ಆ್ಯಪ್ನಗರ

ದತ್ತ ಜಯಂತಿ: ಸಚಿವ ಸಿ.ಟಿ. ರವಿಯಿಂದ ಪಡಿ ಸಂಗ್ರಹ

ಚಿಕ್ಕಮಗಳೂರಿನಲ್ಲಿ ಅತಿ ಹೆಚ್ಚು ಜನಪ್ರಿಯಗೊಂಡಿರುವ ದತ್ತ ಜಯಂತಿ ಹಿನ್ನೆಲೆಯಲ್ಲಿ ಸಚಿವ ಸಿಟಿ ರವಿ ಪಡಿ ಸಂಗ್ರಹ ಕಾರ್ಯಕ್ರಮದಲ್ಲಿ ಬುಧವಾರ ಪಾಲ್ಗೊಂಡಿದ್ದರು.

Vijaya Karnataka Web 11 Dec 2019, 10:04 am
ಚಿಕ್ಕಮಗಳೂರು: ದತ್ತಜಯಂತಿ ಹಿನ್ನೆಲೆಯಲ್ಲಿ ಮನೆಮನೆಗೆ ತೆರಳಿ ಭಿಕ್ಷಾಟನೆ ಮೂಲಕ ಸಚಿವ ಸಿ.ಟಿ.ರವಿ ಬುಧವಾರ ಬೆಳಗ್ಗೆ ಪಡಿ ಸಂಗ್ರಹಿಸಿದರು.
Vijaya Karnataka Web ಸಿಟಿ ರವಿ ಪಡಿ ಸಂಗ್ರಹ
ಸಿಟಿ ರವಿ ಪಡಿ ಸಂಗ್ರಹ


ಚಿಕ್ಕಮಗಳೂರು ನಗರದಲ್ಲಿ ಸಚಿವ ಸಿ.ಟಿ.ರವಿ ಹಾಗೂ ದತ್ತ ಮಾಲಾಧಾರಿಗಳು ಪಡಿ ಸಂಗ್ರಹಿಸಿದರು. ನಗರದ ನಾರಾಯಣಪುರದ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುವ ಮೂಲಕ ಪಡಿ ಸಂಗ್ರಹ ಮಾಡಿದರು.

ಪಡಿ ಸಂಗ್ರಹಕ್ಕೆ ಅಗಮಿಸಿದ ದತ್ತ ಭಕ್ತರಿಗೆ ನಿವಾಸಿಗಳು ಅಕ್ಕಿ, ಬೆಲ್ಲ, ವೀಳ್ಯದೆಲೆ ನೀಡಿದರು. ಗುರುವಾರ ಇರುಮುಡಿ ರೂಪದಲ್ಲಿ ಪಡಿ ಹೊತ್ತು ದತ್ತಪೀಠಕ್ಕೆ ತೆರಳಲಿರುವ ದತ್ತಭಕ್ತರು ದತ್ತಾತ್ರೇಯ ಸ್ವಾಮಿ ಭಜನೆ ನಡೆಸಲಿದ್ದಾರೆ.

ಸಿ.ಟಿ. ರವಿ ಸೇರಿ ದತ್ತಭಕ್ತರಿಂದ ಬಿಕ್ಷಾಟನೆಮಾಡಿದರು, ಶೋಭಾಯಾತ್ರೆ ಹಾಗೂ ದತ್ತ ಜಯಂತಿಯಲ್ಲಿ ಭಾಗವಹಿಸುವಂತೆ ಜನರಲ್ಲಿ ಮಾಲಾಧಾರಿಗಳು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ