ಆ್ಯಪ್ನಗರ

ಶ್ರೀರಂಗ ಕಲ್ಯಾಣಕ್ಕೆ ಭಕ್ತ ಸಾಗರ

ಇತಿಹಾಸ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿ ಜಾತ್ರಾ ರಥೋತ್ಸವ ಭಕ್ತ ಸಾಗರದ ನಡುವೆ ಶುಕ್ರವಾರ ರಾತ್ರಿ ಪಟ್ಟಣದಲ್ಲಿನೆರವೇರಿತು.

Vijaya Karnataka 19 Jan 2020, 5:00 am
ವಿಕಸುದ್ದಿಲೋಕ,
Vijaya Karnataka Web 18ONKAR1_35

ಸಖರಾಯಪಟ್ಟಣ :
ಇತಿಹಾಸ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿ ಜಾತ್ರಾ ರಥೋತ್ಸವ ಭಕ್ತ ಸಾಗರದ ನಡುವೆ ಶುಕ್ರವಾರ ರಾತ್ರಿ ಪಟ್ಟಣದಲ್ಲಿನೆರವೇರಿತು.

ಸಂಕ್ರಾಂತಿ ಹಬ್ಬದಿಂದ ಮೂರು ದಿನಗಳ ಸತತವಾಗಿ ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಪ್ರತಿ ದಿನ ಪಂಚಾಮೃತ ಅಭಿಷೇಕ, ಮೊಲ ಬಿಡುವ ಸೇವೆ ಮತ್ತು ಉತ್ಸವಾದಿಗಳೊಂದಿಗೆ ಜನಮನ ಸೂರೆಗೊಂಡಿತ್ತು. ಶುಕ್ರವಾರ ಮಧ್ಯಾಹ್ನ ಶ್ರೀ ರಂಗನಾಥಸ್ವಾಮಿ ಉತ್ಸವವನ್ನು ಮೆರವಣಿಗೆಯಲ್ಲಿಗ್ರಾಮದ ಬಿಡದಿ ಮನೆಗೆ ಕರೆತಂದು ಪ್ರತಿಷ್ಠಾಪಿಸಲಾಯಿತು. ಶುಕ್ರವಾರ ರಾತ್ರಿ 10 ಗಂಟೆಗೆ ರಂಗನಾಥಸ್ವಾಮಿ ದೇವಾಲಯದಿಂದ ಶ್ರೀದೇವಿ ಮತ್ತು ಭೂದೇವಿ ಉತ್ಸವ ಮೂರ್ತಿಗಳನ್ನು ಬಿಡದಿ ಮನೆ ಸಮೀಪಕ್ಕೆ ಮೆರವಣಿಗೆಯಲ್ಲಿಕರೆತರಲಾಯಿತು. ನಂತರ ಶ್ರೀದೇವಿ ಭೂದೇವಿ ಎದುರುಗೊಂಡ ಅರ್ಚಕರು ದೇವಿಯವರೊಂದಿಗೆ ಮತ್ತು ರಂಗನಾಥಸ್ವಾಮಿಗೆ ಭಕ್ತರ ನಡುವೆ ಕಲ್ಯಾಣೋತ್ಸವ ಮಾಡಿದರು. ಉತ್ಸವದಲ್ಲಿಬಿಡದಿ ಮನೆಗೆ ತೆರಳಿದ ನಂತರ ವಿಗ್ರಹಗಳಿಗೆ ಪೂಜೆ ಸಲ್ಲಿಸಲಾಯಿತು. ಅಲಂಕೃತ ರಥದಲ್ಲಿದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಉಪಸಭಾಪತಿ ಎಸ್‌ ಎಲ್‌ ಧರ್ಮೇಗೌಡ, ವಿಧಾನ ಪರಿಷತ್‌ ಸದಸ್ಯ ಎಸ್‌ ಎಲ್‌ ಭೋಜೇಗೌಡ, ಜಿ.ಪಂ. ಸದಸ್ಯೆ ಶಕುಂತಲಾಮಲ್ಲಪ್ಪ, ತಾ.ಪಂ. ಸದಸ್ಯ ಆನಂದನಾಯ್ಕ, ಗ್ರಾ.ಪಂ. ವತಿಯಿಂದ ಅಧ್ಯಕ್ಷೆ ದಾಕ್ಷಾಯಣಮ್ಮ ಹಾಗೂ ಸದಸ್ಯರು, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌, ತಹಸಿಲ್ದಾರ್‌ ಉಮೇಶ್‌, ವೃತ್ತ ನಿರೀಕ್ಷಕ ಮಂಜುನಾಥ್‌ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು.

ನಂತರ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ದಾಸಯ್ಯಗಳು ಶಂಕು, ಜಾಗಟೆಗಳ ಸದ್ದು ಎಲ್ಲೆಲ್ಲೂಕೇಳಿಸುತ್ತಿತ್ತು. ನಾದಸ್ವರ ಮತ್ತು ಹಳ್ಳಿವಾದ್ಯಗಳ ಅಬ್ಬರ ಮುಗಿಲು ಮುಟ್ಟಿತ್ತು. ವಿವಿಧ ಬಣ್ಣದ ಸಿಡಿ ಮದ್ದುಗಳು ಬೆಳಕಿನ ಹಬ್ಬವನ್ನೇ ಸೃಷ್ಟಿಸಿದ್ದವು. ಭಕ್ತರು ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆದು ಸಂಭ್ರಮಿಸಿದರು. ದೊಡ್ಡ ರಥದಿಂದ ದೇವರನ್ನು ಸಣ್ಣ ರಥಕ್ಕೆ ಇರಿಸಿ ರಾಜ ಬೀದಿಗಳಲ್ಲಿಮೆರವಣಿಗೆಯೊಂದಿಗೆ ದೇವಾಲಯಕ್ಕೆ ಕರೆತರಲಾಯಿತು. ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ,ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ನಾನಾ ಮೂಲೆಗಳಿಂದ ಭಕ್ತರು ಸೇರಿದ್ದರು.

----------

ಬಿಸಿಲಿಗೆ ಬಳಲಿದ ಭಕ್ತರು

ಸಖರಾಯಪಟ್ಟಣದಲ್ಲಿಮೂರು ದಿನಗಳಿಂದ ನಡೆಯುತ್ತಿರುವ ಶ್ರೀ ಶಕುನ ರಂಗನಾಥಸ್ವಾಮಿ ಜಾತ್ರೆಗೆ ಮೂರನೇ ದಿನವಾದ ಜನಸ್ತೋಮ ಹೆಚ್ಚಾಗಿ ಸರತಿ ಸಾಲಿನಲ್ಲಿಭಕ್ತರನ್ನು ದರ್ಶನಕ್ಕೆ ಕಳುಹಿಸಲಾಯಿತು. ಸರತಿಯ ಸಾಲು ದೇವಾಲಯದಿಂದ ಹಿಡಿದು ಹಿರಿಯ ಪ್ರಾಥಮಿಕ ಶಾಲೆಯವರೆಗೆ ನಿಂತಿದ್ದರು. ಬಂದ ಭಕ್ತಾದಿಗಳಿಗೆ ಯಾವುದೇ ನೆರಳನ್ನು ಕಲ್ಪಿಸಿದೆ ಮುಜಾರಾಯಿ ಇಲಾಖೆಯವರು ನಿರ್ಲಕ್ಷಿಸಿದ್ದು, ಇದರ ಪರಿಣಾಮವಾಗಿ ಬಂದ ಭಕ್ತಾದಿಯೊಬ್ಬ ನಿತ್ರಾಣವಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದ. ಸ್ಥಳದಲ್ಲಿಯೇ ಇದ್ದವರು 108 ಕ್ಕೆ ಕರೆ ಮಾಡಿ ವಾಹನದಲ್ಲಿಆಸ್ಪತ್ರೆಗೆ ಕರೆದೊಯ್ದರು.ಇನ್ನು ಮುಂದಾದರೂ ಸರಿಯಾದ ಮೂಲ ವ್ಯವಸ್ಥೆಯನ್ನು ಮಾಡುವಂತಾಗಲಿ ಎಂದು ಬಂದ ಭಕ್ತಾದಿಗಳು ಕೇಳುತ್ತಿದ್ದರು.

-----------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ