ಆ್ಯಪ್ನಗರ

ಮಾನಗಾರು ಗದ್ದೆ ರಾಜಕಾಲುವೆ ಸ್ವಚ್ಛತೆಗೆ ಆಗ್ರಹ

ಪಟ್ಟಣಕ್ಕೆ ಸಮೀಪದ ಮಾನಗಾರು ಗದ್ದೆಯಲ್ಲಿರುವ ರಾಜಕಾಲುವೆ ನಿರ್ಮಾಣ ಹಂತದಲ್ಲಿರುವ ಬಿಆರ್‌ವಿ ಮಾಡೆಲ್‌ ಶಾಲೆ ಬಳಿ ಕಸ ಕಡ್ಡಿ ತುಂಬಿ ನೀರು ಸಂಗ್ರಹವಾಗಿದೆ. ಸಮರ್ಪಕವಾಗಿ ನೀರು ಹರಿಯದೇ ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.

Vijaya Karnataka 26 Jun 2019, 5:00 am
ಶೃಂಗೇರಿ: ಪಟ್ಟಣಕ್ಕೆ ಸಮೀಪದ ಮಾನಗಾರು ಗದ್ದೆಯಲ್ಲಿರುವ ರಾಜಕಾಲುವೆ ನಿರ್ಮಾಣ ಹಂತದಲ್ಲಿರುವ ಬಿಆರ್‌ವಿ ಮಾಡೆಲ್‌ ಶಾಲೆ ಬಳಿ ಕಸ ಕಡ್ಡಿ ತುಂಬಿ ನೀರು ಸಂಗ್ರಹವಾಗಿದೆ. ಸಮರ್ಪಕವಾಗಿ ನೀರು ಹರಿಯದೇ ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.
Vijaya Karnataka Web CKM-23SRI1


ಎರಡು ವರ್ಷದ ಹಿಂದೆ ರಾಜ ಕಾಲುವೆಯನ್ನು ಜೆಸಿಬಿ ಯಂತ್ರದಿಂದ ಮಣ್ಣು ತೆಗೆದು ನೀರು ಸರಾಗವಾಗಿ ಹರಿಯುತ್ತಿತ್ತು. ಮಳೆಗಾಲದಲ್ಲಿ ಪಟ್ಟಣ ಹಾಗೂ ಮಾನಗಾರು ಬಡಾವಣೆ, ಕೆರೆದಂಡೆಯ ನೀರು ಈ ರಾಜ ಕಾಲುವೆ ಮೂಲಕ ಹರಿಯುತ್ತದೆ. ಈಗ ಕಾಲುವೆಯಲ್ಲಿ ಮಣ್ಣು, ತ್ಯಾಜ್ಯ, ಕಸ ಕಡ್ಡಿ ತುಂಬಿದ್ದು, ಇದರಿಂದ ಅಲ್ಲಲ್ಲಿ ನೀರು ಸಂಗ್ರಹವಾಗಿದೆ. ಮಳೆಗಾಲ ಹೆಚ್ಚಾಗುವ ಮುನ್ನ ಕಾಲುವೆಯ ಮಣ್ಣು ತೆಗೆದು, ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು.
-ಶೋಭಾಆಚಾರ್ಯ, ಮಾನಗಾರು, ಶೃಂಗೇರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ