ಆ್ಯಪ್ನಗರ

ಸೋಲು, ಗೆಲುವು ಸಮನಾಗಿ ಸ್ವೀಕರಿಸಿ

ಕ್ರೀಡೆಯಲ್ಲಿಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕೆಂದು ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಚ್‌. ಮಹೇಂದ್ರ ಹೇಳಿದರು.

Vijaya Karnataka 14 Sep 2019, 5:00 am
ಅಜ್ಜಂಪುರ : ಕ್ರೀಡೆಯಲ್ಲಿಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕೆಂದು ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಚ್‌. ಮಹೇಂದ್ರ ಹೇಳಿದರು.
Vijaya Karnataka Web 13AJP01_35


ಪಟ್ಟಣ ಸಮೀಪದ ಬಗ್ಗವಳ್ಳಿ ಸರಕಾರಿ ಪ್ರೌಢಶಾಲೆ ಆವರಣದಲ್ಲಿಶುಕ್ರವಾರ ತರೀಕೆರೆ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ದೇಶಕ್ಕೆ ಕೀರ್ತಿ ತರುವಂತಹ ಕ್ರೀಡಾಪಟುಗಳು ನಮ್ಮ ತಾಲೂಕಿನಿಂದ ಆಯ್ಕೆ ಆಗಲಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ಕೆ. ಶಿವರಾಜ್‌, ಸದೃಢವಾದ ದೇಹದಲ್ಲಿಸದೃಢವಾದ ಮನಸ್ಸಿರುತ್ತದೆ. ಕ್ರೀಡಾಕೂಟವು ಹಬ್ಬದ ವಾತಾವರಣ ಉಂಟುಮಾಡಿದೆ. ಗ್ರಾಮಸ್ಥರು, ಶಾಲಾ ಅಭಿವೃದ್ಧಿ ಸಮಿತಿ, ಪೋಷಕರ ಸಹಕಾರದಿಂದ ಉತ್ತಮವಾಗಿ ಕಾರ್ಯಕ್ರಮ ಯೋಜನೆಗೊಂಡಿದೆ ಎಂದರು.

ಗ್ರಾ.ಪಂ. ಉಪಾಧ್ಯಕ್ಷ ಸಿ.ಎಸ್‌. ಸಿದ್ದೇಗೌಡ ಧ್ವಜಾರೋಹಣ ಮಾಡಿದರು.

ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಂ. ಮುರುಗೇಶ, ತಾ.ಪಂ. ಇಒ ವಿಶಾಲಾಕ್ಷಮ್ಮ, ಜಿ.ಪಂ. ಸದಸ್ಯೆ ರಾಧಾ, ಗ್ರಾ.ಪಂ. ಅಧ್ಯಕ್ಷೆ ಸುನಿತಾ ಕ್ರೀಡಾಪಟುಗಳಿಗೆ ಶುಭ ಕೋರಿದರು.

ಗ್ರಾ.ಪಂ. ಸದಸ್ಯರಾದ ಬಿ.ಎಂ. ಶಿವಮೂರ್ತಿ, ತಾ.ಪಂ. ಸದಸ್ಯೆ ಪ್ರತಿಮಾ, ಪಿಎಸಿಎಸ್‌ ಅಧ್ಯಕ್ಷ ಜಿ.ಈ. ಪ್ರಭು, ನಿವೃತ್ತ ಶಿಕ್ಷಕ ಮರುಳಪ್ಪ, ಮುಖಂಡ ಗುರುಪಾದಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ಕೆ.ಎಂ. ಮಹೇಂದ್ರ, ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ದೈಹಿಕ ಶಿಕ್ಷಕ ಪರಿವೀಕ್ಷಕ ಜಿ. ಚಂದ್ರಪ್ಪ ಇತರರು ಉಪಸ್ಥಿತರಿದ್ದರು.

ತಾಲೂಕಾದ್ಯಂತ 700 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದೇ ಸಂದರ್ಭ ರಾಷ್ಟ್ರ ಮಟ್ಟದ ಕರಾಟೆ ಕ್ರೀಡಾಪಟು ಇಂದುಶ್ರೀ, ಹ್ಯಾಮರ್‌ ಥ್ರೋನಲ್ಲಿಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು ರಂಗೇನಹಳ್ಳಿಯ ದೈಹಿಕ ಶಿಕ್ಷಣ ಶಿಕ್ಷಕ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಎಂ.ಆರ್‌. ವರ್ಷ ಪ್ರಾರ್ಥಿಸಿ, ಮುಖ್ಯ ಶಿಕ್ಷಕ ಟಿ.ಎಂ.ದೇವರಾಜ್‌ ಸ್ವಾಗತಿಸಿದರು. ಟಿ.ಎಂ.ಮಂಜುಳ ನಿರೂಪಿಸಿ, ಎ.ಪಿ. ಗುರುಮೂರ್ತಿ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ