ಆ್ಯಪ್ನಗರ

ಶಿಕ್ಷಣ, ಸಂಘಟನೆಯಿಂದ ಸಮಾಜದ ಅಭಿವೃದ್ಧಿ

ಆತ್ಮವಿಶ್ವಾಸ ಮತ್ತು ಕರ್ತವ್ಯದಲ್ಲಿ ಶ್ರದ್ಧೆ ಹೊಂದಿದ್ದರೆ ಯಾವುದೇ ಕೆಲಸವನ್ನು ಮಾಡಬಹುದಾಗಿದೆ ಎಂದು ಕರ್ನಾಟಕ ಭೋವಿ ಸಮಾಜ ವಿಕಾಸ ಸಂಘದ ಅಧ್ಯಕ್ಷ ಕೇಶವ್‌ ಆರ್‌. ಭೋವಿ ಹೇಳಿದರು.

Vijaya Karnataka 30 Jan 2019, 5:00 am
ಶೃಂಗೇರಿ: ಆತ್ಮವಿಶ್ವಾಸ ಮತ್ತು ಕರ್ತವ್ಯದಲ್ಲಿ ಶ್ರದ್ಧೆ ಹೊಂದಿದ್ದರೆ ಯಾವುದೇ ಕೆಲಸವನ್ನು ಮಾಡಬಹುದಾಗಿದೆ ಎಂದು ಕರ್ನಾಟಕ ಭೋವಿ ಸಮಾಜ ವಿಕಾಸ ಸಂಘದ ಅಧ್ಯಕ್ಷ ಕೇಶವ್‌ ಆರ್‌. ಭೋವಿ ಹೇಳಿದರು.
Vijaya Karnataka Web CKM-29SRI1


ತಾಲೂಕಿನ ಹೆಮ್ಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಮಲೆನಾಡು ಭೋವಿ ಸಂಘದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ವ್ರತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವು ಮಾಡುವ ಕೆಲಸ ಸಣ್ಣ ದಿರಲಿ, ದೊಡ್ಡದಿರಲಿ, ಅದನ್ನು ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಮಾಡಬೇಕು. ನಮ್ಮ ಸಂಘಟನೆ ಬಲಗೊಳ್ಳಲು ಸಮಾಜ ಬಾಂಧವರು ಸಂಘಕ್ಕೆ ಸದಸ್ಯರಾಗಬೇಕು ಎಂದರು.

ಸಂಘದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ ಮಾತನಾಡಿ, ಸಂಘವು ಈಗ ಸದೃಢವಾಗಿ ಬೆಳೆಯುತ್ತಿದ್ದು, ಇನ್ನಷ್ಟು ಗಟ್ಟಿಗೊಂಡರೆ ಸಮಾಜ ಬಾಂಧವರಿಗೆ ವಿವಿಧ ರೀತಿಯ ನೆರವು ನೀಡಲು ಸಾಧ್ಯವಾಗುತ್ತದೆ.ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಗುಣ ಮಟ್ಟದ ಶಿಕ್ಷ ಣ ಕೊಡಿಸಿ, ಹೆಚ್ಚು ಅಂಕ ಪಡೆಯುವತ್ತ ಪೋಷಕರು ಮಕ್ಕಳ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳು ಉನ್ನತ ಶಿಕ್ಷ ಣ ಪಡೆದು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ, ಉನ್ನತ ಹುದ್ದೆಯನ್ನು ಪಡೆದು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು.

ತಾಲೂಕು ಘಟಕದ ಅಧ್ಯಕ್ಷ ಕೆ.ಎಂ. ಶ್ರೀನಿವಾಸಮೂರ್ತಿ ಅಧ್ಯಕ್ಷ ತೆ ವಹಿಸಿದ್ದರು. ಸಮಾಜದ ಮುಖಂಡರಾದ ಸುರೇಶ್‌, ವಿಶ್ವನಾಥ್‌, ಎ.ರಮೇಶ್‌, ಕೆ.ಎ.ಶಂಕರಪ್ಪ,, ಟಿ.ವಿಶ್ವನಾಥ್‌, ಎಚ್‌.ಎಂ.ಸುರೇಶ್‌, ಬಿ.ಕೆ. ಶ್ರೀನಿವಾಸ್‌, ಎಂ.ವಿ. ಸುಬ್ರಹ್ಮಣ್ಯ ಹಾಜರಿದ್ದರು.

ಈ ಸಂದರ್ಭ ಎಂ.ವಿ.ಸುಬ್ರಹ್ಮಣ್ಯ, ಸವಿತಾ ನಾಗರಾಜ್‌,ಯಶೋಧಮ್ಮ, ಮಂಜುಳಾ ಚಂದ್ರಶೇಖರ್‌ ಅವರನ್ನು ಸನ್ಮಾನಿಸಲಾಯಿತು.

ಎಸ್‌.ಎಸ್‌.ಸುಬ್ರಹ್ಮಣ್ಯ ಸ್ವಾಗತಿಸಿ, ಎಂ.ವಿ. ಸುಬ್ರಹ್ಮಣ್ಯ ವರದಿ ವಾಚಿಸಿದರು. ಕೆ.ಎನ್‌.ಚೇತನ್‌ ನಿರೂಪಿಸಿ, ಎಸ್‌.ಎನ್‌.ಚಂದ್ರಶೇಖರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ