ಆ್ಯಪ್ನಗರ

ಅ.6 ರಿಂದ 13 ರವೆರೆಗೆ ದತ್ತಮಾಲಾ ಅಭಿಯಾನ

ಶ್ರೀರಾಮಸೇನೆಯಿಂದ ಅ.6 ರಿಂದ 13 ರವರೆಗೆ 8 ದಿನ ದತ್ತಮಾಲಾ ಅಭಿಯಾನ ಹಮ್ಮಿಕೊಂಡಿದ್ದು ಅಂತಿಮ ದಿನ ಶ್ರೀ ದತ್ತಾತ್ರೇಯ ಪೀಠದಲ್ಲಿವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.

Vijaya Karnataka 11 Sep 2019, 5:00 am
ಚಿಕ್ಕಮಗಳೂರು:ಶ್ರೀರಾಮಸೇನೆಯಿಂದ ಅ.6 ರಿಂದ 13 ರವರೆಗೆ 8 ದಿನ ದತ್ತಮಾಲಾ ಅಭಿಯಾನ ಹಮ್ಮಿಕೊಂಡಿದ್ದು ಅಂತಿಮ ದಿನ ಶ್ರೀ ದತ್ತಾತ್ರೇಯ ಪೀಠದಲ್ಲಿವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.
Vijaya Karnataka Web datamala campaign from 6th to 13th
ಅ.6 ರಿಂದ 13 ರವೆರೆಗೆ ದತ್ತಮಾಲಾ ಅಭಿಯಾನ


ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಅ.6 ರಂದು ನಗರದ ಶಂಕರಮಠದಲ್ಲಿಶ್ರೀರಾಮಸೇನೆಯ ಕಾರ್ಯಕರ್ತರು ದತ್ತಮಾಲೆ ಧರಿಸಲಿದ್ದಾರೆ. ಅ.13 ರಂದು ಶಂಕರಮಠದ ಮುಂಭಾಗದಲ್ಲಿಧಾರ್ಮಿಕ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ನೇತ್ರತ್ವದಲ್ಲಿಅಂದು ನಗರದಲ್ಲಿಶೋಭಾಯಾತ್ರೆ ನಡೆಯಲಿದ್ದು ಸಾಧು, ಸಂತರು, ಅವಧೂತರು, ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ವಿಶೇಷವಾಗಿ ಪುನನ್‌ ಕಾಶ್ಮೀರದ ರಾಷ್ಟ್ರೀಯ ಸಂಯೋಜಕ ರಾಹುಲ್‌ಕೌಲ್‌ ಉತ್ಸವದಲ್ಲಿಪಾಲ್ಗೊಳ್ಳಲಿದ್ದಾರೆ. ಹಿಂದೂ ಪರ ಸಂಘಟನೆಗಳ ಸುಮಾರು 5 ಸಾವಿರ ಮಂದಿ ಕಾರ್ಯಕರ್ತರು ಶೋಭಾಯಾತ್ರೆಯಲ್ಲಿಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಶೋಭಾಯಾತ್ರೆ ಶಂಕರಮಠದಿಂದ ಆರಂಭಗೊಂಡು ಹನುಮಂತಪ್ಪ ವೃತ್ತ, ಎಂಜಿ ರಸ್ತೆ ಮೂಲಕ ಆಜಾದ್‌ ಪಾರ್ಕಿನವರೆಗೆ ಸಾಗುವುದು. ಅಲ್ಲಿಂದ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲಾಗುವುದು. ದತ್ತಪೀಠ ಆವರಣದಲ್ಲಿಶ್ರೀ ಗುರುದತ್ತಾತ್ರೇಯ ಹೋಮ, ಪೂಜೆ, ಧಾರ್ಮಿಕ ಸಭೆ, ಪ್ರಸಾದ ವಿನಿಯೋಗವಿರುತ್ತದೆ. ಭಕ್ತರಿಗೆ ಅನುಕೂಲವಾಗುವಂತೆ ದತ್ತಪೀಠದ ರಸ್ತೆ ದುರಸ್ತಿಪಡಿಸಬೇಕು.ಕುಡಿವ ನೀರು, ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ದತ್ತಪೀಠದ ಗುಹಾಂತರ ದೇವಾಲಯದಲ್ಲಿಶಾಶ್ವತ ಹಿಂದೂ ಅರ್ಚಕರ ನೇಮಕ, ಅಲ್ಲಿರುವ ಗೋರಿ ಸ್ಥಳಾಂತರ, ಮುಸ್ಲೀಂ ಚಟುವಟಿಕೆಗೆ ಅವಕಾಶ ನಿಷಿದ್ಧ, ದತ್ತಪೀಠದಲ್ಲಿವಿಗ್ರಹ ಪ್ರತಿಷ್ಠಾಪನೆ, ದತ್ತಪೀಠದಲ್ಲಿನ ಆಸ್ತಿ ಪಾಸ್ತಿ ಅಕ್ರಮ ಮಾರಾಟದ ಬಗ್ಗೆ ತನಿಖೆಯಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು. ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದಶೆಟ್ಟಿ ಆಡ್ಯಾರ್‌, ರಾಜ್ಯ ಉಪಾಧ್ಯಕ್ಷ ಮಹೇಶ್‌ಕುಮಾರ್‌, ವಿಭಾಗ ಅಧ್ಯಕ್ಷ ಅಭಿಲಾಷ್‌, ಜಿಲ್ಲಾಧ್ಯಕ್ಷ ರಂಜಿತ್‌ಶೆಟ್ಟಿ, ದುರ್ಗಾಸೇನೆ ಅಧ್ಯಕ್ಷೆ ಶಾರದಮ್ಮ ಹಾಜರಿದ್ದರು.

-------------

ಮುಖ್ಯಮಂತ್ರಿಗೆ ಆಹ್ವಾನ


ಸೆ.16 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಶ್ರೀರಾಮ ಸೇನೆಯ ಮುಖಂಡರು ಭೇಟಿಯಾಗಲಿದ್ದು ಅ.13 ರ ದತ್ತಮಾಲಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿಭಾಗವಹಿಸಬೇಕು ಎಂದು ಆಹ್ವಾನ ನೀಡಲಿದ್ದೇವೆ.ಹಿಂದೊಮ್ಮೆ ಅವರು ದತ್ತಮಾಲಾ ಅಭಿಯಾನದಲ್ಲಿಭಾಗವಹಿಸುವುದಾಗಿ ಹೇಳಿದ್ದರು. ನುಡಿದಂತೆ ಅವರು ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಗಂಗಾಧರ ಕುಲಕರ್ಣಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ