ಆ್ಯಪ್ನಗರ

ರೈತರ ನೆರವಿಗೆ ಕೃಷಿ ಇಲಾಖೆ ಸಿದ್ಧ

ಬರುವ ಮಳೆಗಾಲದಲ್ಲಿ ರೈತರಿಗೆ ಅಗತ್ಯವಿರುವ ಸಕಲ ನೆರವು ನೀಡಲು ಕೃಷಿ ಇಲಾಖೆ ಸಿದ್ಧವಾಗಿದೆ ಎಂದು ಸಹಾಯಕ ನಿರ್ದೇಶಕ ವೆಂಕಟೇಶ್‌ ಚೌಹಾಣ್‌ ಹೇಳಿದರು.

Vijaya Karnataka 16 Jun 2019, 5:00 am
ಕೊಪ್ಪ: ಬರುವ ಮಳೆಗಾಲದಲ್ಲಿ ರೈತರಿಗೆ ಅಗತ್ಯವಿರುವ ಸಕಲ ನೆರವು ನೀಡಲು ಕೃಷಿ ಇಲಾಖೆ ಸಿದ್ಧವಾಗಿದೆ ಎಂದು ಸಹಾಯಕ ನಿರ್ದೇಶಕ ವೆಂಕಟೇಶ್‌ ಚೌಹಾಣ್‌ ಹೇಳಿದರು.
Vijaya Karnataka Web CKM-14KPH4


ಅವರು ಮಾತನಾಡಿ, ಇಲಾಖೆಯಲ್ಲಿ ಈಗಾಗಲೆ ರೈತರಿಗೆ ಬಿತ್ತನೆ ಬೀಜವನ್ನು ಕೆಲವೆ ದಿನಗಳೊಳಗೆ ವಿತರಿಸಲಾಗುವುದು. ಅದಕ್ಕಾಗಿ ಇಂಟಾನ್‌, ಬಾಂಗ್ಲಾ ಅಕ್ಕಿ, ಐಇಟಿ ತುಂಗಾ, 1001 ಎಂಟಿಯು ತಲಾ 20 ಕ್ವಿಂಟಾಲ್‌ ಬಿತ್ತನೆ ಬೀಜ ತರಿಸಲಾಗುವುದು. ಮುಂದಿನ ದಿನದಲ್ಲಿ ಟಾರ್ಪಾಲಿನ್‌ಗಾಗಿ ಅರ್ಜಿ ಸ್ವೀಕರಿಸುತ್ತಿದ್ದು, ಆದ್ಯತೆ ಮೇರೆಗೆ 8 ಮೀ., 6 ಮೀ., ಅಳತೆಯ ಟಾರ್ಪಾಲಿನ್‌(ತಲಾ 1) ವಿತರಿಸಲಾಗುವುದು. ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ಪವರ್‌ ಫೀಡರ್‌, ಪವರ್‌ ಸ್ಪ್ರೇಯರ್‌, ಡಿಸೆಲ್‌ ಪಂಪ್‌ ಸೆಟ್‌, ಟಿಲ್ಲರ್‌, ಮಿನಿ ಟ್ರ್ಯಾಕ್ಟರ್‌, ಒಕ್ಕಣೆ ಯಂತ್ರ, ಗದ್ದೆ ಕಟಾವು ಯಂತ್ರ, ಸ್ಟ್ರಿಂಕ್ಲರ್‌ ಸೆಟ್‌, ಎರೆಹುಳು ಗೊಬ್ಬರ(50ಕೆಜಿ/105 ರೂ), ಟ್ರೈಕೋಡರ್ಮಾ, ಜಿಂಕ್‌ ಸಲ್ಫೇಟ್‌, ಬ್ಯಾಟರಿ ಸ್ಪ್ರೇಯರ್‌, ಪæäೕರ್ಟಬಲ್‌ ಸ್ಪ್ರೇಯರ್‌ ಅಲ್ಲದೆ ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಿಸಲು ಸಹಾಯಧನ ನೀಡಲಾಗುವುದು. ರೈತರು ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ ಕಚೇರಿಗೆ ಸಂಪರ್ಕಿಸಬೇಕು (ದೂ: 08265-221217) ಎಂದು ಅವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ