ಕಡೂರು: ದತ್ತಪೀಠದಲ್ಲಿ ಡಿ.1ರಿಂದ 3ರ ವರೆಗೆ ನಡೆಯುವ ದತ್ತಜಯಂತಿ ಕಾರ್ಯಕ್ರಮ ಅಂಗವಾಗಿ ಪಟ್ಟಣದಲ್ಲಿ ಗುರುವಾರ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಭದ್ರಸ್ವಾಮಿ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ದತ್ತಮಾಲೆ ಧರಿಸಿದರು.
ಪಟ್ಟಣದ ಕೋಟೆ ಬಡವಾಣೆಯ ಶ್ರೀಅಯ್ಯಪ್ಪ ದೇವಾಲಯದಲ್ಲಿ ವಿಶೇಷ ಪೂಜೆಯೊಂದಿಗೆ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು ದತ್ತಮಾಲೆ ಧರಿಸಿದರು.
ವಿಶ್ವಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಭದ್ರಸ್ವಾಮಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದತ್ತಪೀಠ ಹಿಂದೂಗಳ ಸ್ವತ್ತು. ದತ್ತಪೀಠ ಮುಕ್ತಿಗಾಗಿ ಹೋರಾಟ ಅನಿವಾರ್ಯ. ಈ ಬಾರಿಯ ದತ್ತ ಜಯಂತಿಗೆ ತಾಲೂಕಿನಿಂದ ಸುಮಾರು 1,500 ದತ್ತ ಭಕ್ತರು ಭಾಗವಹಿಸಲಿದ್ದಾರೆ.
ದತ್ತಪೀಠ ಉಳಿವಿಗಾಗಿ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಭಜರಂಗದಳ ನಿರಂತರ ಹೋರಾಟ ನಡೆಸುತ್ತಿದೆ. ದತ್ತಪೀಠದಲ್ಲಿರುವ ಗೋರಿಗಳನ್ನು ತೆರವುಗೊಳಿಸಬೇಕು, ಹಿಂದೂ ಧರ್ಮದ ಆಚರಣೆಯಂತೆ ದತ್ತ ಭಕ್ತರಿಗೆ ನಿತ್ಯ ಪೂಜೆಗೆ ಸರಕಾರ ಅವಕಾಶ ಮಾಡಿಕೊಡಬೇಕು, ಹಿಂದೂ ಅರ್ಚಕರ ನೇಮಕ, ಅನಧಿಕೃತ ಗೋರಿಗಳ ತೆರವಿಗೆ ಅಗ್ರಹಿಸಿದರು.
ಭಜರಂಗದಳ ತಾಲೂಕು ಸಂಚಾಲಕ ನಾಗೇಂದ್ರ, ಉಪಾಧ್ಯಕ್ಷ ಬೈರಪ್ಪ, ಗೋರಕ್ಷಾ ಪ್ರಮುಖ್ ಚೇತನ್, ರಕ್ಷ ಣಾ ಪ್ರಮುಖ್ ನಿರಂಜನ್, ಸಚಿನ್, ಶಶಿ, ಹರೀಶ್, ದರ್ಶನ್ ಮತ್ತಿತರರು ಹಾಜರಿದ್ದರು.