ಆ್ಯಪ್ನಗರ

ಪರಮಾನಂದ ಭಾರತೀ ಶ್ರೀ ನಿಧನ

ಶ್ರೀಶಾರದಾ ಪೀಠದಲ್ಲಿ 35 ವರ್ಷದ ಹಿಂದೆ ಸನ್ಯಾಸಾಶ್ರಮ ಸ್ವೀಕರಿಸಿದ್ದ ಶ್ರೀ ಪರಮಾನಂದ ಭಾರತೀ ಸ್ವಾಮಿಗಳು (86) ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು.

Vijaya Karnataka 30 Jul 2019, 5:00 am
ಶೃಂಗೇರಿ : ಶ್ರೀಶಾರದಾ ಪೀಠದಲ್ಲಿ 35 ವರ್ಷದ ಹಿಂದೆ ಸನ್ಯಾಸಾಶ್ರಮ ಸ್ವೀಕರಿಸಿದ್ದ ಶ್ರೀ ಪರಮಾನಂದ ಭಾರತೀ ಸ್ವಾಮಿಗಳು (86) ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು.
Vijaya Karnataka Web CKM-29SRI5


ಶಾರದಾ ಪೀಠದ 35ನೇ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮೀಜಿಗಳಿಂದ ಸನ್ಯಾಸ ಸ್ವೀಕರಿಸಿದ್ದ ಇವರ ಪೂರ್ವಶ್ರಮದ ಹೆಸರು ಟಿ.ಎಸ್‌.ಶಂಕರ್‌. ಮದ್ರಾಸ್‌ ಐಐಟಿಯಲ್ಲಿ ಗಣಿತದ ಪ್ರೊ. ಹಾಗೂ ವಿಜ್ಞಾನಿಯಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಧರ್ಮ ಜಾಗೃತಿ,ಆಧ್ಯಾತ್ಮಿಕ ಪ್ರಗತಿಯನ್ನೇ ಜೀವನದ ಪರಮ ಧ್ಯೇಯವಾಗಿಸಿಕೊಂಡಿದ್ದರು. ಹೈದರಬಾದ್‌-ಕರ್ನಾಟಕ ಪ್ರಾಂತ್ಯದಲ್ಲಿ ಆಧ್ಯಾತ್ಮಿಕ ಜಾಗೃತಿ ಪಡಿಸಿ ಲಲಿತಾ ಸಹಸ್ರನಾಮವನ್ನು ಪ್ರಚುರಪಡಿಸಿದ್ದರು.

ಬೆಂಗಳೂರಿನಲ್ಲಿ ಕೋಟಿ ಗಾಯತ್ರಿ ಯಜ್ಞ ಮತ್ತು ಶಂಕರಮಠದಲ್ಲಿ ಲಲಿತಾಸಹಸ್ರನಾಮ ಕೋಟಿ ಅರ್ಚನೆ ಆಯೋಜಿಸಿದ್ದರು. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಉಪನ್ಯಾಸ ಮಾಲೆಗಳನ್ನು ಮಾಡಿ ಜಿಜ್ಞಾಸುಗಳಿಗೆ ಪರಿಹಾರ ಸೂಚಿಸಿದ್ದರು. ವಾಕ್ಯಾರ್ಥ ಗೋಷ್ಠಿ ನಡೆಸಿ ವಿದ್ವಾಂಸರನ್ನು ಪುರಸ್ಕರಿಸಿದ್ದರು. ಶಾರದಾ ಪೀಠದಲ್ಲಿಯೇ ಹೆಚ್ಚಿನ ದಿನಗಳನ್ನು ಕಳೆದ ಇವರು, ಧಾರ್ಮಿಕ ವಿಚಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇವರ ಹುಟ್ಟೂರಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ