ಯುವ ಜನರಿಂದ ಜಿಲ್ಲಾಸ್ಪತ್ರೆ ಆವರಣ ಸ್ವಚ್ಛತೆ
ನೆಹರು ಯುವ ಕೇಂದ್ರ ಮತ್ತು ವಂದೇ ಮಾತರಂ ಟ್ರಸ್ಟ್ ಕಾರ್ಯಕರ್ತರು ಭಾನುವಾರ ಜಿಲ್ಲಾಸ್ಪತ್ರೆ ಆವರಣವನ್ನು ಸ್ವಚ್ಛಗೊಳಿಸಿದರು.
Vijaya Karnataka 24 May 2018, 5:00 am
ಚಿಕ್ಕಮಗಳೂರು :ನೆಹರು ಯುವ ಕೇಂದ್ರ ಮತ್ತು ವಂದೇ ಮಾತರಂ ಟ್ರಸ್ಟ್ ಕಾರ್ಯಕರ್ತರು ಭಾನುವಾರ ಜಿಲ್ಲಾಸ್ಪತ್ರೆ ಆವರಣವನ್ನು ಸ್ವಚ್ಛಗೊಳಿಸಿದರು.
ಎನ್ವೈಕೆ ಯ ಯುವದಳ ಕಾರ್ಯಕರ್ತರು ಹಾಗೂ ವಂದೇಮಾತರಂ ಟ್ರಸ್ಟ್ನ ಹಲವಾರು ಕಾರ್ಯಕರ್ತರು ಕೈಗೆ ಗ್ಲೋಸ್ ಹಾಕಿಕೊಂಡು ಪೊರಕೆ ಹಿಡಿದು ಆಸ್ಪತ್ರೆ ಆವರಣವನ್ನು ಗುಡಿಸಿ ಸ್ವಚ್ಛಗೊಳಿಸಿದರು. ಆಸ್ಪತ್ರೆ ಪರಿಸರದಲ್ಲಿ ಬೆಳೆದಿದ್ದ ಮುಳ್ಳು ಕಂಟಿಗಳನ್ನು ಕತ್ತರಿಸಿ ಗುಡ್ಡೇಹಾಕಿದರು. ಈ ಸಂದರ್ಭ ಜಿಲ್ಲಾ ಸರ್ಜನ್ ಡಾ.ದೊಡ್ಡಮಲ್ಲಪ್ಪ ಅವರು ಸ್ಥಳಕ್ಕಾಗಮಿಸಿ ಯುವಜನತೆಯ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ವಂದೇ ಮಾತರಂ ಟ್ರಸ್ಟ್ ಕಾರ್ಯದರ್ಶಿ ರಂಜಿತ್ ಶೆಟ್ಟಿ, ಯುವ ಮುಖಂಡರಾದ ರೋಹನ್, ಶರತ್, ಮತ್ತಿತರೆ ಪದಾಧಿಕಾರಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವದಳ ಕಾರ್ಯಕರ್ತರಾದ ರವಿಚಂದ್ರ, ತೇಜ, ಅಬ್ದುಲ್ ನಾಜಿಮ್, ವಿದ್ಯಾಶ್ರಿ, ಉಷಾ ಮತ್ತಿತರರು ಹಾಜರಿದ್ದರು.
ಎನ್ವೈಕೆ ಯ ಯುವದಳ ಕಾರ್ಯಕರ್ತರು ಹಾಗೂ ವಂದೇಮಾತರಂ ಟ್ರಸ್ಟ್ನ ಹಲವಾರು ಕಾರ್ಯಕರ್ತರು ಕೈಗೆ ಗ್ಲೋಸ್ ಹಾಕಿಕೊಂಡು ಪೊರಕೆ ಹಿಡಿದು ಆಸ್ಪತ್ರೆ ಆವರಣವನ್ನು ಗುಡಿಸಿ ಸ್ವಚ್ಛಗೊಳಿಸಿದರು. ಆಸ್ಪತ್ರೆ ಪರಿಸರದಲ್ಲಿ ಬೆಳೆದಿದ್ದ ಮುಳ್ಳು ಕಂಟಿಗಳನ್ನು ಕತ್ತರಿಸಿ ಗುಡ್ಡೇಹಾಕಿದರು. ಈ ಸಂದರ್ಭ ಜಿಲ್ಲಾ ಸರ್ಜನ್ ಡಾ.ದೊಡ್ಡಮಲ್ಲಪ್ಪ ಅವರು ಸ್ಥಳಕ್ಕಾಗಮಿಸಿ ಯುವಜನತೆಯ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ವಂದೇ ಮಾತರಂ ಟ್ರಸ್ಟ್ ಕಾರ್ಯದರ್ಶಿ ರಂಜಿತ್ ಶೆಟ್ಟಿ, ಯುವ ಮುಖಂಡರಾದ ರೋಹನ್, ಶರತ್, ಮತ್ತಿತರೆ ಪದಾಧಿಕಾರಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವದಳ ಕಾರ್ಯಕರ್ತರಾದ ರವಿಚಂದ್ರ, ತೇಜ, ಅಬ್ದುಲ್ ನಾಜಿಮ್, ವಿದ್ಯಾಶ್ರಿ, ಉಷಾ ಮತ್ತಿತರರು ಹಾಜರಿದ್ದರು.