆ ಎರೆಯಲಿ ಎಂದರು. ರಾಜ್ಯ ಸರಕಾರ ಸಂತ್ರಸ್ತರ ನೆರವಿಗೆ ಬರಲು ತಡ ಮಾಡುತ್ತಿದೆ ಎಂದು ಎಚ್‌ಡಿಕೆ ಮೂಡಿಗೆರೆಯಲ್ಲಿ ಮೊನ್ನೆ ಆರೋಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ