ಆ್ಯಪ್ನಗರ

ವಾಟ್ ಈಸ್ ದೇವೇಗೌಡ ಎಂಬುದು ಗೊತ್ತಾಗಲಿದೆ: ಸಿಎಂಗೆ ಎಚ್‌ಡಿಡಿ

'ನನ್ನನು ಜಾತಿವಾದಿ ಎಂದು ಬಿಂಬಿಸಿಬಿಟ್ಟಿದ್ದಾರೆ. ನಾನು ಜನರ ಪರ. ಮೊದಲು ದೇವೇಗೌಡ ಏನು ಎಂದು ತಿಳಿದುಕೊಳ್ಳಲಿ,' ಎಂದು ಎಚ್‌ಡಿಡಿ ಅವರು ಸಿಎಂಗೆ ಹೇಳಿದ್ದಾರೆ.

Vijaya Karnataka Web 8 Dec 2017, 5:02 pm
ಚಿಕ್ಕಮಗಳೂರು: 'ನನ್ನನು ಜಾತಿವಾದಿ ಎಂದು ಬಿಂಬಿಸಿಬಿಟ್ಟಿದ್ದಾರೆ. ನಾನು ಕುರುಬರ ಅಥವಾ ಅಹಿಂದ ಪರವೂ ಅಲ್ಲ. ನಾನು ಜನರ ಪರ. ಮೊದಲು ದೇವೇಗೌಡ ಏನು ಎಂದು ತಿಳಿದುಕೊಳ್ಳಲಿ.
Vijaya Karnataka Web devegowda criticise to siddaramaiah
ವಾಟ್ ಈಸ್ ದೇವೇಗೌಡ ಎಂಬುದು ಗೊತ್ತಾಗಲಿದೆ: ಸಿಎಂಗೆ ಎಚ್‌ಡಿಡಿ


ವಾಟ್ ಈಸ್ ದೇವೇಗೌಡ ಎಂದು ಮುಂದೆ ನಡೆಯುವ ಫೈಟಿಂಗ್‌ನಿಂದ ಗೊತ್ತಾಗುತ್ತದೆ ಎಂದು ದೇವೇಗೌಡರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕೆಂಡ ಕಾರಿದ್ದಾರೆ. ದೇವೇಗೌಡರದು ಯಾರ ಪರ ನಿಲುವು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

'ನಾವು ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ ಸೇರಿದಂತೆ ಎಲ್ಲ ಭಾಗ್ಯ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳುತ್ತಾರೆ. ಹಾಗಾದರೆ ಇವರು ಯಾರ ಪರ ಇದ್ದಾರೆ,' ಎಂದು ಸಿದ್ದರಾಮಯ್ಯ ಕೇಳಿದ್ದರು.

ಕುಮಾರಸ್ವಾಮಿ ಎರಡು ಕ್ಷೇತ್ರ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ದೇವೇಗೌಡರು, ಕುಮಾರಸ್ವಾಮಿ ರಾಮನಗರದಲ್ಲಿ ಸ್ಪರ್ಧಿಸಲಿ. ಎರಡು ಕಡೆ ನಿಂತರೆ ಜನರಿಗೆ ಗೊಂದಲ ಉಂಟಾಗುತ್ತದೆ. 2018 ರ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲಿ ಕಿಂಗ್ ಮೇಕರ್ ಆಗುವ ವಿಚಾರದ ಬಗ್ಗೆ ಮಾತನಾಡಿ, ಮೇ 9 ಕ್ಕೆ ಕಿಂಗ್ ಯಾರು, ಕಿಂಗ್ ಮೇಕರ್ ಯಾರು ಎಂದು ಗೊತ್ತಾಗುತ್ತದೆ. ರಾಜ್ಯದಲ್ಲಿ ಧರ್ಮಸಿಂಗ್ ಗೆ ಬೆಂಬಲ ನೀಡಿದ್ದು,ನನ್ನ ಮಗ ಬಿಜೆಪಿ ಸಹವಾಸ ಮಾಡಿ ನೋಡಿದ್ದಾನೆ. ಜನ ಬೆಂಬಲ ಕೊಡಲಿಲ್ಲ ಅಂದರೆ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ಯಾರ ಜತೆಯಲ್ಲೂ ರಾಜಿ ಇಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ