ಆ್ಯಪ್ನಗರ

ಸ್ವಾಮೀಜಿಯನ್ನು ದೋಚಿದ ದರೋಡೆಕೋರರು

ಹುಲಿಕೆರೆ ದೊಡ್ಡ ಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಅವರ ಕಾರನ್ನು ಅಡ್ಟಗಟ್ಟಿ ದರೋಡೆ ಮಾಡಲಾಗಿದೆ.

ವಿಕ ಸುದ್ದಿಲೋಕ 27 Feb 2017, 4:53 pm
ಚಿಕ್ಕಮಗಳೂರು: ಹುಲಿಕೆರೆ ದೊಡ್ಡ ಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಅವರ ಕಾರನ್ನು ಅಡ್ಟಗಟ್ಟಿ ದರೋಡೆ ಮಾಡಲಾಗಿದೆ.
Vijaya Karnataka Web dacoits attacks swamiji
ಸ್ವಾಮೀಜಿಯನ್ನು ದೋಚಿದ ದರೋಡೆಕೋರರು


ಭಾನುವಾರ ಬೆಳಗಿನ ಜಾವ 3.30ರ ಸಮಯದಲ್ಲಿ ಸಖರಾಯಪಟ್ಟಣ ಸಮೀಪ ಹನುಮಂತ ದೇವಸ್ಥಾನ ಕಣಿವೆಯ ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿದೆ.

ಬುಕ್ಕಸಾಗರ ಗ್ರಾಮದಿಂದ 2 ಬೈಕ್‌ನಲ್ಲಿ ಬಂದ ದರೋಡೆಕೋರರು ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಅವರ ಬಳಿ ಇದ್ದ ಬೆಲೆ ಬಾಳುವ ಬೆಳ್ಳಿ ಪೂಜಾ ಸಾಮಗ್ರಿಗಳು, 1 ಲಕ್ಷ ರೂ.ನಗದು, ಮಠಕ್ಕೆ ಸಂಬಂಧಿಸಿದ ದಾಖಲೆಗಳನ್ನು ದೋಚಿ ಪರಾರಿಯಾಗಿದ್ದಾರೆ.

ಸಾಗರದಿಂದ ಪೂಜೆ ಮುಗಿಸಿ ಹುಲಿಕೆರೆ ಮಠಕ್ಕೆ ರಾತ್ರಿ ವಾಪಸಾಗುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಸ್ವಾಮೀಜಿ ಹಾಗೂ ಕಾರಿನ ಚಾಲಕ ಹೊರತು ಪಡಿಸಿ ಬೇರೆ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ. ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ