ಆ್ಯಪ್ನಗರ

ಕಿಸಾನ್‌ ಸಮ್ಮಾನ್‌ ನಿಂದ ಬಿಡುಗಡೆಗೆ ಆಗ್ರಹ

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಕಾರ್ಯ ಒತ್ತಡದಿಂದ ತಮ್ಮನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮಲೆಕ್ಕಾಧಿಕಾರಿಗಳು ತಹಸಿಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

Vijaya Karnataka 4 Jul 2019, 5:00 am
ಚಿಕ್ಕಮಗಳೂರು: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಕಾರ್ಯ ಒತ್ತಡದಿಂದ ತಮ್ಮನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮಲೆಕ್ಕಾಧಿಕಾರಿಗಳು ತಹಸಿಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web CKM-3RUDRAP3


ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಬುಧವಾರ ತಹಸಿಲ್ದಾರ್‌ ನಂದಕುಮಾರ್‌ ಅವರನ್ನು ಭೇಟಿ ಯಾಗಿ ಈ ಬಗ್ಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭ ಸಂಘದ ಮುಖಂಡರು ಮಾತನಾಡಿ, ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಕಾರ್ಯಕ್ರಮದಿಂದ ನಮ್ಮನ್ನು ಕೈಬಿಡಬೇಕು. ನಮ್ಮ ಇಲಾಖೆ ಕೆಲಸದ ಜತೆಗೆ ಇತರೆ ಇಲಾಖೆ ಕೆಲಸಗಳಾದ ತೆಂಗು ಸಮೀಕ್ಷೆ, ಬೆಳೆಹಾನಿ, ಆರ್ಥಿಕ ಗಣತಿ, ಜೀತಪದ್ಧತಿ, ಪಡಿತರಚೀಟಿ, ಕೃಷಿ ಗಣತಿ, ನೀರಾವರಿ ಗಣತಿ ಮತ್ತಿತರೆ ಸಮೀಕ್ಷೆಗಳನ್ನು ನಾವು ಈವರೆಗೆ ನಿರ್ವಹಿಸುತ್ತಾ ಬಂದಿದ್ದೇವೆ.

ಈಗ ಕಿಸಾನ್‌ ಸಮ್ಮಾನ್‌ ಯೋಜನೆ ಸೇರ್ಪಡೆಯಾಗಿದೆ. ಈ ಯೋಜನೆಯನ್ನು ಕೃಷಿ, ತೋಟಗಾರಿಕೆ, ಪಶುಸಂಗೋಪನಾ, ಗ್ರಾಮಪಂಚಾಯಿತಿ ಇಲಾಖೆಗಳಲ್ಲೂ ಅನುಷ್ಠಾನ ಮಾಡಲು ಸರಕಾರ ಅವಕಾಶ ಕಲ್ಪಿಸಿ ಆದೇಶಿಸಿದೆ. ಆದರೆ, ಆ ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಪೂರ್ಣ ಕಾರ್ಯಭಾರ ನಮ್ಮ ಮೇಲೆ ಬಿದ್ದಿದೆ. ನಾವು ಹಳ್ಳಿಗಳಿಗೆ ತೆರಳಿ ಹಗಲು ರಾತ್ರಿ ಎನ್ನದೆ ದಾಖಲೆ ಕ್ರೂಢೀಕರಿಸಿ ಯೋಜನೆ ಅನುಷ್ಠಾನ ಮಾಡುತ್ತಿದ್ದೇವೆ. ಅದರಲ್ಲಿ ಶೇ.90 ರಷ್ಟು ಪ್ರಗತಿ ಸಾಧಿಸಿದ್ದು ಇನ್ನು ಶೇ.10 ರಷ್ಟು ನಾನಾ ಕಾರಣದಿಂದ ದಾಖಲೆ ಕ್ರೋಢಿಕರಿಸಲು ಸಾಧ್ಯವಾಗಿಲ್ಲ. ಆದರೆ, ನಮ್ಮ ಮೇಲೆ ಮತ್ತಷ್ಟು ಒತ್ತಡ ಹಾಕುವುದು ಸರಿಯಾದ ಕ್ರಮವಲ್ಲ. ಇದರಿಂದ ನಾವು ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿ ಹೋಗಿದ್ದು ಈ ಕಾರ್ಯ ಭಾರದಿಂದ ನಮ್ಮನ್ನು ಕೈಬಿಡಬೇಕು ಎಂದು ಮನವಿ ಮಾಡಿದರು. ಗ್ರಾಮ ಲೆಕ್ಕಾಧಿಕಾರಿಗಳಾದ ದಿನೇಶ್‌, ಹರ್ಷವರ್ಧನ, ಯಮುನಾ, ಶಾಶ್ವತ್‌, ವಸಂತ್‌ ಶಿಲ್ಪ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ