ಆ್ಯಪ್ನಗರ

ಅಭಿವೃದ್ಧಿಗೆ ಅನುದಾನ ಅಗತ್ಯ

ಜನಸಂಪರ್ಕ ಸಭೆ,ಗ್ರಾಮಸಭೆ ಯಾವುದನ್ನು ಮಾಡಿದರೂ ಅನುದಾನ ಬರದಿದ್ದರೆ ಜನಪ್ರತಿನಿಧಿಗಳು ಯಾವ ಕೆಲಸಗಳನ್ನು ಮಾಡಲು ಸಾಧÜ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್‌.ಪ್ರಭಾಕರ್‌ ಬೇಸರ ವ್ಯಕ್ತಪಡಿಸಿದರು.

Vijaya Karnataka 26 Jul 2019, 5:00 am
ಕಳಸ: ಜನಸಂಪರ್ಕ ಸಭೆ,ಗ್ರಾಮಸಭೆ ಯಾವುದನ್ನು ಮಾಡಿದರೂ ಅನುದಾನ ಬರದಿದ್ದರೆ ಜನಪ್ರತಿನಿಧಿಗಳು ಯಾವ ಕೆಲಸಗಳನ್ನು ಮಾಡಲು ಸಾಧÜ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್‌.ಪ್ರಭಾಕರ್‌ ಬೇಸರ ವ್ಯಕ್ತಪಡಿಸಿದರು.
Vijaya Karnataka Web CKM-24KLS1


ಇಡಕಣಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ.ಆದರೆ ಅನುದಾನ ಸಿಗುತ್ತಿಲ್ಲ.ಇದರಿಂದ ಏನು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧÜ್ಯ.ಗ್ರಾಮಸ್ಥರು ಊರಿಗೆ ಬರುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು.ಕಳಸ ತಾಲೂಕು ಕೇಂದ್ರ ಘೋಷಣೆಯಾದ ಹಿನ್ನೆಲೆಯಲ್ಲಿ ಕಳಸ ಪಟ್ಟಣವನ್ನೇ ತಾಲೂಕು ಕೇಂದ್ರ ಸ್ಥಾನವನ್ನಾಗಿ ಮಾಡಬೇಕು.ಯಾವುದೇ ಕಾರಣಕ್ಕೂ ಕುದುರೆಮುಖದಲ್ಲಿ ಮಾಡಕೂಡದು.ಕುದುರೆಮುಖದಲ್ಲಿರುವ ಕಟ್ಟಡಗಳನ್ನು ಅಧಿಕಾರಿಗಳಿಗೆ ವಸತಿ ನಿಲಯಕ್ಕೆ ಉಪಯೋಗಿಸಲಿ ಎಂದು ಹೇಳಿದರು.

ಮಲ್ಲೇಶನ ಗುಡ್ಡದಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಮರದ ಕಂಬಗಳ ಮುಖಾಂತರ ವಿದ್ಯುತ್‌ ತಂತಿ ಎಳೆಯಲಾಗಿದೆ.ಇದರಿಂದ ಅಪಾಯ ಹೆಚ್ಚಿದೆ. ಗ್ರಾಮದ ಕೆಲವೆಡೆ ವಿದ್ಯುತ್‌ ತಂಗಿಗಳು ಅತ್ಯಂತ ಕೆಳ ಮಟ್ಟದಲ್ಲಿ ಹಾಕಲಾಗಿದೆ. ಇದನ್ನು ಕೂಡಲೇ ಸರಿಪಡಿಸಿಕೊಡಬೇಕು ಎಂದು ಮೆಸ್ಕಾಂಗೆ ಮನವಿ ಮಾಡಿದರು.

ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ,ಪಂಪ್‌ ಕೆಟ್ಟು ಹೋಗಿರುವ ಬಗ್ಗೆ,ರಸ್ತೆಯ ದುಸ್ಥಿತಿಯ ಬಗ್ಗೆ,ಶಾಲೆಗಳಲ್ಲಿ ಶಿಕ್ಷ ಕರ ಕೊರತೆಯ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಮತ್ತು ಪಂಚಾಯಿತಿಯ ಗಮನಕ್ಕೆ ತಂದರು. ಅಧ್ಯಕ್ಷ ತೆಯನ್ನು ಇಡಕಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಚಿತ್ರ ಶ್ರೀಕಾಂತ್‌,ಉಪಾಧ್ಯಕ್ಷ ಅಣ್ಣಪ್ಪ,ನೋಡೆಲ್‌ ಅಧಿಕಾರಿಯಾಗಿ ಸಿ.ಚಂದ್ರಪ್ಪ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ