ಆ್ಯಪ್ನಗರ

ಮೊಬೈಲ್‌ ಹೆಚ್ಚು ಬಳಕೆಯಿಂದ ಖಿನ್ನತೆ

ಧಾರವಾಹಿ ವೀಕ್ಷಣೆ, ಮೊಬೈಲ್‌ ಫೋನ್‌ ಹೆಚ್ಚು ಬಳಕೆಯಿಂದ ಕಣ್ಣಿನ ಸಮಸ್ಯೆ ಜತೆಗೆ ಮಾನಸಿಕ ಖಿನ್ನತೆ ಉಂಟಾಗುತ್ತದೆ ಎಂದು ಮಾನಸಿಕ ರೋಗ ತಜ್ಞ ಡಾ. ವಿನಯ್‌ ಕುಮಾರ್‌ ಹೇಳಿದರು.

Vijaya Karnataka 3 Jul 2018, 5:00 am
ಚಿಕ್ಕಮಗಳೂರು : ಧಾರವಾಹಿ ವೀಕ್ಷಣೆ, ಮೊಬೈಲ್‌ ಫೋನ್‌ ಹೆಚ್ಚು ಬಳಕೆಯಿಂದ ಕಣ್ಣಿನ ಸಮಸ್ಯೆ ಜತೆಗೆ ಮಾನಸಿಕ ಖಿನ್ನತೆ ಉಂಟಾಗುತ್ತದೆ ಎಂದು ಮಾನಸಿಕ ರೋಗ ತಜ್ಞ ಡಾ. ವಿನಯ್‌ ಕುಮಾರ್‌ ಹೇಳಿದರು.
Vijaya Karnataka Web depression with more use of mobile
ಮೊಬೈಲ್‌ ಹೆಚ್ಚು ಬಳಕೆಯಿಂದ ಖಿನ್ನತೆ


ನಗರದ ಎಸ್‌ಟಿಜೆ ಕಾಲೇಜಿನಲ್ಲಿ ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣೆ ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಮೊಬೈಲ್‌ಗಳಿಂದ ತಮ್ಮಲ್ಲಿರುವ ಪ್ರತಿಭೆ ಹೊರಹಾಕಲಾಗುವುದಿಲ್ಲ. ಪ್ರತಿನಿತ್ಯ ಯೋಗ, ಧ್ಯಾನ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಉತ್ತಮ ಆರೋಗ್ಯ ಪಡೆಯಲು ಸಹಕಾರಿ. ಯಾವುದೇ ಸಮಸ್ಯೆ ತಲೆದೋರಿದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದರು.

ಪ್ರಬಂಧ ಸ್ಪರ್ಧೆಯಲ್ಲಿ ಮಿಥುನ ಪ್ರಥಮ, ಅನಿತ ದ್ವಿತೀಯ,ಚಾಂದಿನಿ ತೃತೀಯ ಹಾಗೂ ್ನ ದೀಪಿಕ ಸಮಾಧಾನಕರ ಬಹುಮಾನ ಗಳಿಸಿದರು.

ಈ ಸಂದರ್ಭ ತರಳಬಾಳು ಜಗದ್ಗುರು ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲರಾದ ಜೆ.ಕೆ.ಭಾರತಿ, ಆರೋಗ್ಯ ಇಲಾಖೆಯ ಹರ್ಷ, ಅರಸ್‌, ಕಾಲೇಜಿನ ರಾ.ಸೇ.ಯೋ.ಅಧಿಕಾರಿ ಎಂ.ಆರ್‌.ಚಂದ್ರಶೇಖರ್‌, ಉಪನ್ಯಾಸಕ ಪ್ರಕಾಶ್‌ ಹಾಜರಿದ್ದರು. ನಿಖಿತ ಪ್ರಾರ್ಥಿಸಿ, ಸೌಭಾಗ್ಯ ನಿರೂಪಿಸಿದರು. ತೀರ್ಥ ಸ್ವಾಗತಿಸಿ, ಚೈತ್ರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ