ಆ್ಯಪ್ನಗರ

ಸಾಲಬಾಧೆ: ಕೃಷಿಕ ಸಾವು

ಸಾಲಬಾಧೆ ತಾಳದೆ ತಾಲೂಕಿನ ಸರಸ್ವತಿಪುರ ಗ್ರಾಮದ ವಾಸಿ ಹನುಮಂತಪ್ಪ (41) ಎಂಬ ರೈತ ಭಾನುವಾರ ರಾತ್ರಿ ತಮ್ಮ ಸಹೋದರನ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.

Vijaya Karnataka 14 Nov 2018, 5:00 am
ಕಡೂರು :ಸಾಲಬಾಧೆ ತಾಳದೆ ತಾಲೂಕಿನ ಸರಸ್ವತಿಪುರ ಗ್ರಾಮದ ವಾಸಿ ಹನುಮಂತಪ್ಪ (41) ಎಂಬ ರೈತ ಭಾನುವಾರ ರಾತ್ರಿ ತಮ್ಮ ಸಹೋದರನ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
Vijaya Karnataka Web debt the death of a farmer
ಸಾಲಬಾಧೆ: ಕೃಷಿಕ ಸಾವು


ಮೃತ ಹನುಮಂತಪ್ಪ ತನ್ನ ತಾಯಿ ಕರಿಯಮ್ಮ ಅವರ ಜತೆ ವಾಸವಾಗಿದ್ದು ಕೃಷಿ ಉದ್ದೇಶಕ್ಕಾಗಿ ತಾಯಿ ಹೆಸರಿನಲ್ಲಿ ಚಿಕ್ಕಮಗಳೂರು ಎಸ್‌ಬಿಐ ಬ್ಯಾಂಕಿನಲ್ಲಿ 75 ಸಾವಿರ ರೂ. ಸಾಲ ಪಡೆದಿದ್ದ. ತನ್ನ ಜಮೀನಿನಲ್ಲಿ ಐದಾರು ಕೊಳವೆಬಾವಿ ಕೊರೆಸಿದರೂ ನೀರು ಬಾರದೆ ಬೇಸರಗೊಂಡಿದ್ದ ಇದರಿಂದ ಮನನೊಂದು ಆತನ ಸಹೋದರ ಯೋಗಿಶ್‌ ಅವರ ಮನೆಗೆ ಭಾನುವಾರ ರಾತ್ರಿ ಬಂದು ಶೌಚಾಲಯದ ಮೇಲೆ ಇದ್ದ ಕಲ್ಲುಕಂಬಕ್ಕೆ ಪ್ಯಾಂಟ್‌ ಮತ್ತು ಶರ್ಟ್‌ನ ಸಹಾಯದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ.

ಈ ಸಂಬಂಧ ಮೃತ ಹನುಮಂತಪ್ಪನ ಸಹೋದರ ಲೋಕೇಶ್‌ಕುಮಾರ್‌ ಕಡೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ