ಆ್ಯಪ್ನಗರ

ಆಧುನಿಕ ಕೃಷಿ ಪದ್ದತಿಯಿಂದ ಕಾಯಿಲೆಗೆ ತುತ್ತು

ಸಂಪ್ರಾದಾಯಿಕ ಕೃಷಿ ಬಿಟ್ಟು, ಆಧುನಿಕ ಕೃಷಿಗೆ ರೈತರು ಮೊರೆ ಹೋದ ಕಾರಣ ಜನ ಇಂದು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹೋಲಿಕ್ರಾಸ್‌ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್‌ ಜೋಬಿನಾ ಹೇಳಿದರು.

Vijaya Karnataka 31 May 2019, 5:00 am
ಚಿಕ್ಕಮಗಳೂರು: ಸಂಪ್ರಾದಾಯಿಕ ಕೃಷಿ ಬಿಟ್ಟು, ಆಧುನಿಕ ಕೃಷಿಗೆ ರೈತರು ಮೊರೆ ಹೋದ ಕಾರಣ ಜನ ಇಂದು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹೋಲಿಕ್ರಾಸ್‌ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್‌ ಜೋಬಿನಾ ಹೇಳಿದರು.
Vijaya Karnataka Web disease from modern farming system
ಆಧುನಿಕ ಕೃಷಿ ಪದ್ದತಿಯಿಂದ ಕಾಯಿಲೆಗೆ ತುತ್ತು


ನಗರದ ವಿವಿಧೋದ್ದೇಶ ಸಮಾಜ ಸೇವಾ ಸಂಸ್ಥೆ (ಸಿಎಂಎಸ್‌ಎಸ್‌ಎಸ್‌) ವಿಭಾಗೀಯ ಕಚೇರಿಯಲ್ಲಿ 50 ರೈತ ಮಹಿಳೆಯರಿಗೆ ಸಾವಯುವ ಕೃಷಿ ಪದ್ಧತಿಯಲ್ಲಿ ಕೈತೋಟ ಮಾಡುವ ಬಗ್ಗೆ ಮಾಹಿತಿ ನೀಡಿ ತರಕಾರಿ ಬೀಜ, ಪಪ್ಪಾಯಿ ಮತ್ತು ನುಗ್ಗೆ ಸಸಿಗಳನ್ನು ವಿತರಿಸಿ ಮಾತನಾಡಿದರು.

ಆಧುನಿಕ ಕೃಷಿ ಪದ್ಧತಿಯಲ್ಲಿ ಹೆಚ್ಚಿನ ಪ್ರಮಾಣದ ರಾಸಾಯನಿಕ, ಕೀಟನಾಶಕಗಳನ್ನು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ದಿನನಿತ್ಯ ಬಳಕೆ ಮಾಡುವ ತರಕಾರಿ ಹಾಗೂ ಸೊಪ್ಪನ್ನು ಕೈತೋಟದಲ್ಲಿ ಬೆಳೆಸಿ ಆದಷ್ಟು ಉಪಯೋಗಿಸುವುದು ಒಳ್ಳೆಯದು ಎಂದರು.

ಅಧಿಕಾರಿ ಪ್ರವೀಣ್‌ ಮಾತನಾಡಿ, ಮಹಿಳಾ ಸಬಲೀಕರಣ, ಮಹಿಳೆಯರ ಆದಾಯ ಹೆಚ್ಚಿಸುವ ಯೋಜನೆ, ದಿವ್ಯಾಂಗ ಚೇತನ ತರಬೇತಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ, ಕುಟುಂಬ ಅಭಿವೃದ್ಧಿ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸಂಸ್ಥೆಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಪೂಜಿತ ಕೈತೋಟ ಮಾಡುವ ವಿಧಾನದ ಬಗ್ಗೆ ಮಾಹಿತಿ ನೀಡಿದರು. ಲೈಸಾ ಕಾರ್ಯಕ್ರಮ ನಿರೂಪಿಸಿ, ಶಾಲಿನಿ ಸ್ವಾಗತಿಸಿದರು. ಲಾಯಿಸ್‌ ವಂದಿಸಿದರು. ಕಾರ್ಯಕ್ರಮದಲ್ಲಿ 50 ಮಹಿಳೆಯರಿಗೆ ತರಕಾರಿ ಬೀಜ, ಪಪ್ಪಾಯಿ ಮತ್ತು ನುಗ್ಗಿ ಸಸಿಗಳನ್ನು ವಿತರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ