ಆ್ಯಪ್ನಗರ

ಗುಳ್ಳದಮನೆಯಲ್ಲಿ ಒಂಟಿ ಸಲಗದಿಂದ ಅಡಕೆ, ತೆಂಗಿಗೆ ಹಾನಿ

ಆಹಾರ ಮತ್ತು ನೀರನ್ನು ಹುಡುಕಿಕೊಂಡು ಜಮೀನಿಗೆ ಬಂದ 20 ವರ್ಷದ ಗಂಡಾನೆಯೊಂದು ಗುಳ್ಳದಮನೆ ಬಳಿ ಶುಕ್ರವಾರ ಬೆಳಗಿನ ಜಾವ ಅಡಕೆ ತೋಟಗಳಿಗೆ ಹಾನಿ ಮಾಡಿದೆ.

Vijaya Karnataka 1 Apr 2018, 5:00 am
ಲಿಂಗದಹಳ್ಳಿ(ತರೀಕೆರೆ ತಾ.): ಆಹಾರ ಮತ್ತು ನೀರನ್ನು ಹುಡುಕಿಕೊಂಡು ಜಮೀನಿಗೆ ಬಂದ 20 ವರ್ಷದ ಗಂಡಾನೆಯೊಂದು ಗುಳ್ಳದಮನೆ ಬಳಿ ಶುಕ್ರವಾರ ಬೆಳಗಿನ ಜಾವ ಅಡಕೆ ತೋಟಗಳಿಗೆ ಹಾನಿ ಮಾಡಿದೆ.
Vijaya Karnataka Web damage to coconut and coconut
ಗುಳ್ಳದಮನೆಯಲ್ಲಿ ಒಂಟಿ ಸಲಗದಿಂದ ಅಡಕೆ, ತೆಂಗಿಗೆ ಹಾನಿ


ಭದ್ರಾ ವನ್ಯಜೀವಿ ಕಾಡಿನಿಂದ ಲಿಂಗದಹಳ್ಳಿ ಹೋಬಳಿಯ ತ್ಯಾಗದಬಾಗಿ ಹಾಗೂ ಗುಳ್ಳದ ಮನೆ ಗ್ರಾಮದ ನಡುವಿನ ತೋಟಗಳಿಗೆ ಬಂದಿರುವ ಆನೆ, ಕೆಲವು ಅಡಕೆ ತೋಟಗಳ ಮರಗಳನ್ನು ಮುರಿದು ಪಕ್ಕದಲ್ಲೇ ಇದ್ದ ಹಳ್ಳದಲ್ಲಿ 3-4 ಗಂಟೆ ಕಾಲ ಇದ್ದು ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆಯವರಿಗೆ ಆತಂಕ ಮೂಡಿಸಿತ್ತು.

ಗುಳ್ಳದ ಮನೆಯ ವಸಂತ್‌ಕುಮಾರ್‌ ಎಂಬುವರ ಅಡಕೆ ತೋಟದಲ್ಲಿರುವುದನ್ನು ಕಂಡ ಜನರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನೋಡಿ ಗಾಬರಿಗೊಂಡ ಆನೆ, ಪಕ್ಕದಲ್ಲಿನ ಹಳ್ಳಕ್ಕೆ ಇಳಿದು ಸುಮಾರು 3 ಗಂಟೆ ಅಲ್ಲೇ ನಿಂತಿತ್ತು ಎನ್ನಲಾಗಿದೆ. ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಕಾಡಿನೊಳಗೆ ಓಡಿಸಿದರು.

ವಲಯ ಅರಣ್ಯಾಧಿಕಾರಿ ಶರಣ್‌ಕುಮಾರ್‌, ಸಿಬ್ಬಂದಿ ಇಂದು, ರಿಯಾಜ್‌ ಅಹಮ್ಮದ್‌, ಸಂತೋಷ್‌ ತಳವಾರ್‌, ಮಂಜುನಾಥ್‌ ಮಾಮೋನಿ, ಸಂಗ್ಯಾನಾಯ್ಕ ಮತ್ತಿತರರು ಸ್ಥಳದಲ್ಲೇ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ