ಆ್ಯಪ್ನಗರ

ದತ್ತಪೀಠ ವಿವಾದ ತ್ವರಿತ ಬಗೆಹರಿಸಲು ಆಗ್ರಹ

ವಿಶ್ವ ಹಿಂದೂ ಪರಿಷತ್‌, ಬಜರಂಗದಳ ನೇತೃತ್ವದಲ್ಲಿ ಕಳೆದ 21 ವರ್ಷಗಳಿಂದ ದತ್ತ ಪೀಠದಲ್ಲಿ ನಡೆಯುತ್ತಿರುವ ದತ್ತಜಯಂತಿ, ದತ್ತಮಾಲೆ ಕಾರ್ಯಕ್ರಮದಲ್ಲಿ ಕಡೂರು ತಾಲೂಕಿನ ಭಕ್ತರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ದತ್ತಮಾಲೆ ಅಭಿಯಾನದ ಜಿಲ್ಲಾ ಪ್ರಮುಖ ಕಡೂರು ಎ.ಮಣಿ ಹೇಳಿದರು.

Vijaya Karnataka 21 Dec 2018, 5:00 am
ಕಡೂರು : ವಿಶ್ವ ಹಿಂದೂ ಪರಿಷತ್‌, ಬಜರಂಗದಳ ನೇತೃತ್ವದಲ್ಲಿ ಕಳೆದ 21 ವರ್ಷಗಳಿಂದ ದತ್ತ ಪೀಠದಲ್ಲಿ ನಡೆಯುತ್ತಿರುವ ದತ್ತಜಯಂತಿ, ದತ್ತಮಾಲೆ ಕಾರ್ಯಕ್ರಮದಲ್ಲಿ ಕಡೂರು ತಾಲೂಕಿನ ಭಕ್ತರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ದತ್ತಮಾಲೆ ಅಭಿಯಾನದ ಜಿಲ್ಲಾ ಪ್ರಮುಖ ಕಡೂರು ಎ.ಮಣಿ ಹೇಳಿದರು.
Vijaya Karnataka Web data peeta dispute demand fast fix
ದತ್ತಪೀಠ ವಿವಾದ ತ್ವರಿತ ಬಗೆಹರಿಸಲು ಆಗ್ರಹ


ತಾಲೂಕಿನ ಮದಗದಕೆರೆ ಕೆಂಚಮ್ಮದೇವಿ ಸನ್ನಿಧಿಯಲ್ಲಿ ಗುರುವಾರ ದತ್ತಮಾಲೆ ಧರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದತ್ತಪೀಠದ ಗುಹೆಯಲ್ಲಿ ತ್ರಿಕಾಲ ಪೂಜೆ ನಡೆಯಬೇಕು, ಪ್ರತಿನಿತ್ಯ ಪೀಠಕ್ಕೆ ಬರುವ ಭಕ್ತರಿಗೆ ದತ್ತಪಾದುಕೆಗಳ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು, ಪೀಠದಲ್ಲಿ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ದತ್ತಪೀಠ ವಿಚಾರ ಬಗೆಹರಿಸಲು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ದತ್ತಪೀಠಕ್ಕೆ ಸಂಬಂಧಿಸಿದ ದಾಖಲೆಗಳು ಸರಕಾರದ ಬಳಿಯಿದ್ದು, ಅದನ್ನು ಬಗೆಹರಿಸಿ ಕೂಡಲೇ ದತ್ತಪೀಠವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು. ಪ್ರತಿ ವರ್ಷದಂತೆ ದತ್ತಜಯಂತಿಯಲ್ಲಿ ಪ್ರಸಾದ ವಿನಿಯೋಗ ಹಾಗೂ ಪೂಜಾ ಧಾರ್ಮಿಕ ಕಾರ್ಯಗಳು ಜಿಲ್ಲಾಡಳಿತವು ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಡಿ.22ರಂದು ನಡೆಯಲಿರುವ ದತ್ತ ಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನಿಂದ ಸಾವಿರಾರು ಭಕ್ತರು ದತ್ತಪೀಠಕ್ಕೆ ತೆರಳಲಿದ್ದಾರೆ. ಅಂದು ಪಟ್ಟಣದ ಬಸವೇಶ್ವರ ವೃತ್ತದಿಂದ ಮಾಲಾಧಾರಿಗಳು ಪೀಠಕ್ಕೆ ತೆರಳಲಿದ್ದು ಬಸವೇಶ್ವರ ವೃತ್ತಕ್ಕೆ ಬರಲು ವಿನಂತಿ ಮಾಡಿದರು. ಗುರುವಾರ ನಡೆದ ಅನಸೂಯ ಜಯಂತಿಗೆ ತಾಲೂಕಿನಿಂದ ಸುಮಾರು 300 ಮಹಿಳೆಯರು ಭಾಗವಹಿಸಿದ್ದರು ಎಂದರು.

ಈ ಸಂದರ್ಭ ಸಿದ್ದರಹಳ್ಳಿಯ ಮೈಲಾರಪ್ಪ, ಮಂಜುನಾಥ್‌, ಹೊಸಹಳ್ಳಿಯ ವಿಶ್ವ, ಸಿಂಗಟಗೆರೆಯ ದಯಾನಂದ, ನಾಗರಾಜ್‌, ಚಿಕ್ಕಂಗಳ ಗಂಗಾಧರ, ನಾಗರಾಜ್‌, ಅಂದೇನಹಳ್ಳಿಯ ಸುನೀಲ್‌, ಪ್ರದೀಪ್‌, ಸಿದ್ದೇಶ್‌, ಲೋಹಿತ್‌ ಮಾಲೆಧರಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ