ಆ್ಯಪ್ನಗರ

ಮಾನವ ಸ್ವಾರ್ಥದಿಂದ ಭೂಮಿ ವಿನಾಶ

ಮಾನವನ ಸ್ವಾರ್ಥದಿಂದ ಭೂಮಿಯ ವಿನಾಶ ಖಂಡಿತ ಎಂದು ಶೃಂಗೇರಿಯ ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

Vijaya Karnataka 30 Apr 2019, 5:00 am
ಕೊಪ್ಪ: ಮಾನವನ ಸ್ವಾರ್ಥದಿಂದ ಭೂಮಿಯ ವಿನಾಶ ಖಂಡಿತ ಎಂದು ಶೃಂಗೇರಿಯ ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
Vijaya Karnataka Web CKM-29kph3


ಪಟ್ಟಣದ ಹೊರವಲಯದ ದಾಸಮಠದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಮನುಷ್ಯ ಪ್ರಕೃತಿ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ. ಅದರಿಂದ ಭೂಮಿಯ ಉಷ್ಣಾಂಶ ಹೆಚ್ಚುತ್ತಿದೆ. ಮಳೆ, ಬೆಳೆಯಿಲ್ಲವಾಗಿದೆ. ಮರ ಒಣಗುತ್ತಿವೆ. ಪರಿಣಾಮವಾಗಿ ಎಲ್ಲ ಸರ್ವ ನಾಶವಾಗುವ ಸಂಭವವಿದೆ. ಮಕ್ಕಳಿಗೆ ಸಂಸ್ಕಾರವಿಲ್ಲದ್ದರಿಂದ ವೃದ್ಧ ತಾಯಿ ತಂದೆಯರನ್ನು ವೃದ್ಧಾಶ್ರಮಕ್ಕೆ ಸೇರಿಸಲಾಗುತ್ತಿದೆ. ಭಗವಂತ, ದೇಶ, ತಂದೆ-ತಾಯಿ, ಭೂಮಂಡಲದ ಮೇಲೆ ಶ್ರದ್ಧೆಯಿರಬೇಕು. ಭಗವಂತ ಸರ್ವ ವ್ಯಾಪಿ. ಆದರೆ ಅವನನ್ನು ಕಾಣುವ ದೃಷ್ಟಿ ಇರಬೇಕು. ಜಾತ್ರೆ ಪಿಕ್‌ನಿಕ್‌ ಆಗಬಾರದು. ಅದು ಆರಾಧನೆಯ ಶ್ರದ್ಧಾ ಕೇಂದ್ರವಾಗಬೇಕು ಎಂದರು.

ತಿಪಟೂರು ಸಮೀಪದ ದಸರೀಘಟ್ಟ ಶಾಖಾ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ಮಾನವನ ಕೆಟ್ಟ ಆಲೋಚನೆಯಿಂದಾಗಿ ಸಾವು ಬಹುಬೇಗ ಸಂಭವಿಸುತ್ತಿದೆ. ಪರೋಪಕಾರ ಬುದ್ದಿ ಕ್ಷೀಣಿಸುತ್ತಿದೆ. ದ್ವೇಶ, ಅಹಂಕಾರ, ಅಸೂಯೆಯಿಂದ ಯಾವುದೆ ಲಾಭವಿಲ್ಲ. ಅದನ್ನು ಬಿಟ್ಟು ಬಾಳಬೇಕು ಎಂದರು.

ಸೇವಾ ಸಮಿತಿ ಸದಸ್ಯರಾದ ಕೂಡ್ರೂ ಶ್ರೀನಿವಾಸ್‌, ಎಚ್‌.ಎಸ್‌.ಕಳಸಪ್ಪ, ಕುಂಚೂರು ರತ್ನಾಕರ್‌, ಸಿಸಲೆ ರುದ್ರಪ್ಪ, ಹೊಟ್ಟನಕೊಡಿಗೆ ಚಂದ್ರಶೇಖರ್‌, ಬಡಿಗೆ ಚಂದ್ರಶೇಖರ್‌ ಮತ್ತಿತರರು ಹಾಜರಿದ್ದರು.

ಶ್ಯಾಮಲ ಪ್ರಾರ್ಥಿಸಿ, ಪ್ರಾಂಶುಪಾಲ ಮಹಾಬಲೇಶ್‌ ಸ್ವಾಗತಿಸಿ, ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ