ಸಾಲಬಾಧೆ ರೈತ ಆತ್ಮಹತ್ಯೆ
ಸಾಲಬಾಧೆ ತಾಳದೆ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಿಗ್ಗನಹಳ್ಳಿಯಲ್ಲಿನಡೆದಿದೆ.
Vijaya Karnataka 16 Dec 2019, 5:00 am
ಚಿಕ್ಕಮಗಳೂರು : ಸಾಲಬಾಧೆ ತಾಳದೆ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಿಗ್ಗನಹಳ್ಳಿಯಲ್ಲಿನಡೆದಿದೆ.
ಬಿಗ್ಗನಹಳ್ಳಿಯ ಮಂಜುನಾಥ (46) ಎಂಬುವರು ಮೃತಪಟ್ಟವರು. ಮೈಕ್ರೋ ಫೈನಾನ್ಸ್ ಮತ್ತು ಕೈಸಾಲವಾಗಿ 4 ಲಕ್ಷ ರೂ.ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲ ತೀರಿಸುವ ಚಿಂತೆಯಲ್ಲಿಜಿಗುಪ್ಸೆಗೊಂಡಿದ್ದ ಅವರು ಬೇಸತ್ತು ಶನಿವಾರ ವಿಷಸೇವಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಭಾನುವಾರ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಒಬ್ಬಳು ಪುತ್ರಿ ಇದ್ದಾರೆ.
ಬಿಗ್ಗನಹಳ್ಳಿಯ ಮಂಜುನಾಥ (46) ಎಂಬುವರು ಮೃತಪಟ್ಟವರು. ಮೈಕ್ರೋ ಫೈನಾನ್ಸ್ ಮತ್ತು ಕೈಸಾಲವಾಗಿ 4 ಲಕ್ಷ ರೂ.ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲ ತೀರಿಸುವ ಚಿಂತೆಯಲ್ಲಿಜಿಗುಪ್ಸೆಗೊಂಡಿದ್ದ ಅವರು ಬೇಸತ್ತು ಶನಿವಾರ ವಿಷಸೇವಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಭಾನುವಾರ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಒಬ್ಬಳು ಪುತ್ರಿ ಇದ್ದಾರೆ.