ಆ್ಯಪ್ನಗರ

ಮಾಮ್ಕೋಸ್‌ ಅಭಿವೃದ್ಧಿಗೆ ಬೆಳೆಗಾರರ ಶ್ರಮ ಅಗತ್ಯ

ಮಾಮ್ಕೋಸ್‌ ಅಭಿವೃದ್ಧಿಗಾಗಿ ಅಡಕೆ ಬೆಳೆಗಾರರು ಒಗ್ಗೂಡಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

Vijaya Karnataka 23 Aug 2019, 5:00 am
ಕೊಪ್ಪ: ಮಾಮ್ಕೋಸ್‌ ಅಭಿವೃದ್ಧಿಗಾಗಿ ಅಡಕೆ ಬೆಳೆಗಾರರು ಒಗ್ಗೂಡಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
Vijaya Karnataka Web CKM-22KPH1


ಪಟ್ಟಣದ ಮಾಮ್ಕೋಸ್‌ ಕಚೇರಿ ಆವರಣದಲ್ಲಿಬುಧವಾರ ಆಯೋಜಿಸಿದ್ದ ಷೇರುದಾರರ ಸಮಾಲೋಚನಾ ಸಭೆ ಮತ್ತು ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿ, ಸಂಸ್ಥೆಯು ಕೇವಲ ವಹಿವಾಟಿಗೆ ಸೀಮಿತವಾಗಿಲ್ಲ. ಬದಲಿಗೆ ಷೇರುದಾರರ ಉನ್ನತಿಗಾಗಿ ಶ್ರಮಿಸುತ್ತಿದೆ. ಅವರಿಗೆ ಬಹು ದೊಡ್ಡ ವಿಮೆ ರಕ್ಷಣೆ ನೀಡಿದೆ. ಅವರ ಕುಟುಂಬದ ಪ್ರತಿಭಾನ್ವಿತರನ್ನು ಗೌರವಿಸಿದೆ. ಆದ್ದರಿಂದ ಅಡಕೆ ಬೆಳೆಗಾರರು ಹೆಚ್ಚೆಚ್ಚು ಷೇರುದಾರರಾಗಿ ಸಂಸ್ಥೆ ಬೆಳೆಸಬೇಕು ಎಂದರು.

ಮಾಜಿ ಸಚಿವ ಡಿ.ಎನ್‌.ಜೀವರಾಜ್‌ ಮಾತನಾಡಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಈಗಾಗಲೆ ಅಡಕೆಗೆ ಮೂಲ ಮೌಲ್ಯ(ಬೇಸ್‌ ವ್ಯಾಲ್ಯೂ) ನಿಗದಿ ಪಡಿಸಿದ್ದಾರೆ. ಬೆಳೆಗಾರರು ಪಕ್ಷ ಭೇದ ಮರೆತು ಒಂದಾಗಿ ಹೋರಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಉಪಾಧ್ಯಕ್ಷ ಯಡಗೆರೆ ವೈ.ಎಸ್‌.ಸುಬ್ರಹ್ಮಣ್ಯ ಮಾತನಾಡಿ, ಬೆಳೆಗಾರರು ಗುಣಮಟ್ಟದ ಅಡಕೆ ಬೆಳೆಯಬೇಕು. ಸಂಸ್ಥೆಯಿಂದ ಲಭ್ಯವಿರುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು. ಅವರ ಹಿತರಕ್ಷಣೆಗೆ ಒಕ್ಕೂಟ ರಚಿಸಲಾಗಿದೆ ಎಂದರು.

ಸಂಸ್ಥೆ ನಿರ್ದೇಶಕರಾದ ಬಿ.ಸಿ.ನರೇಂದ್ರ, ಬಡಿಯಣ್ಣ, ವಿರೂಪಾಕ್ಷಪ್ಪ, ದೇವಾನಂದ್‌, ವೆಂಕಟಪ್ಪ ಗೌಡ, ಮಹೇಶ್‌, ಮಾರ್ತಾಂಡ, ಜಯಶ್ರೀ, ಸುರೇಶ್ಚಂದ್ರ, ನಾಗೇಶ್‌ ರಾವ್‌, ಚಂದ್ರಶೇಖರ್‌, ಶಶಿಧರ್‌, ಸೋಮಶೇಖರ್‌, ರಾಘವೇಂದ್ರ, ಭೀಮರಾವ್‌ ಮತ್ತಿತರರು ಹಾಜರಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ