ಆ್ಯಪ್ನಗರ

ಲೋಕಪಾಲ ವಿಧೇಯಕ ಜಾರಿಗೆ ಆಗ್ರಹ

ಲೋಕಪಾಲ ವಿಧೇಯಕ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಎರಡನೇ ಸ್ವಾತಂತ್ರ್ಯ ಸಂಗ್ರಾಮ ವೇದಿಕೆಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

Vijaya Karnataka 24 Mar 2018, 5:00 am
ಚಿಕ್ಕಮಗಳೂರು : ಲೋಕಪಾಲ ವಿಧೇಯಕ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಎರಡನೇ ಸ್ವಾತಂತ್ರ್ಯ ಸಂಗ್ರಾಮ ವೇದಿಕೆಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
Vijaya Karnataka Web demand for lokpal bill
ಲೋಕಪಾಲ ವಿಧೇಯಕ ಜಾರಿಗೆ ಆಗ್ರಹ


ನಗರದ ಆಜಾದ್‌ ಪಾರ್ಕಿನಲ್ಲಿ ಸಮಾವೇಶಗೊಂಡ ಹಲವಾರು ಕಾರ್ಯಕರ್ತರು ಭ್ರಷ್ಟಾಚಾರ ಸಾಕು ಲೋಕಪಾಲ ಮಸೂದೆ ಬೇಕು ಎಂಬ ಘೋಷಣೆಯೊಂದಿಗೆ ಪ್ರತಿಭಟಿಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ.ಸುಂದರಗೌಡ ಮಾತನಾಡಿ, ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈ ಮೂರೂ ಪಕ್ಷಗಳಿಗೆ ಲೋಕಪಾಲ್‌ ಮಸೂದೆ ಬೇಡವಾಗಿದೆ. ಎಲ್ಲ ಸರಕಾರಗಳು ಲೋಕಸೇವಾ ಆಯೋಗದ ಅಡಿಯಲ್ಲಿ ವೇತನ ಆಯೋಗವನ್ನು ಭದ್ರಪಡಿಸುವುದನ್ನು ಬಿಟ್ಟರೆ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳನ್ನೇ ಶಿಥಿಲಗೊಳಿಸಿವೆ ಎಂದು ಆರೋಪಿಸಿದರು. ಎರಡೂ ಸರಕಾರಗಳು ಚುನಾವಣೆ ವೈಭವೀಕರಣದಲ್ಲಿ ಸಾರ್ವಜನಿಕ ಸೇವೆಯನ್ನು ನಿರ್ಲಕ್ಷ್ಯ ಮಾಡಿವೆ. ರೈತರ ಉತ್ಪನ್ನಕ್ಕೆ ಸರಿಯಾದ ಬೆಲೆ ನೀಡದೆ ಅವರ ಆತ್ಮಹತ್ಯೆಗೆ ಈ ಸರಕಾರಗಳು ಕಾರಣವಾಗಿವೆ. ಜಾತ್ಯಾತೀತತೆ ಹೆಸರಲ್ಲಿ ಜಾತಿ ವೈಭವೀಕರಿಸಲಾಗುತ್ತಿದೆ. ಚಿಕ್ಕಮಗಳೂರು ನಗರ ನೈರ್ಮಲ್ಯದಲ್ಲಿ ಹಿಂದುಳಿದಿದೆ. ಸರಕಾರದ ಸಾಧನೆ ಶೂನ್ಯವಾದರೆ ವೈಪಲ್ಯ ಆಕಾಶದೆತ್ತರಕ್ಕೆ ಏರಿದೆ ಎಂದು ದೂರಿದರು.ಪದಾಧಿಕಾರಿ ಕೃಷ್ಣೇಗೌಡ ಮತ್ತಿತರರು ಹಾಜರಿದ್ದರು. ಜಿಲ್ಲಾಧಿಕಾರಿ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ