ಆ್ಯಪ್ನಗರ

ಜಿಂಕೆ ಬೇಟೆ: ಇಬ್ಬರ ಬಂಧನ

ಬಾಳೆಹೊನ್ನೂರು ಸಮೀಪದ ಹಲಸೂರು ಅರಣ್ಯದ ಕಾರ್ಕಿ ಎಂಬಲ್ಲಿ ಚುಕ್ಕಿ ಜಿಂಕೆಯನ್ನು ಬೇಟೆ ಯಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Vijaya Karnataka 24 Jun 2019, 6:03 pm
ಚಿಕ್ಕಮಗಳೂರು: ಬಾಳೆಹೊನ್ನೂರು ಸಮೀಪದ ಹಲಸೂರು ಅರಣ್ಯದ ಕಾರ್ಕಿ ಎಂಬಲ್ಲಿ ಚುಕ್ಕಿ ಜಿಂಕೆಯನ್ನು ಬೇಟೆ ಯಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
Vijaya Karnataka Web deer hunting two arrest
ಜಿಂಕೆ ಬೇಟೆ: ಇಬ್ಬರ ಬಂಧನ


ಹಲಸೂರು ಮಿಸಲು ಅರಣ್ಯದಲ್ಲಿ ಬೆಳಗಿನಜಾವ ಚುಕ್ಕಿ ಜಿಂಕೆಯನ್ನು ಬೇಟೆಯಾಡಿದ ಹಲಸೂರು ನಿವಾಸಿಗಳಾದ ವಿನಾಯಕ್‌, ಸುದರ್ಶನ್‌ ಬಂಧಿತರು. ನಾಗೇಶ್‌, ಗಣೇಶ್‌ ಎಂಬ ಮತ್ತಿಬ್ಬರು ಆರೋಪಿಗಳಿಗಾಗಿ ಅರಣ್ಯ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದಾರೆ

ಜಿಂಕೆ ಬೇಟೆಯಾಡಿದ್ದರ ಕುರಿತು ಖಚಿತ ಮಾಹಿತಿ ಪಡೆದ ಕೊಪ್ಪ ಅರಣ್ಯ ಸಂಚಾರಿ ಇಲಾಖೆಯ ಸಿಬ್ಬಂದಿ, ಬೇಟೆಯಾಡಲು ಬಳಸಿದ್ದ 2 ನಾಡ ಬಂದೂಕು, ಜಂಕೆ ಚರ್ಮ, ಮಾಂಸವನ್ನು ಬೆಯಿಸಿದ ಪಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಪ್ಪ ಆರ್‌ಎಫ್‌ಒ ವಿಜಯ್‌ ಕುಮಾರ್‌, ಡಿಆರ್‌ಎಫ್‌ಒ ಮಧು, ಬಾಳೆಹೊನ್ನೂರು ವಲಯದ ಮಂಜುನಾಥ್‌, ಗುರು ಪ್ರಸಾದ್‌, ತಾರನಾಯಕ್‌, ದಿವಾಕರ್‌ ಮತ್ತು ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ