ಆ್ಯಪ್ನಗರ

ಬಾಲ್ಯದಿಂದಲೇ ಕ್ರೀಡಾಸಕ್ತಿ ಬೆಳೆಸಿ

ಬಾಲ್ಯದಲ್ಲಿರೂಢಿಸಿಕೊಂಡ ಕ್ರೀಡಾಸಕ್ತಿ, ಕ್ರೀಡಾ ನಡವಳಿಕೆಯಿಂದ ಮಹತ್ವದ ಸಾಧನೆ ಮಾಡಬಹುದು ಎಂದು ಎನ್‌ಐಎಸ್‌ ತರಬೇತುದಾರರಾದ ವಿನುತ ಅಭಿಪ್ರಾಯಿಸಿದರು.

Vijaya Karnataka 15 Dec 2019, 5:00 am
ಚಿಕ್ಕಮಗಳೂರು: ಬಾಲ್ಯದಲ್ಲಿರೂಢಿಸಿಕೊಂಡ ಕ್ರೀಡಾಸಕ್ತಿ, ಕ್ರೀಡಾ ನಡವಳಿಕೆಯಿಂದ ಮಹತ್ವದ ಸಾಧನೆ ಮಾಡಬಹುದು ಎಂದು ಎನ್‌ಐಎಸ್‌ ತರಬೇತುದಾರರಾದ ವಿನುತ ಅಭಿಪ್ರಾಯಿಸಿದರು.
Vijaya Karnataka Web develop sports from an early age
ಬಾಲ್ಯದಿಂದಲೇ ಕ್ರೀಡಾಸಕ್ತಿ ಬೆಳೆಸಿ


ಶ್ರೀ ಭುವನೇಂದ್ರ ವಿದ್ಯಾಸಂಸ್ಥೆಯ 30ನೇ ವರ್ಷದ ಕ್ರೀಡಾದಿನದ ಸ್ಪರ್ಧಾ ವಿಜೇತರಿಗೆ ಶಾಲಾ ಮೈದಾನದಲ್ಲಿಶನಿವಾರ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಕ್ರೀಡೆ ಎಂದ ಕೂಡಲೇ ನೆನಪಾಗುವುದೇ ಒಲಂಪಿಕ್ಸ್‌. ಪ್ರತಿಯೊಬ್ಬ ಕ್ರೀಡಾಪಟುಗಳಿಗೂ ಒಲಂಪಿಕ್ಸ್‌ನಲ್ಲಿಭಾಗವಹಿಸುವುದು ಜೀವನದ ಉನ್ನತ ಗುರಿಯಾಗಿರುತ್ತದೆ. ಬಾಲ್ಯದಲ್ಲೆಉತ್ತಮ ಕ್ರೀಡಾ ನಡವಳಿಕೆಗಳನ್ನು ರೂಢಿಸಿಕೊಳ್ಳಬೇಕು. ಆಸಕ್ತಿಯಿಂದ ನಿರಂತರವಾದ ಅಭ್ಯಾಸ ಮಾಡಿದರೆ ಗುರಿಯತ್ತ ಸಾಗಬಹುದು ಎಂದರು.

ಶಾಲೆಯ ವಿದ್ಯಾಪ್ರದೀಪ್‌ಪೈ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡಾಕೂಟದಲ್ಲಿಸೋಲು, ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೆ ನಿಜವಾದ ಕ್ರೀಡಾಪಟು. ಕ್ರೀಡೆಯಲ್ಲಿಯಶಸ್ಸು ಸಾಧಿಸಲು ಅಡ್ಡ ದಾರಿಗಳಿಲ್ಲ. ಕೇವಲ ಪರಿಶ್ರಮವೇ ಹೆದ್ದಾರಿ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಶಾಲಾಸಮಿತಿ ಅಧ್ಯಕ್ಷ ಬಿ.ಎಚ್‌.ನರೇಂದ್ರಪೈ, ನಿವೃತ್ತ ಬ್ಯಾಂಕ್‌ನೌಕರ ಮಂಜುನಾಥಕಿಣಿ, ಶಾಲಾಪೋಷಕಿ ಮಧು, ಪ್ರಾಂಶುಪಾಲ ಕೆ.ಪಿ.ದೇವರಾಜ್‌, ಮುಖ್ಯಶಿಕ್ಷಕಿ ಜಮೀಲಾಖಾನಂ ಹಾಜರಿದ್ದರು. ಶಿಕ್ಷಕ ಪ್ರವೀಣಕುಮಾರ್‌ ಸ್ವಾಗತಿಸಿ, ಲಕ್ಷಿತ್ರ್ಮೕ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ