ಆ್ಯಪ್ನಗರ

ಶಿಕ್ಷಣ ಇಲಾಖೆ ಸುತ್ತೋಲೆ ವಿರೋಧಿಸಿ ಪ್ರತಿಭಟನೆ

ಶಿಕ್ಷಣ ಇಲಾಖೆಯು ಡಾ.ಅಂಬೇಡ್ಕರ್‌ ಅವರನ್ನು ಅಪಮಾನಗೊಳಿಸುವ ಸುತ್ತೋಲೆ ಹೊರಡಿಸಿರುವುದನ್ನು ವಿರೋಧಿಸಿ ದ.ಸಂ.ಸ., ಬಿಎಸ್ಪಿ ಮತ್ತಿತರ ಪ್ರಗತಿಪರ ಸಂಘಟನೆ ಒಕ್ಕೂಟದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ತಹಸೀಲ್ದಾರರ ಮೂಲಕ ಮನವಿ ನೀಡಿದರು.

Vijaya Karnataka 19 Nov 2019, 5:00 am
ಕೊಪ್ಪ; ಶಿಕ್ಷಣ ಇಲಾಖೆಯು ಡಾ.ಅಂಬೇಡ್ಕರ್‌ ಅವರನ್ನು ಅಪಮಾನಗೊಳಿಸುವ ಸುತ್ತೋಲೆ ಹೊರಡಿಸಿರುವುದನ್ನು ವಿರೋಧಿಸಿ ದ.ಸಂ.ಸ., ಬಿಎಸ್ಪಿ ಮತ್ತಿತರ ಪ್ರಗತಿಪರ ಸಂಘಟನೆ ಒಕ್ಕೂಟದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ತಹಸೀಲ್ದಾರರ ಮೂಲಕ ಮನವಿ ನೀಡಿದರು.
Vijaya Karnataka Web 18KPH4_35


ಸಂವಿಧಾನವನ್ನು ಅಂಬೇಡ್ಕರ್‌ ಒಬ್ಬರೇ ಬರೆದಿದ್ದಲ್ಲಎಂದು ಸುತ್ತೋಲೆಯಲ್ಲಿನಮೂದಿಸಿಲಾಗಿದೆ. ಇದು ಅಂಬೇಡ್ಕರ್‌ರನ್ನು ಅಪಮಾನಿಸುವ ಮತ್ತು ಸಂವಿಧಾನದ ಮಹತ್ವ ಕುಂದಿಸುವ ಹುನ್ನಾರವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿಎಂಸಿಎ. ಖಾಸಗಿ ಸೇವಾ ಸಂಸ್ಥೆ ಪ್ರಕಟಿಸಿರುವ ಕೈಪಿಡಿಯು ಅಂಬೇಡ್ಕರ ಅವಮಾನಿಸುವ ಹುನ್ನಾರವನ್ನು ದೃಢೀಕರಿಸುವಂತಿದೆ. ಇಂತಹ ಕೃತ್ಯ ಎಸುಗುವವರ ವಿರುದ್ಧ, ಅಂಬೇಡ್ಕರ್‌ರನ್ನು ಅಪಮಾನಿಸಿದ ಇಲಾಖೆಯ ವರಿಷ್ಠರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಸಂಘಟನೆ ಆಗ್ರಹಿಸುತ್ತದೆ ಎಂದು ತಿಳಿಸಲಾಗಿದೆ.

ಪ್ರತಿಭಟನೆಯಲ್ಲಿಬಿಎಸ್ಪಿ ಜಿಲ್ಲಾಕಾರ್ಯದರ್ಶಿ ಬಿ.ಎನ್‌.ಆನಂದ್‌, ಜಿಲ್ಲಾಸಂಯೋಜಕ ಕೆ.ಎಂ.ಗೋಪಾಲ್‌, ದ.ಸಂ.ಸ. ಅಂಬೇಡ್ಕರ್‌ ಧ್ವನಿಯ ರಾಜಾಶಂಕರ್‌, ನಾಗವರ ಬಣದ ಟಿ.ಎಸ್‌.ಸುರೇಶ್‌, ತಾಲೂಕು ರೈತ ಸಂಘದ ಸಂಚಾಲಕ ನವೀನ್‌ ಕರುವಾನೆ, ಮುಸ್ಲಿಂ ಸಂಘಟನೆ ಚಿಂತಕ ಜುಬೇರ್‌ ಅಹಮದ್‌, ಆದಿವಾಸಿ ರಕ್ಷಣಾ ಸಮಿತಿಯ ಕೆಸವೆ ಚಂದ್ರಶೇಖರ್‌, ನರಸೀಪುರ ಗ್ರಾ.ಪಂ. ಅಧ್ಯಕ್ಷ ವಾಸಪ್ಪ, ರತ್ನಾಕರ್‌, ಪ್ರಭಾಕರ್‌, ಕಿರಣ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ