ಆ್ಯಪ್ನಗರ

ಶಿಷ್ಠಾಚಾರ ಪಾಲಿಸದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ : ಜಯಣ್ಣ

ಸರಕಾರಿ ಕಾರ್ಯಕ್ರಮಗಳಲ್ಲಿ ತಾಲೂಕು ಪಂಚಾಯಿತಿ ಸದಸ್ಯರಿಗೆ ಆಹ್ವಾನ ನೀಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಪಾರಸು ಮಾಡುವುದಾಗಿ ತಾಲೂಕು ಪಂಚಾಯಿತಿ ಅಧ್ಯಕ್ಷ ನೆಟ್ಟೇಕೆರೆನಹಳ್ಳಿ ಜಯಣ್ಣ ಎಚ್ಚರಿಸಿದರು.

Vijaya Karnataka 14 Feb 2019, 5:00 am
ಚಿಕ್ಕಮಗಳೂರು : ಸರಕಾರಿ ಕಾರ್ಯಕ್ರಮಗಳಲ್ಲಿ ತಾಲೂಕು ಪಂಚಾಯಿತಿ ಸದಸ್ಯರಿಗೆ ಆಹ್ವಾನ ನೀಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಪಾರಸು ಮಾಡುವುದಾಗಿ ತಾಲೂಕು ಪಂಚಾಯಿತಿ ಅಧ್ಯಕ್ಷ ನೆಟ್ಟೇಕೆರೆನಹಳ್ಳಿ ಜಯಣ್ಣ ಎಚ್ಚರಿಸಿದರು.
Vijaya Karnataka Web CKM-13RUDRAP7


ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸದಸ್ಯರು ಎತ್ತಿದ ಆಕ್ಷೇಪಕ್ಕೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಈ ಮಧ್ಯೆ ಸದಸ್ಯ ಡಿ.ಜೆ. ಸುರೇಶ್‌ ಮಾತನಾಡಿ, ಇತ್ತೀಚೆಗೆ ನಡೆದ ಫಲಪುಷ್ಪ ಪ್ರದರ್ಶನಕ್ಕೆ ತಮಗೆ ಕಳುಹಿಸಿದ್ದ ಆಹ್ವಾನ ಪತ್ರಿಕೆ ಆ ಕಾರ್ಯಕ್ರಮ ಮುಗಿದ ಒಂದು ದಿನದ ನಂತರ ಬಂತು. ಅಧಿಕಾರಿಗಳು ದೂರವಾಣಿಯಲ್ಲಿ ನನಗೆ ಆಹ್ವಾನ ನೀಡಬಹುದಿತ್ತು. ಆ ರೀತಿ ಮಾಡದೆ ಕಡೆಗಣಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಾಗಿದೆ ಎಂದು ಸಿಡಿಮಿಡಿಗೊಂಡರು. ತನಗೂ ಇದೇ ರೀತಿ ಸಿರಿಧಾನ್ಯ ಸಾವಯವ ಮೇಳದಲ್ಲಿ ಆಹ್ವಾನ ನೀಡಿ ವೇದಿಕೆಗೆ ಕರೆಯದೆ ಅವಮಾನ ಮಾಡಿದರು ಎಂದು ದೂರಿದರು.

ಮಾಜಿ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್‌ ಮಾತನಾಡಿ, ಬೇಸಿಗೆ ಕಾಲ ಆರಂಭವಾಗಿದೆ. ಈಗಲೇ ಕೆಲವು ಕಡೆ ಕುಡಿವ ನೀರಿನ ಸಮಸ್ಯೆ ತಲೆದೋರಿದೆ.ಅಂತಹ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ತಾಲೂಕು ಮಟ್ಟದಲ್ಲಿ ಟೆಂಡರ್‌ ಕರೆಯದೆ ಆಯಾ ಪ್ರದೇಶಕ್ಕನುಗುಣವಾಗಿ ಟೆಂಡರ್‌ ಕರೆಯಬೇಕು.ಕೆಲವು ಕಡೆ ಅಂತರ್ಜಲ ಬತ್ತಿ ಹೋಗಿ ನೀರಿಗೆ ಕೊರñ æಕಂಡುಬಂದರೆ ಮತ್ತೆ ಕೆಲವು ಕಡೆ ವಿದ್ಯುತ್‌ ಸಮಸ್ಯೆಯಿಂದ ನೀರು ಕೊಡಲಾಗುತ್ತಿಲ್ಲ. ವಿದ್ಯುತ್‌ ವೋಲ್ಟೇಜ್‌ ಸಮಸ್ಯೆಯಿಂದ ನೀರು ನೀಡಲು ಸಾಧ್ಯವಾಗುತ್ತಿಲ್ಲ ಮೇಸ್ಕಾಂ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಎಂಜಿನಿಯರ್‌ ವೇಣುಗೋಪಾಲ್‌ ಮಾತನಾಡಿ, ನೀರು ಸರಬರಾಜು ಇಲಾಖೆ ಮೆಸ್ಕಾಂಗೆ 2.50 ಕೋಟಿ ರೂ.ಬಾಕಿ ಕೊಡಬೇಕು. ಹಳೆ ಬಾಕಿ ನೀಡದೆ ಹೊಸ ಕೆಲಸ ಸಾಧ್ಯವಿಲ್ಲ ಎಂದು ಮೆಸ್ಕಾಂ ತಿಳಿಸಿದೆ. ಈ ಬಗ್ಗೆ ಸರಕಾರಕ್ಕೆ ಬರೆಯಲಾಗಿದೆ ಎಂದರು. ತಾ.ಪಂ. ಸದಸ್ಯ ಸುರೇಶ್‌ ಮಾತನಾಡಿ, ತಾಲೂಕಿನ ಅನೇಕ ಶುದ್ಧಗಂಗಾ ಘಟಕಗಳು ಕೆಲಸ ಮಾಡುತ್ತಿಲ್ಲ, ಅಧಿಕಾರಿಗಳು ಪರಿಶೀಲಿಸದೆ ಸರಿಯಾಗಿದೆ ಎಂದು ಹೇಳುತ್ತಾರೆ ಎಂದರು. ಈ ಬಗ್ಗೆ ಅಧಿಕಾರಿಗಳು ಖುದ್ಧು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಜಯಣ್ಣ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ